ಹುಬ್ಬಳ್ಳಿ –
ಕಳಸಾ – ಬಂಡೂರಿ ಯೋಜನೆಗೆ ನಟ ಸುರೇಶ ಹೆಬ್ಳಿಕರ್ ವಿರೋಧ ಮಾಡುತ್ತಿದೆ ಎಂದು ಕಳಸಾ – ಬಂಡೂರಿ ಹಾಗೂ ಮಲಪ್ರಭಾ ನದಿ ಜೋಡಣೆ ಹೋರಾಟ ಸಮಿತಿ ಹೇಳಿದ್ದು ಇದನ್ನು ತೀವ್ರವಾಗಿ ಖಂಡಿಸಿದೆ.ಹೌದು
ಉತ್ತರ ಕರ್ನಾಟಕ ಜನರ ಹಾಗೂ ರೈತರ ಮಹತ್ವದ ಆಶಾದಾಯಕ ಯೋಜನೆಯಾಗಿರುವ, ಕಳಸಾ ಬಂಡೂರಿ ನಾಲೆ ತಿರುವ ಯೋಜನೆಗೆ ವಿರೋಧಿಸಿ ಜೂನ್. 3 ರಂದು ಚಿತ್ರನಟ ಸುರೇಶ್ ಹೆಬ್ಬಳ್ಳಿಕರ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆದ ಹೋರಾಟಕ್ಕೆ ಕಳಸಾ – ಬಂಡೂರಿ ಹಾಗೂ ಮಲಪ್ರಭಾ ನದಿ ಜೋಡಣೆ ಹೋರಾಟ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಮಿತಿಯ ಮುಖಂಡರು, ಬಹು ದಿನಗಳ ಬೇಡಿಕೆಯಾದ ಕಳಸಾ ಬಂಡೂರಿ ಹೋರಾಟವು ಕಳೆದ ನಾಲ್ಕು ದಶಕಗಳಿಂದ ಉತ್ತರ ಕರ್ನಾಟಕದ ಭಾಗದಲ್ಲಿ ಕುಡಿಯುವ ನೀರು ಮತ್ತು ವಿಶೇಷವಾಗಿ ನೀರಾವರಿ ಯೋಜನೆಯಾಗಿದೆ. ರೈತರು ಇದಕ್ಕಾಗಿ ಒತ್ತಾಯಿಸಿ ಹಲವಾರು ವರ್ಷಗಳಿಂದ ಹೋರಾಟಗಳು ನಡೆಯುತ್ತಿದೆ.
ಆದರೆ, ಈಗ ಪರಿಸರ ನೆಪವೊಡ್ಡಿ ನಟ ಸುರೇಶ ಹೆಬ್ಳಿಕರ್ ಗೋವಾ ರಾಜ್ಯದ ಏಜೆಂಟರಂತೆ ವರ್ತಿಸು ತ್ತಿದ್ದು, ಪರಿಸರ ವಿರೋಧಿ ಹೆಬ್ಳಿಕರ್ ಅವರು ಕೂಡಲೇ ಕ್ಷಮೆ ಯಾಚಿಸಬೇಕು ಮತ್ತು ಈ ಹೋರಾಟವನ್ನು ತಕ್ಷಣ ಕೈ ಬಿಡಬೇಕೆಂದು ಆಗ್ರಹಿಸಿದ್ದಾರೆ.ಹೋರಾಟ ಸಮಿತಿಯ ಪದಾಧಿಕಾರಿಗಳಾದ ಬಾಬಾಜಾನ್ ಮುಧೋಳ, ಬಿ.ಎಂ.ಹನಸಿ, ರಾಜಶೇಖರ್ ಮೆಣಸಿನಕಾಯಿ, ಉಳುವಪ್ಪಣ್ಣ ಬೆಳಗೆರೆ ಮತ್ತು ವಿವಿಧ ರೈತ ಪರ ಸಂಘಟನೆಗಳ ಮುಖಂಡರಾದ ಮರೀಗೌಡರ ಸುರೇಶ ತೋಟಗೇರ ಕೃಷಿಕ ಸಮಾಜದ ಮುತ್ತಣ್ಣ ಬಾಡಿನ ಸೇರಿದಂತೆ ಮು ಒತ್ತಾಯಿಸಿದ್ದಾರೆ.
ಸುರೇಶ ಹೆಬ್ಳಿಕರ್ ದಾರವಾಡದಲ್ಲಿ ಹುಟ್ಟಿ ಬೆಳೆದು, ಇಲ್ಲಿಂದಲೇ ಎತ್ತರಕ್ಕೆ ಬೆಳೆದಿದ್ದು ಈ ಭೂಮಿಯ ಋಣ ತೀರಿಸಬೇಕು. ಅದನ್ನು ಬಿಟ್ಟು ಇಂತಹ ಹೋರಾಟ ಮಾಡುವುದು ಸರಿಯಲ್ಲ. ಮುಂಬರುವ ದಿನಗಳಲ್ಲಿ ಕಳಸಾ ಬಂಡೂರಿ ನಾಲೆಯ ತಿರುವು ಪರ ಹೋರಾಟ ಗಳಲ್ಲಿ ಭಾಗವಹಿಸದೇ ಇದ್ದಲ್ಲಿ ಹಾಗೂ ಇನ್ನು ಮುಂದೆ ಯೋಜನೆ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡರೇ ಸಮಿತಿಯಿಂದ ಉಗ್ರವಾದ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ, ಇಂತಹ ನಾಟಕೀಯ ಪರಿಸರವಾದಿಗಳ ಹೋರಾಟಕ್ಕೆ ಕೈಜೋಡಿಸದಂತೆ ರಾಜ್ಯದ ಮಠಾಧೀ ಶರುಗಳಲ್ಲಿ ಸಮಿತಿಯಿಂದ ವಿನಂತಿಸಿಕೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.