ಹುಬ್ಬಳ್ಳಿ –
ಪಾಲಿಕೆಯ ಆಯುಕ್ತರಾಗಿ ಇಂದೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಮಂಜುನಾಥ ಡೊಂಬರ – ಪಾಲಿಕೆಗೆ ಬರಲಿದ್ದಾರೆ ಮತ್ತೊರ್ವ ದಕ್ಷ ಖಡಕ್ ಅಧಿಕಾರಿ…..
ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಮತ್ತೊರ್ವ ದಕ್ಷ ಪ್ರಾಮಾಣಿಕ ಅಧಿಕಾರಿ ಯನ್ನು ಆಯುಕ್ತರನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ ಹೌದು ಕೆಎಎಸ್ ಹಿರಿಯ ಅಧಿಕಾರಿಯಾಗಿ ರುವ ಇವರನ್ನು ಸದ್ಯ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಆಯುಕ್ತರನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶವನ್ನು ಮಾಡಿದೆ.
ಇನ್ನೂ ಆದೇಶವಾಗುತ್ತಿದ್ದಂತೆ ಇತ್ತ ಮಂಜುನಾಥ ಡೊಂಬರ ಇಂದೇ ಅಧಿಕಾರವನ್ನು ವಹಿಸಿಕೊಳ್ಳಲಿ ದ್ದಾರೆ.ಹೌದು ಬೆಂಗಳೂರಿನಲ್ಲಿರುವ ಮಂಜುನಾಥ ಡೊಂಬರ ಅವರು ಆದೇಶವಾದ ನಂತರ ಯಾರನ್ನು ಭೇಟಿಯಾಗದೆ ನೇರವಾಗಿ ಪಾಲಿಕೆಗೆ ಬಂದು ಅಧಿಕಾರ ವನ್ನು ವಹಿಸಿಕೊಳ್ಳಲಿದ್ದಾರೆ.
ದಕ್ಷತೆ ಮತ್ತು ಪ್ರಾಮಾಣಿಕತೆಯ ಮೂಲಕ ಒಳ್ಳೇಯ ಅಧಿಕಾರಿಯಾಗಿರುವ ಇವರು ಇನ್ನೂ ಮುಂದೆ ಪಾಲಿಕೆ ಯಲ್ಲಿ ಆಯುಕ್ತರಾಗಿ ಕಾರ್ವ ನಿರ್ವಹಿಸಲಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..