ಕಲಘಟಗಿ –
ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ನಾಗರಾಜ ಛಬ್ಬಿ ಮತ್ತು ಬೆಂಬಲಿಗರ ಪ್ರವಾಸ ಧಾರವಾಡದ ಕಲಘಟಗಿಯಲ್ಲಿ ಮುಂದುವರೆದಿದೆ.ಕಳೆದೊಂದು ತಿಂಗಳಿನಿಂದ ಒಂದು ಕಡೆಗೆ ನಾಗರಾಜ ಛಬ್ಬಿ ತಮ್ಮ ಬೆಂಬಲಿಗರೊಂದಿಗೆ ತಿರುಗಾಡುತ್ತಿದ್ದರೆ ಇತ್ತ ಮತ್ತೊಂದು ಕಡೆಗೆ ಅವರ ಪತ್ನಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ತಮ್ಮ ಟೀಮ್ ನೊಂದಿಗೆ ಸುತ್ತಾಡುತ್ತಿದ್ದಾರೆ.
ಊರೂರು ಸುತ್ತಾಡುತ್ತಾ ಸಭೆ ಸಮಾರಂಭ ಗಳನ್ನು ಮಾಡುತ್ತಾ ಮೊದಲು ಗ್ರಾಮಸ್ಥರೊಂದಿಗೆ ಸಮಸ್ಯೆಗಳನ್ನು ಆಲಿಸುತ್ತಾ ನಂತರ ಗ್ರಾಮದಲ್ಲಿ ಪ್ರತಿಯೊಂದು ಕುಟುಂಬಕ್ಕೂ ಕುಕ್ಕರ್ ಗಳನ್ನು ವಿತರಣೆ ಮಾಡುತ್ತಿದ್ದಾರೆ.ಸಧ್ಯ ಕಲಘಟಗಿ ಕ್ಷೇತ್ರದ ತುಂಬೆಲ್ಲಾ ಈ ಒಂದು ಕಾರ್ಯ ನಡೆ ಯುತ್ತಿದ್ದು ಬೊಗೇನಾಗರಕೊಪ್ಪ ಗ್ರಾಮದಲ್ಲಿ ನಡೆಯಿತು.
ಗ್ರಾಮಕ್ಕೆ ಪತಿಯ ಪರವಾಗಿ ಆಗಮಿಸಿದ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರನ್ನು ಗ್ರಾಮಸ್ಥರು ಪ್ರೀತಿಯಿಂದ ಬರಮಾಡಿಕೊಂಡರು.ಗ್ರಾಮದ ದ್ವಾರಬಾಗಿಲಿನಲ್ಲಿ ಸ್ವಾಗತಿಸಿಕೊಂಡು ಸಭೆಯನ್ನು ಮಾಡಿದರು.ಗ್ರಾಮಸ್ಥರೊಂದಿಗೆ ಕೆಲ ಗಂಟೆಗಳ ಕಾಲ ಸಮಯವನ್ನು ಕಳೆದ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಸಮಸ್ಯೆಗಳನ್ನು ಆಲಿಸಿ ಬರುವ ದಿನಗಳಲ್ಲಿ ಅವುಗಳನ್ನು ಈಡೇರಿಸುವ ಭರವಸೆ ಯನ್ನು ನೀಡಿದರು.ನಂತರ ಪ್ರತಿಯೊಂದು ಕುಟುಂಬಕ್ಕೂ ಛಬ್ಬಿ ಟೀಮ್ ಪರವಾಗಿ ಕುಕ್ಕರ್ ಗಳನ್ನು ವಿತರಣೆ ಮಾಡಲಾಯಿತು.
ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರೊಂದಿಗೆ ಟೀಮ್ ನ ಸದಸ್ಯರಾಗಿರುವ ಕಿರಣ ಕುಲಕರ್ಣಿ, ಮದನ ಕುಲಕರ್ಣಿ,ಮಂಜುನಾಥ ಮೊರಬದ, ಬಸವರಾಜ ಕಡ್ಲೇಣ್ಣನವರ,ಬಸವರಾಜ ಅಕ್ಕಿ, ಇಸ್ಮಾಯಿಲ್ ಕಾಮನ್ನವರ,ಸಂಗಪ್ಪ ಬುರುಡಿ, ಬಸವರಾಜ ಪುರದನ್ನವರ,ಇಮಾವತಿ ಕುಸುಗಲ್ ಮಂಜುನಾಥ್ ಪುರದನ್ನವರ,ರಾಜು ಸಣ್ಣಮನಿ, ಶಿವಕಲ್ಲಪ್ಪ ಸಣ್ಣಪೂಜಾರ,ಮಂಜುನಾಥ ಧಾರವಾಡ,ದಾದಾಫೀರ್,ಚನ್ನಬಸವಣ್ಣ ಸೇರಿದಂತೆ ಗ್ರಾಮದ ಗುರು ಹಿರಿಯರು ಮಹಿಳೆಯರು ಸೇರಿದಂತೆ ಹಲವರು ಉಪಸ್ಥಿತರಿ ದ್ದು ಕಾರ್ಯಕ್ರಮವನ್ನು ಯಶಶ್ವಿಗೊಳಿಸಿದರು.
ಸುದ್ದಿ ಸಂತೆ ನ್ಯೂಸ್ ಕಲಘಟಗಿ…..