ಚಿಕ್ಕಮಗಳೂರು –
ಜುಲೈ 8 ರಿಂದ ರಾಜ್ಯದ ಜಿಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ನೌಕರರಿಗೆ ಹೋರಾಟಕ್ಕೆ ಕರೆ – ಈ ಹಿಂದೆಯೂ ಹೀಗೆ ಹೋರಾಟ ಮಾಡಿ ಮನವಿ ಸಲ್ಲಿಸಿದ್ರು ನಮ್ಮ ನೌಕರರು ಅದೇನಾ ಯಿತೊ ಏನೋ ಮತ್ತೆ ಈಗ….
ಚಿಕ್ಕಮಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಕಾರ್ಯಕಾರಣಿ ಸಭೆ ನಡೆಯಿತು.ಈ ಒಂದು ಸಭೆಯಲ್ಲಿ ಮುಖ್ಯವಾಗಿ ರಾಜ್ಯದ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳ ಕುರಿತಂತೆ ಚರ್ಚೆಯನ್ನು ಮಾಡಿ ಅಂತಿಮವಾಗಿ ಅನಿರ್ದಿ ಷ್ಟಾವಧಿ ಮುಷ್ಕರಕ್ಕೆ ಸರ್ಕಾರಿ ನೌಕರರ ಸಂಘ ನಿರ್ಣಯವನ್ನು ತಗೆದುಕೊಂಡಿತು.
ಹೌದು ಹೋರಾಟಕ್ಕೂ ಮುನ್ನ ರಾಜ್ಯದ ಮೂಲೆ ಮೂಲೆಗಳಲ್ಲಿ ಸರ್ಕಾರಿ ನೌಕರರು ತಾಲ್ಲೂಕು ಜಿಲ್ಲಾ ಮಟ್ಟದಲ್ಲಿ ಮೊದಲ ಹಂತವಾಗಿ ಮನವಿ ಯನ್ನು ಸಲ್ಲಿಸಿ ನಂತರ ಜಿಲ್ಲಾ ಮಟ್ಟದಲ್ಲೂ ಕೂಡಾ ಮನವಿಯನ್ನು ಸಲ್ಲಿಸುವಂತೆ ಕರೆಯನ್ನು ನೀಡಲಾಯಿತು.
ಹೀಗಾಗಿ ಜುಲೈ 8 ರಿಂದ 14 ರವರೆಗೆ ರಾಜ್ಯದ ತುಂಬೆಲ್ಲಾ ಸರ್ಕಾರಿ ನೌಕರರ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಯನ್ನು ಮಾಡಿ ಬೇಡಿಕೆಗಳ ಕುರಿತಂತೆ ಮನವಿಯನ್ನು ಸಲ್ಲಿಸಲಿ ದ್ದಾರೆ.ಈ ಒಂದು ನಿರ್ಣಯವನ್ನು ಕಾರ್ಯಕಾ ರಣಿ ಸಭೆಯಲ್ಲಿ ತಗೆದುಕೊಳ್ಳಲಾಯಿತು
ಇನ್ನೂ ಪ್ರಮುಖವಾಗಿ ಈ ಹಿಂದೆಯೂ ಕೂಡಾ ತಾಲ್ಲೂಕು ಜಿಲ್ಲಾ ಮಟ್ಟದಲ್ಲೂ ಕೂಡಾ ಹೋರಾ ಟವನ್ನು ಮಾಡಿ ಶಾಸಕರಿಗೆ ಸಚಿವರಿಗೆ ಮನವಿ ಯನ್ನು ರಾಜ್ಯದ ತುಂಬೆಲ್ಲಾ ನೀಡಲಾಗಿತ್ತು ಸಧ್ಯ ಮತ್ತೆ ಅದೇ ಕಥೆ ಅದೇ ಹಾಡು
ಇದನ್ನೇಲ್ಲವನ್ನು ಬಿಟ್ಟು ಹೋರಾಟಕ್ಕೆ ಕರೆ ಕೊಟ್ಟರೆ ರಾಜ್ಯ ಸರ್ಕಾರ ನೌಕರರ ಹೋರಾಟಕ್ಕೆ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸುತ್ತದೆ ಇಲ್ಲವಾದರೆ ಹೋರಾಟ ಮನವಿ ಎನ್ನುತ್ತಾ ಹೋದರೆ ಸರ್ಕಾರ ಕೂಡಾ ನೊಡೊಣಾ ಮಾಡೊಣಾ ನಾವು ಸರ್ಕಾರಿ ನೌಕರರ ಪರವಾಗಿ ಇದ್ದೇವಿ ಎನ್ನುತ್ತಾ ಕಾಲಹರಣ ಮಾಡುತ್ತಾರೆ
ಹೀಗೆ ಮಾಡೊದು ಬಿಟ್ಟು ಮತ್ತೆ ರಾಜ್ಯದಲ್ಲಿ ನೌಕರರನ್ನು ಬೀದಿಗಿಳಿದು ಮನವಿ ಹೋರಾಟಕ್ಕೆ ಇಳಿಸಿದ್ದು ಸರಿನಾ ಎಂಬ ಪ್ರಶ್ನೆಯನ್ನು ರಾಜ್ಯದ ಸಮಸ್ತ ಸರ್ಕಾರಿ ನೌಕರರು ಕೇಳುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಚಿಕ್ಕಮಗಳೂರು…..