ಹೊಳಲ್ಕೆರೆ –
ಸಧ್ಯ ರಾಜ್ಯದಲ್ಲಿ ನಡೆಯುತ್ತಿರುವ SIR ಕಾರ್ಯದ ಕುರಿತು ಹತ್ತು ಹಲವಾರು ಗೊಂದಲ ಗಳು ನಡೆದಿದ್ದು ಈ ಒಂದು ಎಸ್ಐಆರ್ ಕುರಿತು ಇನ್ನೂ ಹಲವು ಗೊಂದಲಗಳು ಇರುವ ನಡುವೆಯೇ ಹೊಳಲ್ಕೆರೆ ತಾಲ್ಲೂಕಿನ ಅಮೃತಾಪುರ ಶಾಲೆಯ ಶಿಕ್ಷಕ ಟಿ.ಪಿ. ಉಮೇಶ್ ಎಂಬುವರು ತಮ್ಮ ಗ್ರಾಮದಲ್ಲಿರುವ 1,200 ಮತದಾರರ ಮಾಹಿತಿ ಅಪ್ಲೋಡ್ ಮಾಡುವ ಮೂಲಕ ಎಸ್ಐಆರ್ ಕಾರ್ಯ ಪೂರ್ಣಗೊಳಿಸಿದ ಜಿಲ್ಲೆಯ ಪ್ರಥಮ ಶಿಕ್ಷಕ ಎನಿಸಿಕೊಂಡಿದ್ದಾರೆ.
ಗ್ರಾಮದಲ್ಲಿ 1,200 ಮತದಾರರಿದ್ದು, ಮೂವರು ಮೃತಪಟ್ಟಿ ದ್ದಾರೆ. ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಗೆ ಒಂದು ತಿಂಗಳು ಕಾಲಾವಕಾಶ ಇದ್ದರೂ, ವಿದ್ಯಾರ್ಥಿಗಳ ಪಾಠ, ಪ್ರವಚನಕ್ಕೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಒಂದೇ ವಾರದಲ್ಲಿ ಎಸ್ಐಆರ್ ಮುಗಿಸುವ ಗುರಿಯೊಂದಿಗೆ ಕೆಲಸ ಮಾಡಿದೆ. ಹಗಲೂ, ರಾತ್ರಿ ಶ್ರಮ ವಹಿಸಿ ಕೆಲಸ ಮಾಡಿದ್ದರಿಂದ ಐದೇ ದಿನದಲ್ಲಿ ಪೂರ್ಣಗೊಳಿಸಲು ಸಾಧ್ಯವಾಯಿತುನಿತ್ಯ ಬೆಳಗಿನ ಜಾವ 5 ರಿಂದ ರಾತ್ರಿ 12ರವರೆಗೆ ಕೆಲಸ ಮಾಡಿದ್ದೇನೆ’ ಎಂದರು
ಎಸ್ಐಆರ್ ಆರಂಭವಾದ ಮೊದಲ ದಿನವೇ 1,200 ಫಾರಂ ಗಳನ್ನು ವಿತರಣೆ ಮಾಡಿದೆ. ಡಂಗೂರ ಹೊಡೆಸುವ ಮೂಲಕ ಜನರಿಗೆ ಎಸ್ಐಆರ್ ಬಗ್ಗೆ ಜಾಗೃತಿ ಮೂಡಿಸಿದೆ. ನಾನೂ ಮೈಕ್ ಹಿಡಿದು ಪ್ರಚಾರ ಮಾಡಿದೆ. ಪ್ರತಿ ಮನೆಗೆ ತೆರಳಿ ಮಾಹಿತಿ ಕಲೆ ಹಾಕಿದೆ. ರಾತ್ರಿ ವೇಳೆ ಆಯಪ್ನಲ್ಲಿ ಮಾಹಿತಿ ಅಪ್ಲೋಡ್ ಮಾಡುತ್ತಿದ್ದೆ. ಐದು ದಿನ ಊರಿಗೆ ಹೋಗದೆ ಶಾಲೆಯಲ್ಲೇ ಉಳಿದುಕೊಂಡು ಕೆಲಸ ಮಾಡಿದೆ. ಗ್ರಾಮದ ಜನ ನನಗೆ ಊಟ, ನೀರು ತಂದು ಕೊಡುತ್ತಿದ್ದರು ಎಂದರು.
ಎಸ್ಐಆರ್ ಮಾಡುವುದು ಕಷ್ಟವೇನಲ್ಲ. ಸಾಮಾನ್ಯವಾಗಿ ಶಿಕ್ಷಕರಿಗೆ (ಬಿಎಲ್ಒ) ಸ್ಥಳೀಯರ ಪರಿಚಯ ಇರುತ್ತದೆ. ಎಲ್ಲ ಮನೆಯ ಮತದಾರರ ಮಾಹಿತಿ ಇರುತ್ತದೆ. ಮದುವೆಯಾದ ಮಹಿಳೆಯರ ಮತಗಳನ್ನು ಪತಿಯ ಗ್ರಾಮಕ್ಕೆ ಶಿಫ್ಟ್ ಮಾಡುವುದು ಇಲ್ಲಿಗೆ ಮದುವೆಯಾಗಿ ಬಂದ ಮಹಿಳೆಯರ ಹೆಸರುಗಳ ಸೇರ್ಪಡೆ ಕಾರ್ಯವನ್ನು ಈಗಾಗಲೇ ಮಾಡಲಾಗಿತ್ತು. ಆಯಪ್ನಲ್ಲಿ ಶೇ 80ರಷ್ಟು ಮಾಹಿತಿ ಇರುತ್ತದೆ. ಉಳಿದ ಕೆಲವು ಮತದಾರರ ಸೇರ್ಪಡೆ ಹಾಗೂ ತೆಗೆಯುವ ಕಾರ್ಯವನ್ನಷ್ಟೇ ಮಾಡಬೇಕಿದೆ.
ಆಯಪ್ನಲ್ಲಿ ಎಲ್ಲ ಮಾಹಿತಿ ತುಂಬುವುದು ಕಡ್ಡಾಯವಲ್ಲ. ಇದರಲ್ಲಿ ರಿ ಎಡಿಟ್ ಆಪ್ಷನ್ ಇದ್ದು, ಆಧಾರ್ ಸಂಖ್ಯೆ ಸೇರಿ ಕೆಲವು ಮಾಹಿತಿಗಳನ್ನು ನಂತರವೂ ತುಂಬಬಹುದು. ಯಾವುದೋ ಒಂದು ದಾಖಲೆ ಇಲ್ಲವೆಂದು ಒಂದೇ ಮನೆಯ ಮುಂದೆ ಕಾಲಹರಣ ಮಾಡಬಾರದು’ ಎಂದು ಬಿಎಲ್ಒಗಳಿಗೆ ಸಲಹೆ ನೀಡಿದರು.
‘ಗ್ರಾಮೀಣ ಭಾಗದಲ್ಲಿ ರೈತರು, ಕೂಲಿ ಕಾರ್ಮಿಕರು ಹೆಚ್ಚಾಗಿದ್ದು, ಹಗಲಿನಲ್ಲಿ ಹೊಲ, ತೋಟಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಆದ್ದರಿಂದ ಬೆಳಿಗ್ಗೆ ಹಾಗೂ ಸಂಜೆ ಮನೆಗೆ ಹೋದರೆ ಸಿಗುತ್ತಾರೆ. ಫೋಟೊ ಸ್ಪಷ್ಟವಾಗಿಲ್ಲದಿದ್ದರೆ ಮಾತ್ರ ಹೊಸ ಫೋಟೊ ಅಪ್ಲೋಡ್ ಮಾಡಬೇಕು. ಹಳ್ಳಿ ಜನ ಫೋಟೊ ತೆಗೆಸಲು ಪಟ್ಟಣಕ್ಕೆ ಹೋಗಬೇಕಿದ್ದು, ನೂರಾರು ರೂಪಾಯಿ ಖರ್ಚಾ ಗುತ್ತದೆ. ಆದ್ದರಿಂದ ನಾನೇ ಮೊಬೈಲ್ನಲ್ಲಿ ಫೋಟೊ ತೆಗೆದು ಅಪ್ಲೋಡ್ ಮಾಡುತ್ತಿದ್ದೆ. ಮುಖ್ಯವಾಗಿ ನಕಲಿ ಮತದಾರರು, ಎರಡು ಕಡೆ ಮತ ಹೊಂದಿರುವವರು, ಅಪರಿಚಿತರ ಮತಗಳ ಪರಿಷ್ಕರಣೆಗೆ ಮಹತ್ವ ನೀಡಬೇಕಿದೆ’ ಎಂದರು.
ಸುದ್ದಿ ಸಂತೆ ನ್ಯೂಸ್ ಹೊಳಲ್ಕೆರೆ…..



