ಬೆಂಗಳೂರು –
ರಾಜ್ಯದ ಶಿಕ್ಷಕರ ಸಮಸ್ಯೆ ಮತ್ತು ಬೇಡಿಕೆ ಗಳ ಕುರಿತು ಅರುಣ ಶಹಾಪೂರ ಅವರು ಶಾಲಾ ಶಿಕ್ಷಣ ಇಲಾಖೆಯ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ಚರ್ಚೆ ಮಾಡಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು ಹೌದು ಶಿಕ್ಷಕರ ಹೆಚ್ಚುವರಿ ಗೊಳಿಸುವ ಪ್ರಕ್ರಿಯೆ 2015-2025 ವರೆಗೆ ಖಾಲಿ ಇರುವ ಅನುದಾನಿತ ಶಾಲಾ -ಕಾಲೇಜುಗಳಲ್ಲಿರುವ ಬೋಧಕ ಹುದ್ದೆ ಭರ್ತಿ ಮಾಡಲು ಇಲಾಖೆಗೆ ಸಮಸ್ಯೆ ಆಗಿರುವ ಕುರಿತು ಹಾಗೂ ಕನಿಷ್ಠ ಭರ್ತಿ ಮಾಡುವವರೆಗೆ ಅತಿಥಿ ಶಿಕ್ಷಕರ ನೇಮಕಾತಿ ಅನುದಾನ ನೀಡುವ ಬೇಡಿಕೆ ಕುರಿತು
*ಸರ್ಕಾರಿ ಶಾಲೆಗಳ ಕಟ್ಟಡದ ಸ್ಥಿತಿಗತಿಯ ಕುರಿತು, ಮೂಲಭೂತ ಸೌಕರ್ಯ ಅಭಿವೃದ್ಧಿ, ಹೊಸ ಕೊಠಡಿ, ಕಟ್ಟಡದ ನಿರ್ಮಾಣ ಕಾರ್ಯಕ್ಕೆ ಅನುದಾನ ನೀಡುವ ಹಾಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಬೇಡಿಕೆ ಕುರಿತು ಚರ್ಚೆ ಮಾಡಲಾಯಿತು
ವಿಜಯಪುರ ಜಿಲ್ಲೆಯ ಡಿಡಿಪಿಐ ಹುದ್ದೆ ಭರ್ತಿ ಮಾಡದೆ ಇರುವುದರಿಂದ ಆಗುತ್ತಿರುವ ಸಮಸ್ಯೆ ಕುರಿತು ಅನುದಾನ ರಹಿತ ಶಾಲಾ -ಕಾಲೇಜುಗಳಿಗೆ ಅನುದಾ ನಕ್ಕೆ ಒಳಪಡಿಸುವ ಕುರಿತು ಚರ್ಚೆ ನಡೆಸಿ ಗಮನ ಸೆಳೆಯಲಾಯಿತು
ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಚೌಡಪ್ಪ, ಹಾಗೂ ಯುವ ಮುಖಂಡ ರಾಜು ವಾಲಿ ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..