ಬೆಂಗಳೂರು –
ಶಿಕ್ಷಕನನ್ನು ಶಿಕ್ಷಕನಾಗಿರಲು ಬಿಟ್ಬಿಡಿ ಇಂತಹ ದೊಂದು ಸಂದೇಶ ವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ ಯವರು ಶಿಕ್ಷಕರ ನೋವಿನ ಕುರಿತಾದ ಲೇಲಕನವೊಂದನ್ನು ಬರೆದಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ
ಹೌದು ಅದು ಯಾವ ಕರ್ಮಕ್ಕೆ D.Ed, B.Ed ಮಾಡಿ ಪುಟಗಟ್ಟಲೆ ಅಸೈನ್ ಮೆಂಟ್ ಬರೆದು, ಲೆಸನ್ ಪ್ಲಾನ್ ಅನ್ನು Re Write ಮಾಡಿ ಅಧ್ಯಾಪಕನಾಗುವ ಕನಸು ಹೊತ್ತು ಅದೆಷ್ಟೋ ರಾತ್ರಿ ನಿದ್ದೆಬಿಟ್ಟು ಅಧ್ಯಯನ ಮಾಡಿ ಲಕ್ಷಾಂತರ ಜನರ ನಡುವೆ ಎರಡು ಹಂತದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿ ಯಾಕಾದರೂ ಈ ವೃತ್ತಿಗೆ ಬಂದ್ವೊ ಅಂತ ಅನ್ನಿಸುವ ಹಾಗೆ ಆಗಿಬಿಟ್ಟಿದೆ, ಪಾಠ ಮಾಡುವುದರ ಜೊತೆಗೆ ಹಂತ ಹಂತವಾಗಿ ಬೇರೆಲ್ಲ ಕೆಲಸಗಳನ್ನ ಅವನ ತಲೆಗೆ ಒತ್ತಿ ಇರುವ ಶಕ್ತಿಯನ್ನು ಹತ್ತಿಕ್ಕಿ ಪ್ರಪಾತಕ್ಕೆ ತಳ್ಳಿಬಿಟ್ಟಿದ್ದಾರೆ
ಮಾತೆತ್ತಿದರೆ ಸರಕಾರಿ ಶಾಲೆಯ ಶಿಕ್ಷಣದಲ್ಲಿ ಗುಣಮಟ್ಟ ಇಲ್ಲ ಫಲಿತಾಂಶ ಚೆನ್ನಾಗಿಲ್ಲ ಅಂತ ಮುಖಸಿಂಡರಿಸುವ ನಡುವೆ ಇರುವ 7 ತರಗತಿಗೆ ಎರಡು ಶಿಕ್ಷಕರನ್ನು ಕೊಟ್ಟು ಮತ್ತೊಂದು ಅತಿಥಿ ಶಿಕ್ಷಕರನ್ನು ನೇಮಿಸಿ ಇದ್ದವರ, ದಾನಿಗಳ ಕೈ ಕಾಲು ಹಿಡಿದು ಮತ್ತೊಂದೆರಡು ಗೌರವ ಶಿಕ್ಷಕರನ್ನು ಹಾಕಿಕೊಂಡು ಶಾಲೆಯನ್ನು ನಡೆಸುವಾಗ ಅಲ್ಲಿರುವ ಶಿಕ್ಷಕರ ಪರಿಸ್ಥಿತಿ ಅಧೋಗತಿ….
ಆದರೂ ತಮ್ಮ ಶಾಲೆಗೆ ಬರುವ ಮಕ್ಕಳ ಓದಿಗೆ ತೊಂದರೆಯಾಗಬಾರದೆನ್ನುವ ಉದ್ದೇಶದಿಂದ ಅವರಿಗೆ ಬೇಕಾದ ಶಿಕ್ಷಣವನ್ನು ಕೊಟ್ಟು ಅವರನ್ನು ಉತ್ತಮ ಸ್ಥಾನದಲ್ಲಿ ನೋಡಲು ಸಿಂಹಾಸನವನ್ನು ಸಿದ್ಧಪಡಿಸುವ ಶಿಕ್ಷಕರ ಕಣ್ಣೀರಿನ ಕಹಾನಿ ಅದು ಬೆಲೆ ಕಟ್ಟಲಾಗದ ನೀರಿನ ಹನಿ
ನಿರಂತರವಾಗಿ ಎರಡು ದಿನ ರಜೆ ಸಿಕ್ಕಿದರೆ ಇರುವ ತಮ್ಮ ಒಂದು ಮಗುವನ್ನು ಸರಿಯಾಗಿ ನೋಡಿಕೊಳ್ಳಲಾಗದೆ ನಿಮಗೆ ಯಾವಾಗ ಶಾಲೆ ಶುರುವಾಗುತ್ತೋ ಅಂತ ಮೂದಲಿಸುವ ಪೋಷಕರ ನಡುವೆ ನೂರಾರು ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿ ಕೊಳ್ಳುವ ಶಿಕ್ಷಕರಿಗೆ ಅವರ ತೂಕ-ಎತ್ತರ ನೋಡುವ ಕಾಯಕ ಬಿಡಿ
ಎಷ್ಟೋ ಸಲ ವಿದ್ಯಾರ್ಥಿಗಳು ಕಕ್ಕ ಮಾಡಿರುವ ಕುಂಡೆಯನ್ನು ತೊಳೆಯುವ ಪರಿಸ್ಥಿತಿಯೂ ಬಂದಿದೆ, ಮಕ್ಕಳೇ ಶೌಚಾಲಯವನ್ನು ಸ್ವಚ್ಛ ಮಾಡುತ್ತಾರೆ ಅವರಿಂದ ಮಾಡಿಸಬೇಡಿ ಎನ್ನುವ ಸುತ್ತೋಲೆಯನ್ನು ಕಳುಹಿಸುವಾಗಲೇ ಇಂಡೈರೆಕ್ಟ್ ಆಗಿ ಟೀಚರೇ ತೊಳೆದು ಬಿಡಿ ಎನ್ನುವ ಸೂಕ್ಷ್ಮ ವಿಚಾರ ಅಲ್ಲಿದೆ, ಎಷ್ಟೋ ಶಾಲೆಗಳಲ್ಲಿ ಯಾವತ್ತೋ ಶಿಕ್ಷಕರೇ ಬಾಗಿಲು ತೆಗೆದು ಸಂಜೆ ಬಾಗಿಲು ಮುಚ್ಚುವ ಪರಿಸ್ಥಿತಿ ಬಂದೊದಗಿದೆ ಅದರ ಜೊತೆಯಲ್ಲಿ ಬ್ರಷ್ ಹಿಡಿದು ಪಿನ್ನೈಲ್ ಹಾಕಿ ಶೌಚಾಲಯವನ್ನು ಸ್ವಚ್ಛಗೊಳಿಸುವ ದುಸ್ಥಿತಿಯೂ ಎದುರಾಗಿದೆ
ಇದರ ನಡುವೆ ಮಕ್ಕಳು ಅಪೌಷ್ಟಿಕತೆಯಿಂದ ಬಳಲು ತ್ತಿದ್ದಾರೆ ಅವರಿಗೆ ಮಧ್ಯಾಹ್ನ ಊಟಕ್ಕೆ ಮೊಟ್ಟೆ ಕೊಡಿ ಮೊಟ್ಟೆ ತಿನ್ನದವರಿಗೆ ಚಿಕ್ಕಿ ನೀಡಿ ಎನ್ನುವ ಮಾಹಿತಿಯು ಬಂತು, ಸ್ವಲ್ಪ ದಿನದಲ್ಲಿ ಕಡಲೆಚಿಕ್ಕಿ ವಿಷಕಾರಿಯಾಗಿದೆ ಬಾಳೆಹಣ್ಣು ಕೊಡಿ ಎಂದು ಬೇಷರತ್ತಾಗಿ ಪ್ರಕಟಿಸಿ ಬಿಟ್ಟಾಗ ಯಾವ ಅಂಗಡಿಯಲ್ಲಿ ಬಾಳೆಹಣ್ಣಿದೆ ಎಂದು ಪ್ರತಿದಿನ ತನ್ನ ಕತ್ತನ್ನು ಕೊಕ್ಕರೆಯ ಹಾಗೆ ಉದ್ದ ಮಾಡಿ ಇಣುಕುವ ಜೊತೆ ಅದನ್ನು ಹೊತ್ತು ತರುವ ಕಾಯಕ ಶಿಕ್ಷಕರಿಗೆ
ಇದರ ನಡುವೆ ಶತ್ರು ಸೈನ್ಯವನ್ನು ಮಣ್ಣುಮುಕ್ಕಿಸಲು ಪುಂಖಾನುಪುಂಖವಾಗಿ ಹಾರುತ್ತ ಬರುವಂತೆ ನಿರಂತರ ವಾಗಿ ಬಿಫ್ ಸೌಂಡ್ ಮಾಡುತ್ತಾ ಮೊಬೈಲಿಗೆ ಅಪ್ಪಳಿ ಸುವ ಅತೀ ತುರ್ತು ಈಗಲೇ ಮಾಹಿತಿ ಕೊಡಿ ಎನ್ನುವ ಆದೇಶಗಳು ಯುದ್ಧ ಸಂಧಾನವಾಗಿ ಹೋರಾಟಗಳು ನಿಂತರೂ ಇವುಗಳ ಅಬ್ಬರ ಕಡಿಮೆಯಾಗುವುದಿಲ್ಲ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇದು ರಜೆ ಸಹಿತ ಇಲಾಖೆಯಾದರೂ ಏಪ್ರಿಲ್-ಮೇ ತಿಂಗಳಿನಲ್ಲಿ ಬರುವ ಚುನಾವಣೆಗಳನ್ನ ಯಶಸ್ಸಾಗಿ ನಿಭಾಯಿಸಿ ಈ ವರ್ಷ ಸಂಸಾರದ ಜೊತೆ ಕಾಲವನ್ನು ಕಳೆಯಬಹುದು ಎಂದು ಆಲೋಚಿಸುತ್ತಿರುವಾಗಲೇ ಜಾತಿಗಣತಿ ಮಾಡಿ ಮನೆ ಮನೆಗೆ ತಿರುಗಿ ಮಾಹಿತಿಯನ್ನು ಸಂಗ್ರಹಿಸಿ ಎಂದು ಶಿಕ್ಷಕರನ್ನು ನೇಮಿಸಿಕೊಂಡಾಗಲೇ ಗೊತ್ತಾಗಿದ್ದು ನಾವು ಮತ್ತೊಂದು ಗಂಡಾಂತರಕ್ಕೆ ಸಿಲುಕಿದ್ದೇವೆಂದು,
ಪರಿಚಯವಿಲ್ಲದ ಮನೆಗೆ ಹೋಗಿ ಕಚ್ಚಲು ಹವಣಿಸುವ ನಾಯಿಯ ಬಾಯಿಂದ ತಪ್ಪಿಸಿಕೊಂಡು ಮಾಹಿತಿಯನ್ನು ಸಂಗ್ರಹಿಸಿ ವಾಪಸ್ಸು ಬರುವಾಗ ಬಿರು ಬೇಸಿಗೆಯಲ್ಲಿ ಬೆವರಿ ಮೈ ತೋಯ್ದದ್ದಕ್ಕಿಂತ ನೋವಿನಿಂದ ಮನಸ್ಸು ಮುದುಡಿದ್ದೆ ಹೆಚ್ಚು, ಇಲ್ಲೂ ಇವರಿಗೆ ಕಾಣ ಸಿಕ್ಕಿದ್ದು ಶಿಕ್ಷಕರು
ಇರಲಿ ಸರಕಾರಿ ಉದ್ಯೋಗಕ್ಕೆ ಬಂದಿದ್ದೇವೆ ಹೇಳಿದ್ದನ್ನು ಯಥಾವತ್ತಾಗಿ ಮಾಡಿದ್ದೇವೆಂದು ಸಂತೃಪ್ತಿ ಪಡು ವಾಗಲೇ ನಿಮ್ಮ ಮಾಹಿತಿ ಕೊಡಿ C ದರ್ಜೆ ನೌಕರರನ್ನು ಮತಗಟ್ಟೆ ಅಧಿಕಾರಿಯನ್ನಾಗಿ ನೇಮಿಸಬೇಕೆನ್ನುವ ಆದೇಶ ಬಂದಿದೆ ಎಂದು ಕೇಳಿದಾಗಲೇ ಮತ್ತೆ ಸುನಾಮಿ ಅಪ್ಪಳಿಸಿದ ಅನುಭವ…..
ವ್ಯಾಪ್ತಿಯಲ್ಲಿರುವ ಪ್ರತಿ ಮನೆಗೂ ತಿರುಗಿ ಮಾಹಿತಿ ಸಂಗ್ರಹಿಸಿ ಭಾವಚಿತ್ರದ ಜೊತೆ ಹೊಂದಾಣಿಕೆ ಮಾಡಿ ಸತ್ತಿದ್ದಾರೋ ಬದುಕಿದ್ದಾರೋ ಎಂದು ನೋಡುವಾಗ ಇವನ ಪಾಠ ಮಾಡುವ ಕನಸಿಗೆ ಶವ ಸಂಸ್ಕಾರ ಮಾಡಿದಂತಾಗುತ್ತೆ,,,, ಮೊಬೈಲ್ ಅನ್ನು ಯಾವುದೋ ಮಾಹಿತಿಗೋಸ್ಕರ ಒಂದರೆ ಕ್ಷಣ ತರಗತಿ ಕೋಣೆಯಲ್ಲಿ ನೋಡಿದಾಗ ಏಕಾಗ್ರತೆಯಿಂದ ವಿಚಲಿತಗೊಳ್ಳುವ ವಿದ್ಯಾರ್ಥಿಗಳು ಇನ್ನು ಮುಂದೆ ಶಿಕ್ಷಕರು
BLO ಆಗಿ ಮಾಹಿತಿಯನ್ನು ಸಂಗ್ರಹಿಸಲು ಉಪ ಯೋಗಿಸಿದಾಗ ಯಾವ ಪರಿಸ್ಥಿತಿ ಬರಬಹುದು ಇರುವ ಶಿಕ್ಷಕರು ಮತಗಟ್ಟೆ ಅಧಿಕಾರಿಯಾಗಿ ಕೆಲಸ ಮಾಡಿದರೆ ಸರಕಾರಿ ಶಾಲೆಗೆ ಮಕ್ಕಳನ್ನು ಕಳಿಸುವ ಪೋಷಕರು ಇನ್ನು ಯಾವ ಆಲೋಚನೆಯನ್ನು ಮಾಡಬಹುದು
C ದರ್ಜೆ ನೌಕರರೆಂದಾಗ ಶಿಕ್ಷಕರೇ ಇವರಿಗೆ ಕಾಣಸಿಗು ವುದಾ ಅಥವಾ ಅದೇ ಸ್ಥಾನದಲ್ಲಿರುವ ಬೇರೆ ಇಲಾಖೆ ಯವರು ಇದರಿಂದ ಹೊರತಾಗಿದ್ದಾರ ಇಡೀ ರಾಜ್ಯದಲ್ಲಿ ಶಿಕ್ಷಕ ಸಂಘಟನೆಯವರು, ಪ್ರತಿಯೊಬ್ಬ ಶಿಕ್ಷಕರು ಜೊತೆಯಾಗಿ ತಮ್ಮ ಸಮಸ್ಯೆಯ ದನಿಯನ್ನು ಕ್ರೋಢಿಕರಿಸಿ ಒಕ್ಕೊರಲ ಹೋರಾಟ ಮಾಡಿದರೆ ಇದರಿಂದ ಮುಕ್ತಿ ಸಿಗಬಹುದು ವಿನಃ ಇಲ್ಲದಿದ್ದರೆ ಸರಕಾರಿ ಶಾಲೆಯ ಬಾಗಿಲನ್ನು ಶಾಶ್ವತವಾಗಿ ಎಳೆಯಲು ನಾವೇ ಬೀಗದ ಕೈಯನ್ನು ತಂದು ಕೊಟ್ಟಂತಾಗುತ್ತೆ, ಬೋಧಿಸಬೇಕಾದ ಜೀವಗಳು ಮಾಹಿತಿ ಸಂಗ್ರಹಣೆಗೆ ಬೀದಿಸುತ್ತುವ ಪ್ರಮೇಯವೂ ಬರುತ್ತೆ…..
ಇನ್ನೊಂದೆಡೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರದ ನಡುವೆ…ಅಧಿಕಾರಿಗಳನ್ನು..ಸರ್ಕಾರದ ಹೊಸ ಹೊಸ ಯೋಜನೆಗಳನ್ನು ಪ್ರಶ್ನಿಸುವ ಮನಸ್ಥಿತಿ ಇರುವ ಶಿಕ್ಷಕರು.ಸಂಘಟನೆಗಳು ಮರೆಯಾಗುತ್ತಿವೆ.
ನಾವು ಮನುಜರು.ಸಚೇತನ, ಸೇತುಬಂಧ.ಎಫ್ ಎಲ್ ಎನ್.ಸಂಭ್ರಮ ಶನಿವಾರ..ಇವೆಲ್ಲಾ ಎಷ್ಟರ ಮಟ್ಟಿಗೆ ಉಪಯೋಗ ಆಗುತ್ತಿದೆ ಎಂಬುದು ತಿಳಿದ ವಿಷಯವೇ
ಕೇವಲ ನಮ್ಮನ್ನು ಪಾಠ ಮಾಡಲು ಬಿಡಿ..ಎಂದು ಕೇಳುವ ಧೈರ್ಯ ಸಂಘಟನೆಗಳಿಗೆ ಇಲ್ಲದಿರುವುದು ವಿಷಾದನೀಯ.ಎಚ್ಚೆತ್ತುಕೊಳ್ಳಲೇಬೇಕು
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..