This is the title of the web page
This is the title of the web page

Live Stream

[ytplayer id=’1198′]

October 2025
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಧಾರವಾಡ

ಗುಲಾಮಿ ಸಂಸ್ಕ್ರತಿ ಬಿಡಿ ನಮ್ಮ ಸಂಸ್ಕ್ರತಿ ಇಟ್ಟುಕೊಂಡು ಮುಂದೆ ಹೋಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಸಲಾಂ ಆರತಿ ಬಿಟ್ಟು ಬೇರೆ ಮಾಡಿದ್ದು ಸಂತೋಷವೆಂದ ಕೇಂದ್ರ ಸಚಿವರು

ಗುಲಾಮಿ ಸಂಸ್ಕ್ರತಿ ಬಿಡಿ ನಮ್ಮ ಸಂಸ್ಕ್ರತಿ ಇಟ್ಟುಕೊಂಡು ಮುಂದೆ ಹೋಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಸಲಾಂ ಆರತಿ ಬಿಟ್ಟು ಬೇರೆ ಮಾಡಿದ್ದು ಸಂತೋಷವೆಂದ ಕೇಂದ್ರ ಸಚಿವರು
WhatsApp Group Join Now
Telegram Group Join Now

ಧಾರವಾಡ

ಸಲಾಂ ಆರತಿ ವಿಚಾರ ಕುರಿತಂತೆ ಸಲಾಂ ಆರತಿ ಬಿಟ್ಟು ಬೇರೆ ಮಾಡಿದ್ದು ಸಂತೋಷ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು ಕನ್ನಡ ಭಾಷೆಯಲ್ಲೂ ಸಹ ನಮಸ್ಕಾರ ಹೇಳುತ್ತಾರೆ ಸಂಸ್ಕೃತದಲ್ಲೂ ನಮಸ್ಕಾರ ಹೇಳ್ತಾರೆ ಹೀಗಾಗಿ ಒಳ್ಳೆಯದು ಗುಲಾಮಿ ಸಂಸ್ಕೃತಿ ಬಿಡಬೇಕು ನಮ್ಮ ಸಂಸ್ಕೃತಿ ಇಟ್ಟುಕೊಂಡು ಮುಂದೆ ಹೋಗ ಬೇಕು ಈ ಕಾರಣಕ್ಕೆ ನಾನು ಅದನ್ನ ಸ್ವಾಗತಿಸು ತ್ತೇನೆ ಎಂದರು.

ಇನ್ನೂ ಆಡಳಿತದಲ್ಲಿ ಗುಜರಾತ್ ಮಾದರಿ ಮಾಡಲಿಕ್ಕೆ ನಮ್ಮ ಆಗ್ರಹ ಇದ್ದೆ ಇದೆ ಯಾವಾ ಗಲೂ 8 ವರ್ಷದಿಂದ ನಾನು ಸಹ ಪ್ರಧಾನಿ ಗಳ ಜೊತೆ ಕೆಲಸ ಮಾಡುತ್ತಿದ್ದೇನೆ ನಮ್ಮ ಆಗ್ರಹ ಯಾವಾಗಲೂ ಒಳ್ಳೆಯ ಸಂಗತಿ ಎಲ್ಲೇ ನಡೆದ್ರು ಅದನ್ನ ತೆಗೆದುಕೊಳ್ಳಬೇಕೆಂದರು.ಇನ್ನೂ ಕರ್ನಾಟಕದಲ್ಲೂ ಅದನ್ನು ತೆಗೆದುಕೊಳ್ತಾರೆ ರಾಜಕೀಯವಾಗಿ ಟಿಕೆಟ್ ಕಟ್ ಮಾಡೋದರಲ್ಲಿ ನಾನು ಈಗಲೇ ಹೇಳೋದಿಲ್ಲ ಯಾವಾಗ ಟಿಕೆಟ್ ಹಂಚುವ ಸಂದರ್ಭ ಬಂದಾಗ ಗೆಲುವು ಪಕ್ಷದ ನಿಷ್ಠೆ, ಬಿಜೆಪಿ ಆಡಳಿತಕ್ಕೆ ಬದ್ಧವಾಗಿರಬೇಕು ನಡೆ ನುಡಿಯಲ್ಲಿ ಸಹ ಸ್ವಚ್ಛತೆ ಇರಬೇಕು ಮತ್ತು ಗೆಲುವು ಇರುವಂತವರಿಗೆ ಟಿಕೆಟ್ ನೀಡಲಾಗುತ್ತೆ ಎಂದರು.

 

 

ಹಿರಿಯರಿಗೆ ಕೋಕ್ ನೀಡೋ ವಿಚಾರ ಕುರಿತಂತೆ ಮಾತನಾಡಿದ ಕೇಂದ್ರ ಸಚಿವರು ಹಿರಿಯರೆಲ್ಲರೂ ಕೆಟ್ಟವರು, ಹೊಸಬರು ಒಳ್ಳೆಯವರು ಅಂದ್ರೆ ಹೇಗೆ ಪತ್ರಿಕೋದ್ಯಮದಲ್ಲಿ ನಿಮಗಿಂದ ಸಣ್ಣವರಿ ದ್ದ ವರೆಲ್ಲ ನೀವು ಕೆಟ್ಟವರು ಅಂದ್ರೆ ಹೇಗೆ ಪ್ರಧಾನಿ ಮತ್ತು ಗೃಹ ಸಚಿವರ ಸೇವೆಯನ್ನ ಸಂಪೂರ್ಣ ವಾಗಿ ನಾವು ಬಳಸಿಕೊಳ್ಳುತ್ತೇವೆ ಎಂದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News

 

 

WhatsApp Group Join Now
Telegram Group Join Now
Suddi Sante Desk