ಉಡುಪಿ –
ಗುಜರಿಗೆ ಸೇರಬೇಕಾಗಿದ್ದ KSRTC ಯ ಹಳೆಯ ಬಸ್ ವೊಂದು ಈಗ ಗ್ರಾಮೀಣ ಮಕ್ಕಳಿಗೆ ಅಕ್ಷರ ಕಲಿಕೆಯ ತಾಣವಾಗಿದೆ.ಹಳೆಯ ಬಸ್ ಅನ್ನು ಗ್ರಾಮೀಣ ಕಲಾವಿ ದರು ಹೈಟೆಕ್ ಸ್ಮಾರ್ಟ್ಕ್ಲಾಸ್’ ಆಗಿ ಪರಿವರ್ತಿಸಿದ್ದಾರೆ. ಪ್ರಶಾಂತ್ ಆಚಾರ್ ಹಾಗೂ ಪ್ರಕಾಶ್ ಸಹೋದರರು ಸೇರಿಕೊಂಡು ಈಗ ಬಸ್ ಅನ್ನು ಶಾಲಾ ಕೊಠಡಿಯಾಗಿ ಪರಿವರ್ತಿಸಿದ್ದಾರೆ.ಮೆಕ್ಯಾನಿಕ್ ಆದ ಪ್ರಕಾಶ್ ಅವರು ಬಸ್ ನ ಒಳಭಾಗವನ್ನು ಶಾಲಾ ಕೊಠಡಿಯಂತೆ ರೂಪಿಸಿದ್ದಾರೆ. ಇವರ ತಮ್ಮ ಕಲಾವಿದ ಪ್ರಶಾಂತ್ ಆಚಾರ್ ಅವರು ಬಸ್ನ ಹೊರಭಾಗ ಮತ್ತು ಒಳಾಂಗಣವನ್ನು ಆಕರ್ಷಕ ವಾಗಿ ವಿನ್ಯಾಸಗೊಳಿಸಿದ್ದಾರೆ.

ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕು ಬಗ್ವಾಡಿ ಗ್ರಾಮ ದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಹೈಟೆಕ್ ಸ್ಮಾರ್ಟ್ ಕ್ಲಾಸ್ ಇಂದು ಉದ್ಘಾಟನೆಗೊಳ್ಳಲಿದೆ. ಕೋವಿಡ್ ಲಾಕ್ಡೌನ್ ವೇಳೆಯಲ್ಲಿ ಈ ಸಹೋದರರು ಬಸ್ ಅನ್ನು ಶಾಲಾ ಕೊಠಡಿಯಾಗಿ ಪರಿವರ್ತಿಸಿದ ಮಾದರಿ ತಯಾರಿಸಿದ್ದರು.
ಬಸ್ನಲ್ಲಿ ಚಾಲಕನ ಆಸನ, ಇತರ ವ್ಯವಸ್ಥೆಗಳು ಮೂಲ ಸ್ವರೂಪದಲ್ಲೇ ಇವೆ.ಉಳಿದಂತೆ 25 ವಿದ್ಯಾರ್ಥಿಗಳು ಕುಳಿತುಕೊಳ್ಳುವಂತೆ ಬದಲಿಸಲಾಗಿದೆ.ಪಾಠ ಬೋಧನೆಗೆ ಪ್ರೊಜೆಕ್ಟರ್ ಇದೆ.ಕಿಟಕಿಗಳ ಮೇಲಿನ ಭಾಗದ ಗಾಜಿಗೆ ಸ್ವಾತಂತ್ರ್ಯ ಹೋರಾಟಗಾರರು ಸಮಾಜ ಸುಧಾರಕರು, ಸಾಹಿತಿಗಳ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಗ್ರಂಥಾಲಯದ ವ್ಯವಸ್ಥೆಯೂ ಇದೆ.ಫ್ಯಾನ್ ಕೈ ತೊಳೆ ಯಲು ಬೇಸಿನ್ ವ್ಯವಸ್ಥೆಯನ್ನು ಈ ‘ಸ್ಮಾರ್ಟ್ ಕ್ಲಾಸ್’ನಲ್ಲಿ ಕಾಣಬಹುದು.ಕರಾವಳಿ ಪರಂಪರೆಯನ್ನು ಬಿಂಬಿಸುವ ರಥೋತ್ಸವ ಯಕ್ಷಗಾನ, ಕೋಲದ ಚಿತ್ರಗಳಿವೆ.ನಮ್ಮೂರ ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಳಕ್ಕೆ ಇದು ವಿನೂತನ ಪ್ರಯತ್ನವಾಗಿದೆ.ಪ್ಲೈವುಡ್,ಮ್ಯಾಟ್ ಜೋಡಣೆ ಪೇಟಿಂಗ್ ಸೇರಿದಂತೆ ಅಂದಾಜು ₹2 ಲಕ್ಷದವರೆಗೆ ಖರ್ಚಾ ಗಿದೆ ಎಂದು ಸಹೋದರರು ತಿಳಿಸಿದ್ದಾರೆ.ಈ ಶಾಲೆಯಲ್ಲಿ ಹಿಂದೆ 40 ಮಕ್ಕಳಿದ್ದವು.ಈಗ ಇದೀಗ 87 ಮಕ್ಕಳು ಇವೆ. ಶಾಲೆಗೆ ಅಗತ್ಯ ಶಿಕ್ಷಕರ ಹಾಗೂ ಕೊಠಡಿ ಕೊರತೆ ಇದೆ. ಸರ್ಕಾರ ಇತ್ತ ಗಮನಿಸಬೇಕು ಎಂದು ಗ್ರಾಮಸ್ಥರು ಒತ್ತಾಯ ವನ್ನು ಮಾಡಿದ್ದಾರೆ.