This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

ಧಾರವಾಡ

ಪ್ರಹ್ಲಾದ್ ಜೋಶಿ ಗೆ ಜೋಶ್ ತುಂಬಿದ ಧಾರವಾಡದ ಶಿವಗಿರಿ ಯ ನಿವಾಸಿಗಳು – ಶಿವು ಹಿರೇಮಠ ನೇತ್ರತ್ವದಲ್ಲಿ ನಡೆಯಿತು ಯಶಸ್ವಿ ಕಾರ್ಯಕ್ರಮ…..

ಪ್ರಹ್ಲಾದ್ ಜೋಶಿ ಗೆ ಜೋಶ್ ತುಂಬಿದ ಧಾರವಾಡದ ಶಿವಗಿರಿ ಯ ನಿವಾಸಿಗಳು – ಶಿವು ಹಿರೇಮಠ ನೇತ್ರತ್ವದಲ್ಲಿ ನಡೆಯಿತು ಯಶಸ್ವಿ ಕಾರ್ಯಕ್ರಮ…..
WhatsApp Group Join Now
Telegram Group Join Now

ಧಾರವಾಡ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಅಬ್ಬರ ಜೋರಾಗಿದೆ‌.ಹೌದು ಕ್ಷೇತ್ರದಲ್ಲಿ  ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅಬ್ಬರ ಕಂಡು ಬರುತ್ತಿದ್ದು ಧಾರವಾಡದ ಶಿವಗಿರಿಯಲ್ಲಿ ಪ್ರಹ್ಲಾದ್ ಜೋಶಿ ಪರ ಚುನಾವಣಾ ಪ್ರಚಾರ ನಡೆಯಿತು ಪ್ರಚಾರಾರ್ಥ ಸಭೆಯಲ್ಲಿ ಬಿಜೆಪಿ ಪಕ್ಷದ ಹಲವು ನಾಯಕರು ಭಾಗವಹಿಸಿ ನೆರೆದಿದ್ದ ನಾಗರಿಕರೊಂದಿಗೆ ಮಾತನಾಡಿದರು.

ಕಳೆದ ದಶಕದಲ್ಲಿ ಭಾರತದ ಬೆಳವಣಿಗೆ ಇತಿ ಹಾಸದಲ್ಲೇ ಮೊದಲ ಬಾರಿಗೆ ಒಂದು ಮೈಲಿ ಗಲ್ಲನ್ನು ಸಾಧಿಸಿದೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಮಸ್ತ ನಾಗರಿಕರ ಒಳಿತಿಗೆ ಹಾಗೂ ದೇಶದ ಸುರಕ್ಷತೆಗೆ ಮೋದಿ ಸರ್ಕಾರ ಕೈಗೊಂಡಿ ರುವ ಪ್ರತಿಯೊಂದು ಯೋಜನೆಯೂ ಪ್ರಪಂಚಕ್ಕೆ ಮಾದರಿಯಾಗಿದೆ.

ದೇಶದ ಈ ಬೆಳವಣಿಗೆ ಹೀಗೇ ಮುಂದುವರೆದು ಮುಂಬರುವ ದಿನಗಳಲ್ಲಿ ಭಾರತ ವಿಶ್ವದ ಹಿರಿ ಯಣ್ಣನಾಗಿ ಪ್ರಪಂಚವನ್ನ ಮುನ್ನಡೆಸಬೇಕಾದರೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಿ ನಮ್ಮ ರಾಷ್ಟ್ರದ ಪ್ರಧಾನ ಸೇವಕನಾಗಿ ಆಯ್ಕೆ ಆಗಬೇಕು ಎಂದು ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ನಾಗರಿಕರಲ್ಲಿ ಬೆಂಬಲ ಕೋರಿದೆನು.

ಈ ಸಂದರ್ಭದಲ್ಲಿ ಮಾಜಿ ಮಹಾಪೌರರಾದ ಶಿವು ಹಿರೇಮಠ, ಪಾಲಿಕೆ ಸದಸ್ಯರಾದ ವಿಷ್ಣು ಕೊರ್ಲಹಳ್ಳಿ, ಶ್ರೀಮತಿ ಜ್ಯೋತಿ ಪಾಟೀಲ್, ಪ್ರಮುಖರಾದ ಪಿ ಎಚ್ ನೀರಲಕೇರಿ, ಜಯತೀರ್ಥ ಕಟ್ಟಿ, ಮಂಡಲ ಅಧ್ಯಕ್ಷರಾದ ಬಸವರಾಜ ಗರಗ, ಹಿರಿಯರಾದ ಶಿವಣ್ಣ ಬಡಿಗೇರ್, ರಾಮಚಂದ್ರ ಪೋದಡ್ಡಿ, ಗಿರೀಶ ಮತ್ಸದಿ ಹಾಗು ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News

 

 

WhatsApp Group Join Now
Telegram Group Join Now
Suddi Sante Desk