This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State Newsಧಾರವಾಡ

ಕಂಬಳಿ ಹೊದಿಸಿ ಕುರಿಮರಿ ನೀಡಿ ಶಂಕರ ಪಾಟೀಲ್ ರಿಗೆ ಆಶೀರ್ವಾದ ಮಾಡಿದ ಮತದಾರರು – ಚುನಾವಣೆಯಲ್ಲಿ ಬಿಜೆಪಿ ಗೆಲುವು ಶತಸಿದ್ಧ ಎಂಬ ಸಂದೇಶ ಸಾರಿದ ಕ್ಷೇತ್ರದ ಮತದಾರರು…..

WhatsApp Group Join Now
Telegram Group Join Now

ನವಲಗುಂದ

ಸಚಿವ ಹಾಗೂ ನವಲಗುಂದ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ್ ಮುನೇನಕೊಪ್ಪ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.ಹೌದು ಇಂದು ಭಂಡಿವಾಡ ಗ್ರಾಮದ ಹನುಮಂತ ದೇವರ ಮತ್ತು ಭೀರದೇವರ ಆಶೀರ್ವಾದ ಪಡೆದರು.

ಭಂಡಿವಾಡ ಗ್ರಾಮಕ್ಕೆ ಶಂಕರ್ ಪಾಟೀಲ್ ಮುನೇನಕೊಪ್ಪ ಆಗಮಿಸಿದಾಗ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಮುಳುಗುವ ಹಡಗಾಗಿ ರುವ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಕುರುಬ ಸಮಾಜದ 80ಕ್ಕೂ ಹೆಚ್ಚು ಬಂಧುಗಳು ಭಾರತೀಯ ಜನತಾ ಪಾರ್ಟಿಯ ತತ್ವ ಸಿದ್ಧಾಂತ ಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಯಾದರು.

ನವಲಗುಂದ ವಿಧಾನಸಭಾ ಕ್ಷೇತ್ರದ, ಹುಬ್ಬಳ್ಳಿ ತಾಲೂಕಿನ, ಭಂಡಿವಾಡ ಗ್ರಾಮದ ಕುರುಬ ಸಮಾಜದ ಬಂಧುಗಳು ಬಿಜೆಪಿ ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ, ಪಕ್ಷಕ್ಕೆ ಸೇರ್ಪಡೆಗೊಂಡು, ಕುರುಬ ಸಮಾಜದ ಸಂಪ ದ್ರಾಯದಂತೆ ಕಂಬಳಿ ಹೊದಿಸಿ ಕುರಿಮರಿ ನೀಡಿ ಸನ್ಮಾನಿಸಿ, ಚುನಾವಣೆಯಲ್ಲಿ ಬಿಜೆಪಿ ಗೆಲುವು ಶತಸಿದ್ಧ ಎಂಬ ಸಂದೇಶ ಸಾರಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರಾದ ಮೃತ್ಯುಂಜಯ ಹಿರೇಮಠ,ನಿಂಗಪ್ಪ ಮಾಯಣ್ಣ ವರ, ಹನಮಂತಪ್ಪ ಚುಂಗಿನ, ಬಸವರಾಜ ಭಂಡಿವಾಡ, ಪೀರಸಾಬ ಬಾವಕ್ಕನವರ, ಪ್ರಕಾಶ ಭಂಡಿವಾಡ (ಗ್ರಾಮ ಪಂಚಾಯತ್ ಸದಸ್ಯರು), ಮೌಲಾಸಾಬ ಕಿಲ್ಲೇದಾರ, ಬಾಬಾಜಾನ ಹಸನಪ್ಪ ನವರ, ಶ್ರೀಮತಿ ಬಸಮ್ಮ ಬಸಾಪುರ,ರಾಮಣ್ಣ ಮೂಲಿಮನಿ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ನವಲಗುಂದ…..


Google News

 

 

WhatsApp Group Join Now
Telegram Group Join Now
Suddi Sante Desk