LIVE TV LocalCrimeNationalInternationalPoliticsEducationTechnologyEntertainmentSportsFeature
State News

ಈ ಸರ್ಕಾರಿ ಮಾದರಿ ಶಾಲೆ ಹೇಗಿದೆ ಗೊತ್ತಾ - ಸುಂದರ ಶಾಲೆ ನೋಡಲು ಎರಡು ಕಣ್ಣುಗಳು ಸಾಲೊದಿಲ್ಲ..... ಮಾದರಿ ಶಾಲೆ.....

ಚಿತ್ರದುರ್ಗ -

ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವವರೆ ಹೆಚ್ಚು ಇಂತಹ ಪರಿಸ್ಥಿತಿಯಲ್ಲಿ ಸರಕಾರಿ ಶಾಲೆಗೆ ಹೊಸ ರೂಪ ಕೊಟ್ಟು ಖಾಸಗಿ ಶಾಲೆಗಿಂತ ಕಮ್ಮಿ ಇಲ್ಲವಂತೆ ಸರಕಾರಿ ಶಾಲೆಯ ಚಿತ್ರಣವನ್ನು ಬದಲಿಸಿ ದ್ದಾರೆ.

ಹೌದು ಇದಕ್ಕೆ ಸಾಕ್ಷಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಗೋಸಿಕೆರೆ ಹೊಸ ಕಪಿಲೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

ಲಾಕ್ ಡೌನ್ ಸಮಯವನ್ನು ಬಳಸಿಕೊಂಡು ಶಾಲೆ ಯ ಪರಿಸರವನ್ನೆ ಉತ್ತಮ ಗೊಳಿಸಿ ಮಕ್ಕಳ ಕಲಿಗೆ ಬೇಕಾಗುವಂತಹ ಪಠ್ಯ ಪೂರಕ ವಾತವರಣವನ್ನು ಸೃಷ್ಠಿಸಿದ್ದಾರೆ.

ಈ ಒಂದು ಪಾಠ ಶಾಲೆಯ ಚಿಣ್ಣರ ಚಿತ್ರಲೋಕಕ್ಕೆ ಸುಲಭ ರೀತಿಯಲ್ಲಿ ಅಕ್ಷರ ಅಭ್ಯಾಸ ಮಾಡಲು ವಿನೂತನ ಪ್ರಯತ್ನದ ಮೂಲಕ ಮಕ್ಕಳನ್ನು ಆಕ ರ್ಷಣೆ ಮಾಡುತ್ತಿದ್ದಾರೆ.

ಇನ್ನೂ ಶಾಲೆಯಲ್ಲಿ 1 ರಿಂದ 5 ನೇ ತರಗತಿಯವರಿಗೆ ಕಲಿಯಲು ಅವಕಾಶವಿದೆ ಶಾಲೆಯಲ್ಲಿ 30 ವಿದ್ಯಾ ರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಶಾಲೆಯು ತಾಲ್ಲೂಕಿನಲ್ಲಿಯೇ ವಿಭಿನ್ನವಾದ ಶಾಲೆಯೆಂದರೆ ತಪ್ಪಾಗಲಾರದು.

ಶಾಲೆಯ ಗೋಡೆಗಳನ್ನು ಪುಸ್ತಕದ ಆಳೆಗಳಂತೆ ಪರಿವರ್ತಿಸಿ ಅಕ್ಷರಗಳನ್ನು ಚಿತ್ರಿಸಿದ್ದಾರೆ ಪ್ರಪಂಚದ ಬಹುಮುಖ್ಯ ವಿಷಯಗಳ ಕುರಿತಾದ,ವಿಜ್ಞಾನ ವಿಷ ಯಗಳ ಕುರಿತು ಮಾಹಿತಿ ನೀಡುವ ಚಿತ್ರಗಳನ್ನು ಶಾಲೆ ಗೋಡೆಯ ಮೇಲೆ  ಬರೆಸಿದ್ದಾರೆ.

ಇದರಿಂದ  ಸುಲಭ ರೀತಿಯಲ್ಲಿ ಅಕ್ಷರಗಳು ಮಕ್ಕಳು ಕಲಿಯಲು ಸಹಾಯ ವಾಗುವಂತೆ ಕಾರ್ಯ ವನ್ನು ಗೋಸಿಕೆರೆ ಹೊಸಕಪಿಲೆ ಶಾಲೆಯ ಶಿಕ್ಷಕ ದಿನೇಶ್  ಮಾಡಿದ್ದಾರೆ.

ಶಾಲೆ ಎಲ್ಲಾ ಗೋಡೆಗಳ ಮೇಲೆ ಕಲಿಕೆಯ ವಿಷಯ ಗಳ ಚಿತ್ರಗಳ ನ್ನು ರಚನೆ ಮಾಡಿಸಿ ಮಕ್ಕಳ ಸುಲಭ  ಕಲಿಕೆಗೆ ದಾರಿಯಾಗಿದೆ. ಸರ್ಕಾರಿ ಶಾಲೆಗಳೆಂದರೆ ಎಲ್ಲರ ಮನಸ್ಸಲ್ಲಿ ಮೂಡುವುದು ಸರಿಯಾದ ಸಮಯಕ್ಕೆ ಶಿಕ್ಷಕರು ಶಾಲೆಗೆ ಬರುವುದಿಲ್ಲ‌ ಬಂದರು ನೆಟ್ಟಗೆ ಅಕ್ಷರ ಅಭ್ಯಾಸ ಮಾಡಿಸಲ್ಲ ಎಂದು ಹಳ್ಳಿಗ ಳಲ್ಲಿ ಸರ್ವೆ ಸಾಮಾನ್ಯವಾಗಿ ಮಾತನಾಡಿಕೊಳ್ಳು ವುದೇ ಜಾಸ್ತಿ.

ಆದರೆ ಗೋಸಿಕೆರೆ ಹೊಸಕಪಿಲೆ ಶಾಲೆ ಅಕ್ಷರ ಅಭ್ಯಾಸಕ್ಕೂ ಸೈ, ಕಂಪ್ಯೂಟರ್ ಕಲಿಕೆಗೆ ಸೈ ಎನಿಸಿಕೊಂಡಿದೆ.ಶಾಲೆಯಲ್ಲಿ ಎಲ್ಲಾ ಮಕ್ಕಳಿಗೆ ಶಾಲೆ ಕಟ್ಟಡದ ಮೇಲೆ ಅಕ್ಷರಗಳು, ಇತರೆ ವಿಷಯಗಳ ಕುರಿತು ಮಾಹಿತಿ ನೀಡುವ ಚಿತ್ರಗಳ ರಚನೆ ಮಾಡ ಲಾಗಿದೆ.

https://youtu.be/EzKzcBtPAC0

ಮಕ್ಕಳಿಗೆ ಅ ಚಿತ್ರಗಳ ಬಗ್ಗೆ ಬರೆದಿರುವ ಅಕ್ಷರಗಳ ಬಗ್ಗೆ ಕೇಳಿದರೆ ಸಾಕು ಥಟ್ ಅಂತಹ ಹೇಳುತ್ತಾರೆ. ಅಷ್ಟರ ಮಟ್ಟಿಗೆ ಶಾಲೆಯ ಶಿಕ್ಷಕರು ಶಿಕ್ಷಣದ ಜ್ಞಾನ ಮಕ್ಕಳಿಗೆ ನೀಡುತ್ತಿದ್ದಾರೆ ಶಿಕ್ಷಕ ದಿನೇಶ್.

https://youtu.be/dM7067JlTF0

ಶಾಲೆಯ ಆವರಣದಲ್ಲಿ 30 ಕ್ಕು ಹೆಚ್ಚು ಗಿಡಗಳನ್ನು ನೆಡಲಾಗಿದೆ. ಈ ಗಿಡಗಳ ಸುತ್ತಮುತ್ತ ಮಕ್ಕಳ ಆಟವಾಡಲು ಆಟದ ಸಾಮಾಗ್ರಿಗಳು ಕೂಡ ಆವರಣದಲ್ಲಿ ಇಡಲಾಗಿದೆ ಮಕ್ಕಳು ಆಟವಾಡಿ ಮರಗಳ ನೆರಳಲ್ಲಿ ವಿಶ್ರಾಂತಿ ಪಡೆಯುವಂತಹ ವಾತವರಣವು ಕೂಡ ಇದೆ. ಲಾಕ್ ಡೌನ್ ಸಮಯ ವನ್ನು ಬಳಸಿಕೊಂಡು ಶಾಲೆಯನ್ನು ಅಭಿವೃದ್ದಿ ಪಡಿಸಲಾಗಿದೆ.ಇದೊಂದು ಉತ್ತಮ ಕಾರ್ಯ ವಾಗಿದೆ ಎಂದು ಪೋಷಕರು ಹಾಗೂ ಅಧಿಕಾರಿಗಳು ಪ್ರಸಂಶಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...