This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

State News

ಸರ್ಕಾರಿ ಸಭೆ ಸಮಾರಂಭ, ಕಾರ್ಯಕ್ರಮ ಗಳಲ್ಲಿ ಹೂಗುಚ್ಚ, ಹಾರ,ಶಾಲು ನಿಷೇಧ – ಕನ್ನಡ ಪುಸ್ತಕ ನೀಡಲು ಆದೇಶ – CM ಮಹತ್ವದ ಆದೇಶ…..

WhatsApp Group Join Now
Telegram Group Join Now

ಬೆಂಗಳೂರು –

ಇನ್ನೂ ಮುಂದೆ ಸರ್ಕಾರಿ ಕಾರ್ಯಕ್ರಮ,ಸಭೆಗಳಲ್ಲಿ ಹೂಗುಚ್ಛ,ಹಾರ,ಶಾಲನ್ನು ನಿಷೇಧವನ್ನು ಮಾಡಿ CM ಬಸವರಾಜ ಬೊಮ್ಮಾಯಿ ಅದೇಶ ಮಾಡಿ ದ್ದಾರೆ.ಇದರ ಬದಲಿಗೆ ಕನ್ನಡ ಪುಸ್ತಕ ಗಳನ್ನು ನೀಡುವಂತೆ ಹೊಸದೊಂದು ಆದೇಶವನ್ನು ಮಾಡಿದ್ದಾರೆ

ಹೌದು ಒಂದು ಕಡೆ ಅನಾವಶ್ಯಕ ಖರ್ಚು ಮತ್ತೊಂ ದೆಡೆ ಅದರಿಂದ ಯಾವುದೇ ರೀತಿಯ ಉಪಯೋಗ ವಿಲ್ಲ ಹೀಗಾಗಿ ಸಭೆಗಳಲ್ಲಿ ಹೂಗುಚ್ಛ,ಹಾರ, ಶಾಲುಗ ಳನ್ನು ನೀಡುವುದನ್ನು ನಿಷೇಧಿಸಿ ಆದೇಶವನ್ನು ಹೊರಡಿಸಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಗೆ ಆಗಮಿ ಸಿದ ಮುಖ್ಯಮಂತ್ರಿಗಳು, ಹೂಗುಚ್ಛ ಸ್ವೀಕರಿಸಲು ನಿರಾಕರಿಸಿದರು.ಇದು ಅನವಶ್ಯಕ ವೆಚ್ಚ.ಸಭೆಗಳಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಹೂಗುಚ್ಛ,ಹಾರ, ಶಾಲು ಗಳನ್ನು ನೀಡುವ ಅಗತ್ಯವಿಲ್ಲ.ಇನ್ನು ಮುಂದೆ ಆ ಸಂಪ್ರದಾಯ ಬೇಡ ಎಂದು ಅವರು ತಿಳಿಸುತ್ತಲೇ ಅತ್ತ ಆದೇಶ ಕೂಡಾ ಹೊರಗೆ ಬಂದಿತು

ಸಿಎಂ ಈ ಆದೇಶವನ್ನು ಮೌಖಿಕವಾಗಿ ಹೇಳಿದ ತಕ್ಷಣ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ಸರ್ಕಾರಿ ಆದೇಶ ಜಾರಿ ಮಾಡಿದರು.ಇನ್ನು ಮುಂದೆ ಹೂ ಗುಚ್ಚದ ಬದಲಿಗೆ ಕನ್ನಡ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.


Google News

 

 

WhatsApp Group Join Now
Telegram Group Join Now
Suddi Sante Desk