This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಕರಿಗೌಡರಿಗೆ ಬೆಂಗಳೂರಿನ ದಾರಿ ತೋರಿಸಿದ ಧಾರವಾಡ ಜಿಲ್ಲಾ ಪಂಚಾಯತ CEO – ಬೆಂಗಳೂರಿನಲ್ಲಿ ಕರಿಗೌಡರ ಹೊಸ ಆಟ ಏನು ಗೊತ್ತಾ…..

WhatsApp Group Join Now
Telegram Group Join Now

ಧಾರವಾಡ

ಎರಡು ದಿನಗಳ ಹಿಂದೆಯಷ್ಟೇ ನ್ಯಾಯಾಲಯದಿಂದ ಆದೇಶವನ್ನು ತಗೆದುಕೊಂಡು ಬಂದು ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಯಾಗಿ ಅಧಿಕಾರವನ್ನು ವಹಿಸಿಕೊಂಡಿದ್ದ ಡಾ ಬಸನಗೌಡ ಕರಿಗೌಡರಿಗೆ ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾ ಧಿಕಾರಿ ಡಾ ಸುರೇಶ ಇಟ್ನಾಳ್ ಬೆಂಗಳೂರಿನ ದಾರಿ ತೋರಿಸಿದ್ದಾರೆ.

ಹೌದು ನ್ಯಾಯಾಲಯದ ಆದೇಶ ಏನೋ ಸರಿ ಆದರೆ ರಾಜ್ಯ ಸರ್ಕಾರದಿಂದ ಈ ಕುರಿತಂತೆ ಅಧಿಕೃತವಾಗಿ ಹೊಸದೊಂದು ಆದೇಶವನ್ನು ತಗೆದುಕೊಂಡು ಬನ್ನಿ ಎಂಬ ಸಂದೇಶವನ್ನು ಡಾ ಸುರೇಶ್ ಇಟ್ನಾಳ್ ನೀಡಿದ್ದಾರೆ.ಹೀಗಾಗಿ ಶನಿವಾರ ಸಂಜೆ ಧಾರವಾಡ ಡಿಹೆಚ್ಓ ಕಚೇರಿಗೆ ಬಂದು ಅಧಿಕಾರವನ್ನು ವಹಿಸಿಕೊಂಡ ನಂತರ ಈ ಕುರಿತಂತೆ ಖಡಕ್ ಸೂಚನೆಯನ್ನು ನೀಡಿದರು.

ಸಧ್ಯ ನೀವು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಆದೇಶದಂತೆ ಅಧಿಕಾರವನ್ನು ವಹಿಸಿಕೊಂಡಿದ್ದಿರಿ ಆದರೆ ಇದು ಎಕಮುಖಿಯಾ ಗಿದ್ದು ಹೀಗಾಗಿ ಆದೇಶದ ನಂತರ ಸರ್ಕಾರದಿಂದ ಹೊಸದೊಂದು ಅಧಿಕೃತವಾಗಿ ಆರೋಗ್ಯ ಇಲಾಖೆಯಿಂದ ಇಲ್ಲವೇ ಸರ್ಕಾರದಿಂದ ಮುಂದುವರೆಸಿ ಮರು ನೇಮಕಾತಿ ಮಾಡಿರುವ ಕುರಿತಂತೆ ಆದೇಶವನ್ನು ತಗೆದುಕೊಂಡು ಬನ್ನಿ ಎಂದು ಹೇಳಿದ್ದಾರೆ.

ಹೀಗಾಗಿ ಸಧ್ಯ ಬೆಂಗಳೂರಿಗೆ ತೆರಳಿರುವ ಡಾ ಬಸನಗೌಡ ಕರಿಗೌಡರ ಅವರು ನ್ಯಾಯಾಲ ಯದ ಆದೇಶವನ್ನು ಇಟ್ಟುಕೊಂಡು ಮತ್ತೆ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾಗಿ ಬರಲು ಶತಾಯ ಗತಾಯ ಪ್ರಯತ್ನವನ್ನು ಮಾಡುತ್ತಿದ್ದು ಇನ್ನೂ ಇವೆಲ್ಲದರ ನಡುವೆ ಈ ಹಿಂದೆ ಧಾರವಾಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಡಾ ಸುರೇಶ್ ಇಟ್ನಾಳ್ ಅವರು ಡಾ ಬಸನಗೌಡ ಕರಿಗೌಡರ ಬಗ್ಗೆ ನೀಡಿರುವ ವರದಿಯನ್ನು ಆಧರಿಸಿ ಮುಂದು ವರೆಯುಂತೆ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯ ಮಂತ್ರಿ ಮತ್ತು ಹಿರಿಯ ಅಧಿಕಾರಿಗಳಿಗೆ ಖಡಕ್ ಸಂದೇಶವನ್ನು ನೀಡಿದ್ದು ಹೀಗಾಗಿ ಮುಂದೇನಾ ಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ವರದಿ ಚಕ್ರವರ್ತಿ ಜೊತೆ ಸುದ್ದಿ ಸಂತೆ ನ್ಯೂಸ್ ಧಾರವಾಡ


Google News

 

 

WhatsApp Group Join Now
Telegram Group Join Now
Suddi Sante Desk