LIVE TV LocalCrimeNationalInternationalPoliticsEducationTechnologyEntertainmentSportsFeature
State News

ನನ್ನ ಪುಸ್ತಕ ಹಾಳಾಗಿವೆ ಸಹಾಯ ಮಾಡಿ ವಿದ್ಯಾರ್ಥಿನಿಯ ಅಳಲು ಬದುಕು ಕಸಿದುಕೊಂಡ ಮಳೆರಾಯ.....

ಗದಗ -

ಮಳೆರಾಯನ ಅಬ್ಬರಕ್ಕೆ ವಿದ್ಯಾರ್ಥಿ ಯೊಬ್ಬಳು ತನ್ನ ಪುಸ್ತಕ ಗಳನ್ನು ಕಳೆದುಕೊಂಡು ಕಣ್ಣೀರಾಕಿದ ಘಟನೆ ಗದಗ ನಲ್ಲಿ ಕಂಡು ಬಂದಿದೆ‌.ಹೌದು ಕಡು ಬಡತನದಲ್ಲಿ ಹುಟ್ಟಿದ ಸೊಮೀಯಾ ಅಂಡೆವಾಲ ಎಂಬ ವಿದ್ಯಾರ್ಥಿನಿ ತನ್ನ ಪುಸ್ತಕ ಹಾಳಾಗಿರುವುದನ್ನು ನೋಡಿ ಕಣ್ಣೀರಿಟ್ಟಿ ದ್ದಾಳೆ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಸಾಕಷ್ಟು ಪ್ರಮಾಣ ದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಇದರಿಂದಾಗಿ ವಿದ್ಯಾರ್ಥಿ ನಿಯೊಬ್ಬಳ ಪುಸ್ತಕ ಗಳು ಹಾಳಾಗಿವೆ.

ವಿದ್ಯಾರ್ಥಿಗಳು ಓದುವ ಪುಸ್ತಕಗಳಿಗೂ ಹಾನಿಯಾಗಿವೆ. ಹಾಳಾದ ಪುಸ್ತಕ ನೋಡಿ ವಿದ್ಯಾರ್ಥಿನಿಯೊಬ್ಬಳು ಕಣ್ಣೀರು ಹಾಕುತ್ತಿದ್ದ ದೃಶ್ಯ ಗದಗದ ಬೆಟಗೇರಿಯ ಮಂಜುನಾಥ ನಗರದಲ್ಲಿ ಕಂಡುಬಂತು.ಹಾಳಾದ ಪುಸ್ತಕ ನೋಡಿ ಕಣ್ಣೀರು ಹಾಕುತ್ತಿದ್ದಾಳೆ ವಿದ್ಯಾರ್ಥಿ ನಿ ಕಡು ಬಡತನದಲ್ಲಿ ಹುಟ್ಟಿದ ಸೊಮೀಯಾ ಅಂಡೆವಾಲ ಎಂಬಾಕೆ ಮಂಜು ನಾಥ ನಗರದ ನಂಬರ್ 4ರ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.ಈಕೆ ಬಡವಳಾ ದರೂ ಓದಿನಲ್ಲಿ ಜಾಣೆ.ಈಕೆಗೆ ಶಾಲೆಯ ಶಿಕ್ಷಕರು ಓದಲು, ಬರೆಯಲು ಪುಸ್ತಕಗಳನ್ನು ಕೊಡಿಸಿದ್ದರು.ಕಷ್ಟಪಟ್ಟು ವಿದ್ಯಾ ಭ್ಯಾಸ ಮಾಡುತ್ತಿದ್ದಳು.ಆದರೆ ಜಡಿ ಮಳೆ ಆಕೆಯ ಕನಸು ಗಳಿಗೀಗ ತಣ್ಣೀರೆರಚಿದೆ.

ಮಳೆಯಿಂದಾಗಿ ಸೊಮೀಯಾಳ ಬ್ಯಾಗ್ ನಲ್ಲಿದ್ದ ಪುಸ್ತಕ ಗಳು ಸಂಪೂರ್ಣ ಹಾಳಾಗಿದ್ದು ಕಣ್ಣೀರು ಹಾಕುತ್ತಲೇ ಬಿಸಿಲಿನಲ್ಲಿ ಒಣಗಿಸುತ್ತಿದ್ದಾಳೆ.ನನಗೆ ಯಾರಾದರೂ ಪುಸ್ತಕಗಳನ್ನು ಕೊಡಿಸಿ ಅನ್ನೋದು ಆಕೆಯ ಮನವಿ. ಸೊಮೀಯಾಗೆ ತಾಯಿಯಿಲ್ಲ.ಅಜ್ಜಿಯ ಜೊತೆ ಪುಟ್ಟ ಮನೆಯಲ್ಲಿ ಈಕೆಯ ವಾಸ.ಬಡತನದಲ್ಲಿ ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆಯುವ ಕನಸು ಕಾಣುತ್ತಿರುವ ಪುಟಾಣಿಗೆ ಮಳೆಯಿಂದ ಶಿಕ್ಷಣಕ್ಕೆ ಕೊಂಚ ಅಡ್ಡಿಯಾಗಿದೆ. ನೊಂದ ವಿದ್ಯಾರ್ಥಿನಿಗೆ ಸಹೃದಯರು ಸಹಾಯ ಮಾಡಬ ಹುದು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...