ಹುಬ್ಬಳ್ಳಿ –
ಗುಜರಾತ್ ರಾಜ್ಯದ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೆ ಅಷ್ಟೇ ಅಲ್ಲ ದೇಶದ ಮೇಲೆ ಪರಿಣಾಮ ಬೀರಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಮುಂದಿನ ಚುನಾವಣೆ ಯಲ್ಲಿ ರಾಜ್ಯ ದಲ್ಲಿ ಬಿಜೆಪಿ ಅತಿಹೆಚ್ಚು ಅಂತರ ದಿಂದ ಗೆದ್ದು ಬರಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಪುಟ ಪುನರ್ ರಚನೆ ಕುರಿತಂತೆ ಮುಖ್ಯಮಂತ್ರಿಗಳು ಮತ್ತು ಕೇಂದ್ರದ ನಾಯಕರು ತಿರ್ಮಾಣ ಮಾಡತ್ತಾರೆ.ಆದರೆ ಸಂಪುಟ ಪುನರ್ ರಚನೆ ಬಗ್ಗೆ ಮುಖ್ಯಮಂತ್ರಿಗಳು ಎಲ್ಲಿಯೂ ಹೇಳಿಲ್ಲ ಇದು ಮಾಧ್ಯಮಗಳ ಸೃಷ್ಟಿ ಎಂದರು.
ನಾನು ಕೂಡಾ ಆರ್.ಎಸ್.ಎಸ್ ನಾಯಕ ಹೀಗಾಗಿ ಆರ್.ಎಸ್ ಎಸ್ ನಾಯಕರು ಸಿಎಂ ಅವರನ್ನು ಭೇಟಿ ಆಗೋದು ಸಹಜವಾಗಿದೆ ಎಂದರು.ರಾಜ್ಯದಲ್ಲಿ ಗುಜರಾತ್ ಮಾಡೇಲ್ ಟಿಕೆಟ್ ಹಂಚಿಕೆ ಕುರಿತು ಮಾತನಾಡಿದ ಅವರು, ಒಂದು ರಾಜ್ಯದ ಮಾದರಿಯನ್ನು ಇನ್ನೊಂದು ರಾಜ್ಯದಲ್ಲಿ ಯತ್ತಾವತ್ತಾಗಿ ಮಾಡೋಕ್ಕೆ ಸಾಧ್ಯ ವಿಲ್ಲ. ಒಟ್ಟಾರೆ ಒಳ್ಳೆಯ ಅನುಭವವನ್ನು ಸೇರಿಸ ಬಹುದು. ಗುಜರಾತಿನ ಚುನಾವಣೆ ಫಲಿತಾಂಶ ಕೇವಲ ಕರ್ನಾಟಕ ರಾಜ್ಯಕ್ಕೆ ಅಷ್ಟೇ ಅಲ್ಲ ದೇಶದ ಮೇಲೆ ಪರಿಣಾಮ ಬೀರಲಿದೆ.ಬರುವ ಚುನಾ ವಣೆಯಲ್ಲಿ ಬಿಜೆಪಿ ಬಹುದೊಡ್ಡ ಅಂತರದಲ್ಲಿ ಗೆದ್ದು ಬರಲಿದೆ ಎಂದರು
ಇನ್ನೂ ಹಳೇಹುಬ್ಬಳ್ಳಿ ಗಲಾಟೆ ವಿಚಾರವಾಗಿ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಹೇಳಿಕೆ ವಿಚಾರವಾಗಿ ಮಾತನಾಡಿ ಆ ರೀತಿ ಯಾಕೆ ಹೇಳಿದ್ದಾರೆ ಗೊತ್ತಿಲ್ಲ.ಅವರು ಜವಾಬ್ದಾರಿ ಯುತವಾಗಿ ಮಾತನಾಡಬೇಕು.ಕೋರ್ಟ್ ನಲ್ಲಿ ವಾದ ಮಂಡಿಸಲು ಅವಕಾಶ ಇದೆ.ಆದರೆ ಅಹಂ ಕಾರದಿಂದ ಮಾತನಾಡುವುದು ಸರಿಯಲ್ಲ ಎಂದು ಜೋಶಿ ಹೇಳಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..