ದೇವನಹಳ್ಳಿ –
ಆರೋಗ್ಯ ಸಚಿವ ಡಾ ಕೆ ಸುಧಾಕರ್ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಕೂಡಾ ಮಾನವೀಯತೆ ಮೆರೆದಿದ್ದಾರೆ.ಹೌದು ಅಪಘಾತದಲ್ಲಿ ಸಿಲುಕಿದ ಗಾಯಾಳು ವಿನ ನೆರವಿಗೆ ಧಾವಿಸುವ ಮೂಲಕ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮಾನವೀಯತೆ ಮೆರೆದಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಹೊರವಲಯದ ರಾಷ್ಟ್ರೀ ಯ ಹೆದ್ದಾರಿ 7 ರಲ್ಲಿ ಸಚಿವ ಸುಧಾಕರ್ , ತೆರಳುತ್ತಿ ದ್ದಾಗ ಬೈಕ್ ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿತ್ತು . ಬೈಕ್ ನಲ್ಲಿದ್ದ ಮಹಿಳೆ ಮತ್ತು ಸವಾರ ಟಿಪ್ಪರ್ ನಡುವೆ ಸಿಲುಕಿ ಪರದಾಡುತ್ತಿದ್ದರು.ಅಪಘಾತ ಕಂಡ ಕೂಡಲೆ ಕಾರು ನಿಲ್ಲಿಸಿ ಗಾಯಾಳುಗಳ ನೆರವಾಗಿದ್ದಾರೆ ಸಚಿವರು.
ಅಪಘಾತ ಸ್ಥಳಕ್ಕೆ ಬಂದ ಸಚಿವ ಸುಧಾಕರ್ ಕೂಡಲೆ ಆಂಬುಲೆನ್ಸ್ ಗೆ ತಾವೇ ಸ್ವತಃ ಕರೆ ಮಾಡಿ ಗಾಯಗಳನ್ನು ಆಸ್ವತ್ರೆಗೆ ರವಾನಿಸಿದ್ದಾರೆ.ಅಲ್ಲದೇ ವೈದ್ಯರಿಗೆ ಕರೆ ಮಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ಕೂಡ ಕೊಟ್ಟಿದ್ದಾರೆ. ಇದರೊಂದಿಗೆ ಸಚಿವರು ಇನ್ನು ಸಚಿವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ