ಸಂಡೂರು –
ಸಧ್ಯ ರಾಜ್ಯದಲ್ಲಿ NPS ರದ್ದು ಮಾಡುವ ವಿಚಾರ ಕುರಿತಂತೆ ಸಾಕಷ್ಟು ಪ್ರಮಾಣದಲ್ಲಿ ಸರ್ಕಾರಿ ನೌಕರರು ಬೀದಿಗಿಳಿದು ಹೋರಾಟವನ್ನು ಮಾಡುತ್ತಿದ್ದು ಇದರ ನಡುವೆ ಡಿಸೆಂಬರ್ 19 ರಂದು ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟದ ಮೂಲಕ ಶಕ್ತಿ ಪ್ರದರ್ಶನ ನಡೆಯ ಲಿದ್ದು ಇನ್ನೂ ಪುಟ್ಟ ಬಾಲಕಿಯೊಬ್ಬಳ್ಳು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರಿಗೆ 7ನೇ ವೇತನ ಆಯೋಗ ರಚನೆ ಮಾಡಿದ್ದಕ್ಕೆ ಧನ್ಯವಾದಗಳು ಸರ್ OPS ಒಂದನ್ನು ಬೇಗ ಜಾರಿಗೆ ಮಾಡಿಸಿ ಸರ್ ಎಂದು ಪ್ರಶ್ನೆಯನ್ನು ಮಾಡಿದ್ದಾಳೆ.
ಸಂಡೂರಿನ ನಿಕಟ ಪೂರ್ವ ಬಿ ಆರ್ ಪಿ ಆಗಿದ್ದಂ ತಹ ಮಹಾಂತೇಶ್ ಅವರ ಮಗಳಾದ ಕುಮಾರಿ ಸಾಹಿತ್ಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರ ಹತ್ತಿರ 7ನೇ ವೇತನ ಆಯೋಗದ ಕುರಿತು ಮತ್ತು ಎನ್ಪಿ ಎಸ್ ರದ್ಧತಿ ಕುರಿತು ವಿನಂತಿಸಿ ಮಾತನಾಡಿದ್ದಾಳೆ ಪುಟ್ಟ ಕಂದಮ್ಮ ಹತ್ತಿರ ಬರುತ್ತಿದ್ದಂತೆ ಮಗುವಿ ನಂತೆ ಮಗುವಾಗಿ ರಾಜ್ಯಾಧ್ಯಕ್ಷರು ಪುಟ್ಟ ಬಾಲ ಕಿಯ ಪ್ರಶ್ನಯನ್ನು ಆಲಿಸಿ 7ನೇ ವೇತನ ಆಯಿ ತಲ್ವಾ ಮುಂದೆ ಅದೇ ಮಾಡುತ್ತೇವೆ ಖಂಡಿತವಾ ಗಿಯೂ ಮಾಡೇ ಮಾಡುತ್ತೇನೆ ಎಂದು ಉತ್ತರ ನೀಡಿದ್ದಾರೆ.
ರಾಜ್ಯಾಧ್ಯಕ್ಷರ ಈ ಒಂದು ಸರಳತೆ ಕಂಡು ರಾಜ್ಯದ ಸರ್ಕಾರಿ ನೌಕರರು ಸಂತಸಗೊಂಡಿದ್ದು ಶೀಘ್ರವೇ ಅದೊಂದು ಕಷ್ಟವನ್ನು ನಿವಾರಣೆ ಮಾಡಿ ನೌಕರರಿಗೆ ಒಳ್ಳೇಯದಾಗಲಿ ಅನುಕೂಲ ವಾಗಲಿ ಎನ್ನುತ್ತಾ ರಾಜ್ಯಾಧ್ಯಕ್ಷರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಹಗರಿ ಬೊಮ್ಮ ನಹಳ್ಳಿ,ವಿಜಯನಗರ ಜಿಲ್ಲೆ ಯ ಸಮಸ್ತ ಸರ್ಕಾರಿ ನೌಕರರು ಧನ್ಯವಾದಗಳನ್ನು ಹೇಳಿದ್ದಾರೆ. ಇನ್ನೂ ಇದರೊಂದಿಗೆ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿರ ವರು ನೌಕರರ ಕುಂದು-ಕೊರತೆಗಳನ್ನು ಆಲಿಸಿ ಮನವಿಗಳನ್ನು ಸ್ವೀಕರಿಸಿದರು.
ಸುದ್ದಿ ಸಂತೆ ನ್ಯೂಸ್…..