ಧಾರವಾಡ –
ಧಾರವಾಡದ ಹೆಸರಾಂತ ಮೇರು ಸ್ಟಡಿ ಸೆಂಟರ್ ಕೇವಲ ತರಭೇತಿಯನ್ನು ನೀಡದೆ ಸಮಾಜಮುಖಿಯಾದ ಹತ್ತು ಹಲವಾರು ಕಾರ್ಯಗಳನ್ನು ಮಾಡುತ್ತದೆ ಎನ್ನೊದಕ್ಕೆ ನಾಳೆ ಹಮ್ಮಿಕೊಂಡಿರುವ ಕಾರ್ಯಕ್ರಮವೇ ಸಾಕ್ಷಿಯಾಗಿದೆ.
ಹೌದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಮತ್ತು ತಾಲೂಕು ಘಟಕ ಮತ್ತು ಮೇರು ಸಂಸ್ಥೆಯಿಂದ ನಾಳೆ ಬಾಗಲಕೋಟೆ ಯಲ್ಲಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಒಂದು ದಿನ ನವನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಪ್ರಮುಖವಾಗಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಂತೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸಿದ್ದತೆ ಮಾರ್ಗದರ್ಶನ ತರಭೇತಿಯನ್ನು ನೀಡಲಾಗುತ್ತಿದೆ.ಉಚಿತವಾದ ಈ ಒಂದು ಕಾರ್ಯಾಗಾರವಾಗಿದ್ದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು ಹಲವು ಗಣ್ಯರು ಪಾಲ್ಗೊಳ್ಳಲಿದ್ದು ಯುವಕರು ಈ ಒಂದು ತರಭೇತಿ ಕಾರ್ಯಾಗಾರದ ಲಾಭವನ್ನು ಪಡೆದುಕೊಳ್ಳುವಂತೆ ಮೇರು ಸಂಸ್ಥೆಯ ನಿರ್ದೇಶಕರಾದ ಡಾ ರುದ್ರೇಶ ಮೇಟಿ ಕರೆ ನೀಡಿದ್ದಾರೆ.