ತುಮಕೂರು –
ತುಮಕೂರು ವಿಶ್ವವಿದ್ಯಾಲಯ ನೂತನ ಕುಲಪತಿಯಾಗಿ ಕುವೆಂಪು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಎಂ.ವೆಂಕಟೇಶ್ವರಲು ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಮಾಡಿದ್ದಾರೆ.ಎಂ. ವೆಂಕಟೇ ಶ್ವರಲು ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದ್ದು ನೇಮಕಕ್ಕೆ ಸಮುದಾಯ ಹಾಗೂ ಸಂಘ ಪರಿವಾರದ ಒತ್ತಡವೂ ಕಾರಣವಾಗಿದೆ
ಕುಲಪತಿಗಳ ಅಧಿಕಾರ ಅವಧಿ 4 ವರ್ಷಗಳಾಗಿದ್ದು ಕುವೆಂಪು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದು ಅದೇ ವಿ.ವಿ.ಯಲ್ಲಿ ಹಿಂದೆ ದೂರ ಶಿಕ್ಷಣ ಕೇಂದ್ರದ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದರು
ಇನ್ನೂ ಈ ಹಿಂದೆ ತುಮಕೂರು ವಿಶ್ವವಿದ್ಯಾಲಯದ ಕುಲ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು ಆಡಳಿತದ ಅನುಭವ ವನ್ನು ಬಲ್ಲವರಾಗಿದ್ದಾರೆ.