ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕ್ರರಣೆಗಾಗಿ ರಚನೆಗೊಂಡಿರುವ 7ನೇ ವೇತನ ಆಯೋಗ ಅಧಿಕೃತವಾದ ಆದೇಶವು ರಾಜ್ಯ ಸರ್ಕಾರದಿಂದ ಹೊರ ಬೀಳುತ್ತಿದ್ದಂತೆ ಇತ್ತ ಅಧ್ಯಕ್ಷರು ಕಾರ್ಯ ಚಟುವಟಿಕೆಗಳನ್ನು ಆರಂಭ ಮಾಡಿದ್ದಾರೆ.ಈಗಾಗಲೇ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಅಭಿನಂದನೆಗಳನ್ನು ಸಲ್ಲಿಸಿ ಸಭೆಯನ್ನು ಮಾಡಿದ ನಂತರ ನಿನ್ನೆಯಷ್ಟೇ ರಾಜ್ಯದ ಆರ್ಥಿಕ ಇಲಾಖೆಯ ಐಎನ್ ಎಸ್ ಪ್ರಸಾದ್ ಸೇರಿದಂತೆ ಹಲವು ಅಧಿಕಾರಿಗ ಳೊಂದಿಗೆ ಸಭೆಯನ್ನು ಮಾಡಿದ್ದಾರೆ.
ನಂತರ ಸುಧೀರ್ಘವಾಗಿ ಚರ್ಚೆಯನ್ನು ಮಾಡಿ ಕೆಲವೊಂದಿಷ್ಟು ಮಹತ್ವದ ಮಾಹಿತಿಯನ್ನು ಪಡೆದುಕೊಂಡಿರುವ ಡಾ ಸುಧಾಕರ್ ರಾವ್ ನೇತ್ವತ್ವದಲ್ಲಿನ ಸಮಿತಿ ದಾಖಲೆಗಳನ್ನು ಪಡೆದು ಕೊಂಡಿದ್ದು ಕಾರ್ಯ ಚಟುವಟಿಕೆಗಳನ್ನು ಆರಂಭ ಮಾಡಿದ್ದಾರೆ.ವರದಿ ಸಿದ್ದತೆ ಬೇಕಾಗಿರುವ ಎಲ್ಲಾ ದಾಖಲೆಗಳನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಈಗಾಗಲೇ ಪತ್ರದ ಮೂಲಕ ಕೇಳಿದ್ದು ಅವರೊಂದಿಗೂ ಕೂಡಾ ಸಭೆಯನ್ನು ಮಾಡಿರುವ 7ನೇ ವೇತನ ಆಯೋಗದ ಸಮಿತಿ ವೇಗವಾಗಿ ಕಾರ್ಯ ಚಟುವಟಿಕೆಗಳನ್ನು ಮಾಡು ತ್ತಿದ್ದು ಬಿಡುವಿಲ್ಲದೇ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು
ಹೀಗಾಗಿ ಆರಂಭದಲ್ಲಿಯೇ ಈಗಾಗಲೇ ಮುಖ್ಯಮಂತ್ರಿ ಅವರು ಸೂಚನೆ ನೀಡಿದಂತೆ ಕಾರ್ಯವನ್ನು ವೇಗವಾಗಿ ಮಾಡುತ್ತಿದ್ದು ಹೀಗಾಗಿ ಈ ವಾರವೂ ಪೂರ್ಣವಾಗಿ ದಾಖಲೆಗಳನ್ನು ಶೇಖರಣೆ ಮಾಡಿಕೊಳ್ಳುವ ಕಾರ್ಯ ನಡೆಯ ಲಿದ್ದು ನಂತರ ವೇತನ ಪರಿಷ್ಕರಣೆ ಕುರಿತಂತೆ ಪ್ಲಾನ್ ಸಿದ್ದತೆ ಆರಂಭವಾಗಲಿದೆ.ಇನ್ನೂ ಇವತ್ತು ಈ ಒಂದು ಸಮಿತಿ ಬೇರೆ ಬೇರೆ ಇಲಾಖೆಗಳಿಗೆ ತೆರಳಿ ಇನ್ನೂ ಕೆಲವೊಂದಿಷ್ಟು ಹಿರಿಯ ಅಧಿಕಾರಿ ಗಳೊಂದಿಗೆ ಮಹತ್ವದ ಸಭೆಯನ್ನು ಮಾಡಲಿದ್ದು ಅಲ್ಲೂ ಕೂಡಾ ಮಾಹಿತಿಯನ್ನು ಶೇಖರಣೆ ಮಾಡಲಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.