This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Local News

ಧಾರವಾಡದಲ್ಲಿ ದೊಡ್ಡ ಪ್ರಮಾಣ ದಲ್ಲಿ ಸರಣಿ ಕಳ್ಳತನ ಒಂದೇ ಕಡೆಯಲ್ಲಿ ಮೂರು ನಾಲ್ಕು ಮನೆಗಳ ಕಳ್ಳತನ ಖಾಲಿ ಇದ್ದ ಮನೆ ಬೀಗ ಹೊಡೆದು ಎನೂ ಇಲ್ಲ ಎಂದುಕೊಂಡು ಎಸ್ಕೇಫ್ ಆದ ಕಳ್ಳರು…..

WhatsApp Group Join Now
Telegram Group Join Now

ಧಾರವಾಡ –

ಕಳೆದ ಹಲವು ದಿನಗಳಿಂದ ಕಳ್ಳತನದಿಂದ ನೆಮ್ಮದಿಯಾಗಿ ನಿಟ್ಟಿಸಿರು ಬಿಟ್ಟಿದ್ದ ಧಾರವಾಡ ಜನತೆಗೆ ಕಳ್ಳರು ಮತ್ತೆ ಶಾಕ್ ನೀಡಿದ್ದಾರೆ.ಮತ್ತೆ ನಗರದಲ್ಲಿ ಸರಣಿ ಕಳ್ಳತನ ಮಾಡಿದ್ದು ನಗರದ ಕೆಲಗೇರಿಯ ಆಂಜನೇಯ ನಗರದಲ್ಲಿ ಸರಣಿ ಕಳ್ಳತನ ಮಾಡಿದ್ದು ಮೂರು ನಾಲ್ಕು ಮನೆಗಳನ್ನು ಕಳ್ಳತನ ಮಾಡಿದ್ದಾರೆ.ಆಂಜನೇಯ ನಗರದ 4ನೇ ಕ್ರಾಸ್ ನಲ್ಲಿನ ಪ್ರಕಾಶ್ ದೊಡ್ಡಮನಿ ಸಿ ಆರ್ ಪಿಎಫ್ ಪೊಲೀಸ್ ಮನೆಗೆ ಮೊದಲು ಕಳ್ಳತನ ಮಾಡಿದ್ದಾರೆ.

ಮನೆಯಲ್ಲಿ ಯಾರು ಇಲ್ಲ ಎಂದುಕೊಂಡು ಬೀಗ ಹಾಕಿದ್ದ ಮನೆಗೆ ಎಂಟ್ರಿ ಕೊಟ್ಟ ಖದೀಮರು ಕಂಪೌಂಡ್ ಜೀಗಿದು ಬಾಗಿಲು ಮುರಿದು ಮನೆಯಲ್ಲಿದ್ದ ಒಂದೂವರೆ ಕೆಜೆ ಬೆಳ್ಳಿ ಬಂಗಾರ ಮತ್ತು 60 ಸಾವಿರ ನಗದು ಹಣವನ್ನು ಕಳ್ಳತನ ಮಾಡಿದ್ದಾರೆ. ಇನ್ನೂ ಇದೇ ಕ್ರಾಸ್ ನಲ್ಲಿ ಮತ್ತೊಂದು ಬೀಗ ಹಾಕಿರುವ ಮನೆಗೆ ಎಂಟ್ರಿ ಕೊಟ್ಟ ಖದೀಮರು ಮನೆಯ ಬೀಗ ಹೊಡೆದು ಶಿವನಾಗ ಆಲದಮರ ಮನೆಗೆ ಎಂಟ್ರಿ ಕೊಟ್ಟಿದ್ದು ಮನೆಯಲ್ಲಿ ಏನು ಸಿಗದ ಹಿನ್ನಲೆಯಲ್ಲಿ ಪರಾರಿ ಯಾಗಿ ನಂತರ 8ನೇ ಕ್ರಾಸ್ ನಲ್ಲಿ ಬೀಗ ಹಾಕಿದ್ದ ರುದ್ರಪ್ಪ ಹನಜಿ ಅವರ ಮನೆಗೆ ಎಂಟ್ರಿ ಕೊಟ್ಟು ಟ್ರಜರಿ ಹೊಡೆದು ಮನೆಯಲ್ಲಿನ 10 ಸಾವಿರ ಕಳ್ಳತನ ಮಾಡಿದ್ದಾರೆ.

ಇದರೊಂದಿಗೆ ಬೀಗ ಹಾಕಿದ್ದ ಖಾಲಿ ಮನೆಯ ಬೀಗ ಹೊಡೆದು ಎಂಟ್ರಿ ಕೊಟ್ಟ ಖದೀಮರು ಮನೆಯಲ್ಲಿ ಏನು ಇಲ್ಲ ಎಂದುಕೊಂಡು ಬರಿಗೈಲಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.ಇನ್ನೂ ಈ ಒಂದು ವಿಚಾರ ತಿಳಿದ ಉಪನಗರ ಪೊಲೀಸ್ ಠಾಣೆಯ ಇನ್ಸಪೇಕ್ಟರ್ ರಮೇಶ್ ಹೂಗಾರ ಪಿಎಸ್ ಐ ಶ್ರೀಮಂತ ಹುಣಿಸಿಕಟ್ಟಿ ಮತ್ತು ಟೀಮ್ ನವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಇನ್ನೂ ಇದರೊಂದಿಗೆ ಡಿಸಿಪಿ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಪೊಟೊ ಮತ್ತು ವರದಿ ಶ್ರೀಮತಿ ಅಕ್ಷತಾ ಮಂಜು ಸರ್ವಿ ಸುದ್ದಿ ಸಂತೆ ಟೀಮ್


Google News

 

 

WhatsApp Group Join Now
Telegram Group Join Now
Suddi Sante Desk