LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಧಾರವಾಡದ ಹೆಬ್ಬಳ್ಳಿ ಯಲ್ಲಿ ಶಾಲಾ ಪ್ರಾರಂಭೊತ್ಸವ ಹೇಗಿತ್ತು ಗೊತ್ತಾ

ಹೆಬ್ಬಳ್ಳಿ -

ಹೆಬ್ಬಳ್ಳಿಯಲ್ಲಿ ಶಾಲಾ ಆರಂಭೋತ್ಸವ ಶಾಲೆಯ ಎಲ್ಲಾ ಶಿಕ್ಷಕರಿಗೆ ಮಕ್ಕಳ ಸಮ್ಮುಖದಲ್ಲಿ ಸತ್ಕಾರ ಮಾಡಿ ಶಾಲೆಗೆ ಮಕ್ಕಳನ್ನು ವಿಶಿಷ್ಟವಾಗಿ ಸ್ವಾಗತಿಸಿ ದರು.

ಹೌದು ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಯಲ್ಲಿ ಶಾಲಾ ಆರಂಭೋತ್ಸವವನ್ನು ಶಾಲೆಯ ಎಲ್ಲಾ ಶಿಕ್ಷಕ-ಶಿಕ್ಷಕಿಯರಿಗೆ ಸತ್ಕರಿಸುವ ಮೂಲಕ ಮಕ್ಕಳ ಸಮ್ಮುಖದಲ್ಲಿ ತುಂಬಾ ವಿಶಿಷ್ಟ ರೀತಿಯಲ್ಲಿ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿ ಯವರು ಆಚರಿಸಿದರು

ಈ ಸಂದರ್ಭದಲ್ಲಿ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಶಾಲಾಭಿವೃದ್ದಿ ಸಮಿತಿಯ ಸದಸ್ಯ ಚಂದ್ರ ಶೇಖರ ಮಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಭಾರತದ ಭವಿಷ್ಯ ನಮ್ಮ ಗೌರವಾನ್ವಿತ ಗುರುಗಳ ಹಾಗೂ ಮುದ್ದು ಮಕ್ಕಳ ಕಣ್ಣುಗಳಲ್ಲಿದೆ, ಗುರುಗಳ ಹಾಗೂ ಮಕ್ಕಳ ಕಣ್ಣುಗಳಲ್ಲಿ ಉಲ್ಲಾಸ ಸಂತೋಷ ನಗು ಇದ್ದರೆ ಈ ದೇಶಕ್ಕೆ ಭವಿಷ್ಯ ಇದೆ ಒಂದು ವೇಳೆ ಗುರು ಮತ್ತು ಮುದ್ದು ಮಕ್ಕಳ ಕಣ್ಣು ಗಳಲ್ಲಿ ನಿರುತ್ಸಾಹ, ನೋವು,ತುಂಬಿದ್ದರೆ ನಮ್ಮ ದೇಶಕ್ಕೆ ಭವಿಷ್ಯವಿಲ್ಲ ಆದ್ದರಿಂದ ಸಮಾಜದ ಪ್ರತಿಯೊಬ್ಬರೂ ಗುರುಗಳನ್ನು ಗೌರವಿಸುವ ಹಾಗೂ ಮಕ್ಕಳ ಕಲಿಕೆಗೆ ಉತ್ತೇಜನ ನೀಡಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ದಿ ಹಾಗೂ ಮೇಲು ಸ್ತುವಾರಿ ಸಮಿತಿಯ ಅದ್ಯಕ್ಷ ಈರಣ್ಣ ತಟ್ಟಿಮನಿ ಕರೋನಾ ಕಾರಣದಿಂದಾಗಿ ಎರಡು ವರ್ಷಗಳಿಂದ ಮುಖಾಮುಖಿ ಕಲಿಕೆ ಸಾಧ್ಯವಾಗಿಲ್ಲ ಈಗ ಕರೋನ ಇಳಿಮುಖವಾಗಿದೆ ಸರಕಾರ 6- ರಿಂದ 8. ನೆಯ ತರಗತಿಯನ್ನು ಆರಂಭಿಸಲು ಕರೋನಾ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಶಾಲೆಯ ಸ್ವಚ್ಚತೆಯ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸರಕಾರದ ನಿಯಮಾವಳಿಗಳನ್ನು ಪಾಲಿಸಿಕೊಂಡು ಮಕ್ಕಳ ಕಲಿಕೆಯನ್ನು ಚುರುಕುಗೊಳಿಸಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಮತ್ತೊಬ್ಬ ಮುಖ್ಯ ಅತಿಥಿ ಹೆಬ್ಬಳ್ಳಿ ಕ್ಲಸ್ಟರ್ ಸಂಪ ನ್ಮೂಲ ವ್ಯಕ್ತಿ ಮುಲ್ಲಾನವರ ಪಾಲ್ಗೊಂಡು ಶಾಲಾ ಆರಂಭದ ಸವಿಸ್ತಾರವಾದ ಮಾಹಿತಿಯನ್ನು ಒಂದು ವರ್ಗ ಕೊಠಡಿಯಲ್ಲಿ ಮಕ್ಕಳ ಅನುಪಾತ ಹಾಗೂ ಶಿಕ್ಷಕರು ವಹಿಸಬೇಕಾದ ಸುರಕ್ಷತಾ ಕ್ರಮಗಳು ಹಾಗೂ ಇಲಾಖೆ ನೀಡಿದ ಸಲಹೆ ಸೂಚನೆಗಳನ್ನು ವಿವರಿಸಿದರು, ಕೆ ಜಿ ಎಸ್ ಶಾಲೆಯ ಅದ್ಯಕ್ಷ ಸುರೇಶ ಅಂಬಿಗೇರ( ಸುಣಗಾರ) ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷರಾದ ಸರೋಜ ರವದಿ ಭೀಮಪ್ಪ ಕೊಟಬಾಗಿ ಶಿವಾನಂದ ತಳವಾರ ಹಟೇಲಸಾಬ ಗುಡಸಲಮನಿ ಕಸ್ತೂರಿ ಸವದತ್ತಿ ಗಂಗವ್ವ ಭೋವಿ ಅನ್ನಪೂರ್ಣ ಮಾಳಾಪೂರ ಸುಜಾತ ಹಂಚಿನಾಳ ರತ್ನ ಹೂಲಿ ಸೃತಿ ಮೇದಗೊಪ್ಪ ಲಕ್ಷ್ಮಿ ಉಪ್ಪಿನ ಮಲ್ಲಮ್ಮ ಕುಂಬಾರ ರಾಜೇಶ ಲಕ್ಕಮ್ಮನವರ ಶಿವಕುಮಾರ್ ಹೂಗಾರ ಶಿವಾನಂದ ಹಡಪದ ಶಂಕ್ರಪ್ಪ ಮುಳ್ಳೂರ ಮಂಜುನಾಥ ಸಾಲಿ ಶಿವಾನಂದ ಹೂಗಾರ ಸೇರಿದಂತೆ ಎಲ್ಲಾ ಶಿಕ್ಷಕರು ಹಾಜರಿದ್ದರು, ನಾಗರತ್ನ ಅಂಚಟಗೇರಿ ಸ್ವಾಗತಿಸಿ ದರು, ಮುಖ್ಯ ಶಿಕ್ಷಕ ಎಂ ಆರ್ ಪಾಲ್ತಿ ನಿರೂಪಿಸಿ ದರು, ಎಸ್ ಎ ಜಾಧವ ವಂದಿಸಿದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...