This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

State News

ಸರ್ಕಾರಿ ಶಾಲೆಗೆ ಪ್ರವೇಶ ಪಡೆದರೆ ಮಕ್ಕಳಿಗೆ ಸಿಗಲಿದೆ 1111 ಠೇವಣಿ – ಸರ್ಕಾರಿ ಶಾಲೆಯ ದಾಖಲಾತಿ ಹೆಚ್ಚಿಸಲು ಶಿಕ್ಷಕರೊಬ್ಬರ ಆಫರ್…..

ಸರ್ಕಾರಿ ಶಾಲೆಗೆ ಪ್ರವೇಶ ಪಡೆದರೆ ಮಕ್ಕಳಿಗೆ ಸಿಗಲಿದೆ 1111 ಠೇವಣಿ – ಸರ್ಕಾರಿ ಶಾಲೆಯ ದಾಖಲಾತಿ ಹೆಚ್ಚಿಸಲು ಶಿಕ್ಷಕರೊಬ್ಬರ ಆಫರ್…..
WhatsApp Group Join Now
Telegram Group Join Now

ಹಾವೇರಿ

ಸರ್ಕಾರಿ ಶಾಲೆಗೆ ಸೇರಿಸಿದರೆ ಮಕ್ಕಳ ಹೆಸರಿನಲ್ಲಿ 1111 ರೂಪಾಯಿಯ ಠೇವಣಿ ಮಾಡುವ ಭರ್ಜರ  ಯಾದ ಆಫರ್ ನ್ನು ಹಾವೇರಿ ಯಲ್ಲಿ ಶಿಕ್ಷಕರೊಬ್ಬರು ಘೋಷಣೆ ಮಾಡಿದ್ದಾರೆ ಹೌದು ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಲಿಂಗದೇವರಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ದಾಖಲಾತಿ ಹೆಚ್ಚಳಕ್ಕೆ ಮುಂದಾಗಿರುವ ಮುಖ್ಯ ಶಿಕ್ಷಕ ಮರಡೆಪ್ಪ ಕರಿಯಪ್ಪ ಹೊಳಜೋಗಿ, ಶಾಲೆಗೆ ಸೇರುವ ಮಕ್ಕಳ ಹೆಸರಿನಲ್ಲಿ ₹1,111 ಠೇವಣಿ ಇರಿಸಲು ತೀರ್ಮಾನಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಟ್ಟಲಗಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ (ಪ್ರಭಾರ) ಎ.ಬಿ. ಪಾಟೀಲ ಅವರು ಮಕ್ಕಳ ಹೆಸರಿನಲ್ಲಿ ₹ 1,111 ಠೇವಣಿ ಇರಿಸಿದ್ದ ಬಗ್ಗೆ ‘ ಜೂನ್ 12ರಂದು ‘ಪ್ರವೇಶ ಪಡೆದರೆ ₹ 1,111 ಠೇವಣಿ’ ಎಂಬ ಮಾಹಿತಿ ಕೇಳಿ ಬಂದಿತ್ತು

ಇದರಿಂದ ಪ್ರೇರಣೆಗೊಂಡ ಮರಡೆಪ್ಪ ಹೊಳಜೋಗಿ, ಮಕ್ಕಳ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಹಣ ಠೇವಣಿ ಇರಿಸಲು ಮುಂದಾಗಿದ್ದಾರೆ.ಸುಮಾರು 1,500 ಜನಸಂಖ್ಯೆಯುಳ್ಳ ಲಿಂಗದೇವರಕೊಪ್ಪದ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿ ಯವರೆಗೆ ಕಳೆದ ಶೈಕ್ಷಣಿಕ ವರ್ಷದಲ್ಲಿ 49 ವಿದ್ಯಾರ್ಥಿ  ಗಳಿದ್ದರು.

ಪ್ರಸಕ್ತ ವರ್ಷದಲ್ಲಿ 43 ವಿದ್ಯಾರ್ಥಿಗಳಿದ್ದಾರೆ. ಗ್ರಾಮದ. ಲ್ಲಿರುವ ಕೆಲ ಮಕ್ಕಳು, ಖಾಸಗಿ ಶಾಲೆಯತ್ತ ಮುಖ ಮಾಡಿರುವುದರಿಂದ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ.ಹಂಸಬಾವಿಯಲ್ಲಿ ಸಿಆರ್‌ಪಿ ಆಗಿ ಕೆಲಸ ಮಾಡಿದ್ದ ಮರಡೆಪ್ಪ, ಲಿಂಗ ದೇವರಕೊಪ್ಪ ಗ್ರಾಮದ ಶಾಲೆಗೆ ಇತ್ತೀಚೆಗಷ್ಟೇ ಮುಖ್ಯಶಿಕ್ಷಕರಾಗಿ ಕೆಲಸ ಆರಂಭಿಸಿದ್ದಾರೆ.

ಮಕ್ಕಳ ದಾಖಲಾತಿ ಹೆಚ್ಚಿಸುವುದು ಹೇಗೆ ಎಂಬ ಬಗ್ಗೆ ಯೋಚಿಸುತ್ತಿದ್ದರು.ಇದರ ನಡುವೆ ಠೇವಣಿ ಯೋಜನೆ ಶುರು ಮಾಡಿದ್ದಾರೆ. ಠೇವಣಿ ಯೋಜನೆ ಘೋಷಿಸಿದೆ. ಈಗ ಹೊಸದಾಗಿ ಶಾಲೆಗೆ ನಾಲ್ವರು ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ. ಅವರ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ₹ 1,111 ಠೇವಣಿ ಇರಿಸಲು ಪ್ರಕ್ರಿಯೆ ಆರಂಭಿಸಿದ್ದೇನೆ’ ಎಂದು ಮರಡೆಪ್ಪ ಹೊಳಜೋಗಿ  ತಿಳಿಸಿದ್ದಾರೆ

‘ಪ್ರತಿ ವರ್ಷವೂ ಠೇವಣಿ ಇರಿಸಲು ತೀರ್ಮಾನಿಸಿದ್ದೇನೆ. ಈ ಶಾಲೆಯಿಂದ ಬೇರೆ ಶಾಲೆಗೆ ವರ್ಗಾವಣೆಯಾಗಿ ಹೋದರೂ ಅಲ್ಲಿಯೂ ಮಕ್ಕಳ ಹೆಸರಿನಲ್ಲಿ ಠೇವಣಿ ಇರಿಸುತ್ತೇನೆ. ಸರ್ಕಾರಿ ಶಾಲೆಯ ದಾಖಲಾತಿ ಪ್ರಮಾಣ ಹೆಚ್ಚಿಸಲು ಶ್ರಮಿಸುತ್ತೇನೆ. ನನ್ನ ಕೆಲಸಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳೂ ಸಹಕಾರ ನೀಡುತ್ತಿದ್ದಾರೆ’ ಎಂದು ಹೇಳಿದರು.

ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಲಿಂಗದೇ ವರಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮಕ್ಕಳ ಜೊತೆ ಶಿಕ್ಷಕ ಮರಡೆಪ್ಪ ಕರಿಯಪ್ಪ ಹೊಳಜೋಗಿ-ಮರಡೆಪ್ಪ ಹೊಳಜೋಗಿ ಶಿಕ್ಷಕನಾನೂ ಸರ್ಕಾರಿ ಶಾಲೆಯಲ್ಲಿ ಓದಿ ಶಿಕ್ಷಕನಾಗಿದ್ದೇನೆ. ಸರ್ಕಾರಿ ಶಾಲೆ ಮಕ್ಕಳ ಶೈಕ್ಷಣಿಕ ಉದ್ದೇಶಕ್ಕಾಗಿ ಠೇವಣಿ ಬಳಸುವಂತೆ ಪೋಷಕರಿಗೆ ತಿಳಿಸುತ್ತಿದ್ದೇನೆ ಎಂದಿದ್ದಾರೆ.

 

ಸುದ್ದಿ ಸಂತೆ ನ್ಯೂಸ್ ಹಾವೇರಿ…..


Google News

 

 

WhatsApp Group Join Now
Telegram Group Join Now
Suddi Sante Desk