This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ 21 ಜಿಲ್ಲೆಗಳಲ್ಲಿ ಪ್ರಜಾಸತ್ತಾತ್ಮಕ ವೇದಿಕೆ ಬೆಂಬಲಿಗರ ಗೆಲುವು – ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನಾಗೇಶ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಟೀಮ್ ನಿಂದ ಅಭಿನಂದನೆ ಸಲ್ಲಿಕೆ…..

ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ 21 ಜಿಲ್ಲೆಗಳಲ್ಲಿ ಪ್ರಜಾಸತ್ತಾತ್ಮಕ ವೇದಿಕೆ ಬೆಂಬಲಿಗರ ಗೆಲುವು – ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನಾಗೇಶ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಟೀಮ್ ನಿಂದ ಅಭಿನಂದನೆ ಸಲ್ಲಿಕೆ…..
WhatsApp Group Join Now
Telegram Group Join Now

ಬೆಂಗಳೂರು

ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ 21 ಜಿಲ್ಲೆಗಳಲ್ಲಿ ಪ್ರಜಾಸತ್ತಾತ್ಮಕ ವೇದಿಕೆ ಬೆಂಬಲಿಗರ ಗೆಲುವು – ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನಾಗೇಶ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಟೀಮ್ ನಿಂದ ಅಭಿನಂದನೆ ಸಲ್ಲಿಕೆ ಹೌದು

ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ರಾಜ್ಯದ 21 ಜಿಲ್ಲೆಗಳಲ್ಲಿ ಪ್ರಜಾಸತ್ತಾತ್ಮಕ ವೇದಿಕೆ ಬೆಂಬಲಿಗರ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದ್ದಾರೆ.ಹೌದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ವಿವಿಧ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ರಾಜ್ಯದ 21 ಜಿಲ್ಲೆಗಳಲ್ಲಿ ಪ್ರಜಾಸತ್ತಾತ್ಮಕ ನೌಕರರ ವೇದಿಕೆಯ ಬೆಂಬಲಿಗರು ಆಯ್ಕೆಯಾಗಿದ್ದಾರೆ

ಈ ಮೂಲಕ ತಮ್ಮ ಗೆಲುವಿನ ನಾಗಾಲೋಟ ಮುಂದುವರಿಸಿದ್ದಾರೆ ಎಂದಿದ್ದಾರೆ.ಇನ್ನೂ 21 ಜಿಲ್ಲೆಗಳ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಪ್ರಜಾ ಸತ್ತಾತ್ಮಕ ವೇದಿಕೆ, ರಾಜ್ಯ ಪದಾಧಿಕಾರಿಗಳ ಚುನಾವಣೆ ಯಲ್ಲಿ ಮುನ್ನುಗುತ್ತಿದ್ದು ಈಗಾಗಲೇ ತಾಲೂಕು ಘಟಕ ಹಾಗೂ ವಿವಿಧ ಇಲಾಖೆಗಳ ರಾಜ್ಯ ಪರಿಷತ್ ಸದಸ್ಯ ಸ್ಥಾನಗಳನ್ನು ಬಾಚಿಕೊಂಡಿರುವ ಪ್ರಜಾಸತ್ತಾತ್ಮಕ ವೇದಿಕೆಗೆ ನಡೆದ ಜಿಲ್ಲಾ ಘಟಕದ ಚುನಾವಣೆ ಮತ್ತಷ್ಟು ಬಲ ನೀಡಿದೆ .ಎಂದು ಪ್ರಜಾಸತ್ತಾತ್ಮಕ ವೇದಿಕೆಯ ಮುಖಂಡರಾಗಿರುವ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.

ಆಯ್ಕೆಯಾದ ಜಿಲ್ಲಾ ಘಟಕದ ಮಾಹಿತಿ
1.ಬಸವರಾಜ ಬಳೊಂಡಗಿ (ಕಲಬುರಗಿ ಜಿಲ್ಲೆ)
2.ಕೃಷ್ಣಾ (ರಾಯಚೂರ ಜಿಲ್ಲೆ)
3.ರಾಯಪ್ಪಗೌಡ ಹುಡೇದ (ಯಾದಗೀರ)
4.ಎಂ.ಸಿ. ಕುಂಬಾರ (ಚಿಕ್ಕೋಡಿ)
5.ಸಿದ್ಧನಗೌಡ ಪಾಟೀಲ್ (ಧಾರವಾಡ)
6.ರವಿ ಗುರುಜಿತ್ಕ (ಗದಗ)
7.ನಾಗರಾಜ ಜುಮ್ಮನ್ನವರ (ಕೊಪ್ಪಳ)
8.ಆಸೀಫ್ (ಬಳ್ಳಾರಿ)
9.ಮಹಾಂತೇಶ ಮುತ್ತಜ್ಜಿ (ಚಿತ್ರದುರ್ಗ)
10.ನರಸಿಂಹರಾಜು (ತುಮಕೂರು)
11.ನಾರಾಯಣಸ್ವಾಮಿ (ಚಿಕ್ಕಬಳ್ಳಾಪುರ)
12.ಅಜಯ್ (ಕೋಲಾರ)
13.ಸತೀಶ (ರಾಮನಗರ),
14.ಕೃಷ್ಣೇಗೌಡರು (ಹಾಸನ)
15.ಅರುಣಕುಮಾರ (ಮೈಸೂರು)
16.ಅರುಣಕುಮಾರ (ಕೊಡಗು)
17.ರೇಣುಕಾದೇವಿ (ಚಾಮರಾಜನಗರ)
18.ನಾಗೇಶ (ಮಂಡ್ಯ)
19.ಗಂಗಾಧರ (ಬೆಂಗಳೂರು ಗ್ರಾಮಾಂತರ)
20.ಕಿರಣ ನಾಯಕ (ಶಿರಸಿ)
21.ಮಲ್ಲೇಶ ಕರಿಗಾರ (ಹಾವೇರಿ)

ಇನ್ನೂ 146 ತಾಲೂಕುಗಳಲ್ಲಿ ಕೂಡಾ ವೇದಿಕೆಯ ಬೆಂಬಲಿತರು ಹೆಚ್ಚಿನ ಸ್ಥಾನ ಗೆದ್ದಿದ್ದಾರೆ ಎಂದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ನಡೆದ ತಾಲೂಕು ಘಟಕ ಹಾಗೂ ಯೋಜನಾ ಘಟಕಗಳ ಚುನಾವಣೆಯಲ್ಲಿ ಪ್ರಜಾಸತ್ತಾತ್ಮಕ ನೌಕರರ ವೇದಿಕೆಯ ಬೆಂಬಲಿಗರು 146 ತಾಲೂಕುಗಳಲ್ಲಿ ಆಯ್ಕೆಯಾಗಿದ್ದು ವಿಶೇಷ ವಾಗಿದೆ ಎಂದರು.

ಈ ಮಧ್ಯೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಚುನಾವಣೆಯಲ್ಲಿ ಗೆದ್ದು ಆಯ್ಕೆಯಾದ ರಾಜ್ಯದ 21 ಜಿಲ್ಲೆಗಳ ಜಿಲ್ಲಾ ಘಟಕದ ಅಧ್ಯಕ್ಷರು, ಖಜಾಂಚಿಗಳು, ರಾಜ್ಯ ಪರಿಷತ್ ಸದಸ್ಯರು, ವಿವಿಧ ಪದಾಧಿಕಾರಿಗಳು ಹಾಗೂ ಪ್ರಜಾಸತ್ತಾತ್ಮಕ ನೌಕರರ ವೇದಿಕೆಯ ಬೆಂಬಲಿಗರಿಗೆ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕೃಷ್ಣಮೂರ್ತಿ, ಖಜಾಂಚಿ ಸ್ಥಾನದ ಅಭ್ಯರ್ಥಿ ಶಿವರುದ್ರಯ್ಯ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನಾಗೇಶ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮತ್ತಿತ ರರು ಅಭಿನಂದನೆ ಸಲ್ಲಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk