LIVE TV LocalCrimeNationalInternationalPoliticsEducationTechnologyEntertainmentSportsFeature
State News

ಬೇಸಿಗೆ ರಜೆಯ ಅವಧಿ ವಿಸ್ತರಣೆ – ರಜೆಯ ನಂತರ ಶಾಲೆಗಳು ಯಾವಾಗ ಆರಂಭವಾಗಲಿವೆ ಸಂಪೂರ್ಣ ಮಾಹಿತಿ.....

ಬೆಂಗಳೂರು -

ಬೇಸಿಗೆ ರಜೆಯ ಅವಧಿ ವಿಸ್ತರಣೆ – ಜೂನ್ ಎರಡನೇಯ ವಾರದಲ್ಲಿ ಆರಂಭವಾಗಲಿವೆ ಶಾಲೆಗಳು ಹೌದು

ಈ ಬಾರಿ ಶಾಲೆಗಳಿಗೆ ಬೇಸಿಗೆ ರಜೆಯ ಅವಧಿ ಯನ್ನು ವಿಸ್ತರಣೆ ಮಾಡುವ ಕುರಿತಂತೆ ಮಾತು ಗಳು ಚರ್ಚೆಗಳು ನಡೆಯುತ್ತಿವೆ ಜೂನ್ ಎರಡನೇ ವಾರದಲ್ಲಿ ಶಾಲೆಗಳು ಈ ಬಾರಿ ಆರಂಭ ಮಾಡುವ ಕುರಿತಂತೆ ಮಾತುಕತೆ ನಡೆದಿದೆ.ಹೌದು ಪರೀಕ್ಷೆ ವಿಳಂಬ, ಚುನಾವಣೆ,ಬಿಸಿಲಿನ ತಾಪ ಮಾನ ಹಾಗೂ ಫಲಿತಾಂಶ ಘೋಷಣೆಯು ಸೇರಿದಂತೆ ಹಲವು ಕಾರಣದಿಂದಾಗಿ ಈ ಭಾರಿ ಬೇಸಿಗೆ ರಜೆ ವಿಸ್ತರಣೆ ಆಗಲಿದ್ದು ಶಾಲಾರಂಭ ವಿಳಂಬವಾಗೋ ಸಾಧ್ಯತೆ ಇದೆ.

ರಾಜ್ಯದಲ್ಲಿ ಸದ್ಯ 5, 8 ಮತ್ತು 9 ನೇ ತರಗತಿಯ ಪರೀಕ್ಷೆ ವಿಳಂಬದ ಸಂಗತಿ ಸದ್ದು ಮಾಡುತ್ತಿದೆ. ಸದ್ಯ ಮುಂದಿನ. ಸೋಮವಾರದಿಂದ ಪರೀಕ್ಷೆ ಆರಂಭವಾಗೋ ಮುನ್ಸೂಚನೆ ಸಿಕ್ಕಿದ್ದರೂ ಸರ್ಕಾರದ ಆದೇಶಕ್ಕೆ ತಡೆ ಸಿಗೋ ಸಾಧ್ಯತೆಗಳು ದಟ್ಟವಾಗಿದೆ. ಪರೀಕ್ಷೆ ವಿಳಂಬ, ಚುನಾವಣೆ, ಬಿಸಿಲು ಹಾಗೂ ಫಲಿತಾಂಶ ಘೋಷಣೆಯು ಸೇರಿದಂತೆ ಹಲವು ಕಾರಣಕ್ಕೆ ಈ ಭಾರಿ ಬೇಸಿಗೆ ರಜೆ ವಿಸ್ತರಣೆ ಆಗಲಿದ್ದು ಶಾಲಾರಂಭ ವಿಳಂಬ ವಾಗೋ ಸಾಧ್ಯತೆ ಇದೆ.

ಬಿರು ಬೇಸಿಗೆ ಕಾಲಿಟ್ಟಿದೆ. ಬೆಂಗಳೂರು ಸೇರಿ ದಂತೆ ರಾಜ್ಯದಾದ್ಯಂತ ನೀರಿನ ಕೊರತೆಯೂ ಕಾಡುತ್ತಿದೆ‌. ಇದರ ಮಧ್ಯೆ ಪರೀಕ್ಷಾ ಜ್ವರವೂ ಜೋರಾಗಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಿದ್ದು ಈ ಮಧ್ಯೆ ಐದು, ಎಂಟು ಹಾಗೂ ಒಂಬತ್ತನೇ ತರಗತಿಯ ಪರೀಕ್ಷೆ ವಿಚಾರ ಈ ಕೋರ್ಟ್ ಅಂಗಳದಿಂದ ಪೈನಲ್ ತೀರ್ಪು ಬಂದಿದೆ ಸದ್ಯ ಹೈಕೋರ್ಟ್ ಪರೀಕ್ಷೆಗೆ ಅನುಮತಿ ನೀಡಿದೆ. ಸರ್ಕಾರವೂ ಬೋರ್ಡ್ ಎಕ್ಸಾಂ ಗೆ ದಿನಾಂಕ ನಿಗದಿಗೊಳಿಸಿದೆ.

ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತೊಂದರೆಯಾಗ ದಂತೆ ಒಂಬತ್ತು ಹಾಗೂ ಇತರ ತರಗತಿಗಳ ಪರೀಕ್ಷಾ ದಿನಾಂಕ ನಿಗದಿಪಡಿಸಲಾಗಿದೆ. ಆದರೆ ಇದೆಲ್ಲದರ ಪರಿಣಾಮ ಈ ಭಾರಿ ಬೇಸಿಗೆ ರಜೆಯ ಮೇಲಾಗಲಿದ್ದು ಕಲಿಕೆಯ ಕಾರಣಕ್ಕೆ ಬೇಸಿಗೆ ರಜೆಯನ್ನು ಮೊಟಕುಗೊಳ್ಳುತ್ತಿತ್ತು. ಆದರೆ ಈ ಭಾರಿ ಬೇಸಿಗೆ ರಜೆ ಮುಂದುವರೆಯಲಿದ್ದು ಜೂನ್ 10 ವೇಳೆಗೆ ಶಾಲೆ ಆರಂಭವಾಗಬಹುದು.

ಪ್ರತಿಭಾರಿಯೂ ಮೇ 24 ರ ವೇಳೆಗೆ ಶಾಲಾರಂಭ ಮಾಡಲಾಗುತ್ತಿತ್ತು. ರಿವಿಸನ್ ಹಾಗೂ ಶಾಲಾ ತರಗತಿಗಳಿಗೆ ಮಕ್ಕಳನ್ನು ಅಣಿಗೊಳಿಸುವ ಕಾರಣಕ್ಕೆ ಶಾಲಾ ಆರಂಭೋತ್ಸವ, ಶಾಲೆಗೆ ದಾಖಲೀಕರಣದಂತಹ ಹಲವು ಕಾರ್ಯಕ್ರಮ ಗಳನ್ನು ಶಿಕ್ಷಣ ಇಲಾಖೆ ಹಮ್ಮಿಕೊಳ್ಳುತ್ತಿತ್ತು. ಆದರೆ ಈ ಭಾರಿ ಶಾಲಾರಂಭ ಜೂನ್ ಎರಡನೇ ವಾರಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ‌ ಇದೆ.

ಪ್ರತಿಭಾರಿಯೂ ಚುನಾವಣೆ ಪ್ರಕ್ರಿಯೆ ಎರಡು ತಿಂಗಳಲ್ಲಿ ಮುಕ್ತಾಯಗೊಳ್ಳುತ್ತಿತ್ತು. ಆದರೆ ಈ ಭಾರಿ ದೇಶದಾದ್ಯಂತ ಏಳು ಹಂತದಲ್ಲಿ ಚುನಾ ವಣೆ ನಡೆಯುತ್ತಿದೆ.ವಿಧಾನಸಭೆ, ಉಪಚುನಾ ವಣೆ ಹಾಗೂ ಲೋಕಸಭಾ ಚುನಾವಣೆ ಎಲ್ಲವೂ ಸೇರಿ ಹಲವು ಹಂತದಲ್ಲಿ ದೇಶದ 500 ಕ್ಕೂ ಹೆಚ್ಚು ಸ್ಥಾನಗಳಿಗೆ ಎಲೆಕ್ಷನ್ ನಡೆಯುತ್ತಿದೆ.

ಹೀಗಾಗಿ ಮತದಾನದ ಬಳಿಕ ಮತ ಎಣಿಕೆಗೆ ಬರೋಬ್ಬರಿ 1 ತಿಂಗಳವರೆಗಿನ ಕಾಲಾವಲಾಶ ವಿದೆ. ಜೂನ್ 4. ಕ್ಕೆ ಮತ ಎಣಿಕೆ ನಡೆಯೋದ ರಿಂದ ಶಾಲೆಗಳು ಚುನಾವಣಾ ಆಯೋಗದ ಹಿಡಿತದಲ್ಲೇ ಇರುತ್ತವೆ. ಬಹುತೇಕ ಶಾಲೆಗಳಲ್ಲೇ ಚುನಾವಣಾ ಪ್ರಕ್ರಿಯೆ ನಡೆಯೋದು. ಚುನಾವಣೆ ಬಳಿಕ ಶಾಲೆಗಳನ್ನು ಸ್ಟ್ರಾಂಗ್ ರೂಂ ಆಗಿ ಪರಿವ ರ್ತಿಸೋದರಿಂದ ಶಾಲೆಗಳನ್ನು ಆರಂಭಿಸುವುದು ಕಷ್ಟ.

ಹೀಗಾಗಿ ಸರ್ಕಾರ ಸಾಮೂಹಿಕ ಶಾಲಾರಂಭ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಡ್ಡಿಯಾ ಗುತ್ತದೆ. ಇದೇ ಕಾರಣಕ್ಕೆ ಈ ಭಾರಿ ಶಾಲೆಗಳು ಜೂನ್ 10 ರ ವೇಳೆಗೆ ಆರಂಭವಾಗೋ ಸಾಧ್ಯತೆ ಇದೆ. ಇನ್ನೊಂದೆಡೆ ದೇಶವೂ ಸೇರಿದಂತೆ ರಾಜ್ಯದ ಎಲ್ಲೆಡೆ ಬಿಸಿಲಿನ ತಾಪ ಎಲ್ಲೇ ಮೀರಿದೆ. ಹೀಗಾಗಿ ಮಕ್ಕಳು ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.‌

ನೀರಿನ ಕೊರತೆಯೂ ಶಾಲೆಗಳನ್ನು ಬಾಧಿಸುತ್ತಿದೆ. ಈ ಭಾರಿ ಮಳೆಯೂ ಕೂಡ ವಿಳಂಬವಾಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡುತ್ತಿ ದ್ದಾರೆ.ಈ ಎಲ್ಲಾ ಕಾರಣಕ್ಕಾಗಿ ಬೇಸಿಗೆ ರಜೆಯನ್ನು ವಿಸ್ತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಆದರೆ ಇದರಿಂದ ಮಕ್ಕಳು ತುಂಬ ಅವಧಿಯ ವರೆಗೆ ಶೈಕ್ಷಣಿಕ ಚಟುವಟಿಕೆಯಿಂದ ಹೊರಗುಳಿ ದಂತಾಗಲಿದ್ದು

ಇದು ಮಕ್ಕಳ ಕಲಿಕೆ ಹಾಗೂ ಶಾಲಾ ದಾಖಲಾತಿ  ಯ ಮೇಲೆ ಪರಿಣಾಮ ಬೀರುತ್ತದೆ ಎಂದು ಶೈಕ್ಷಣಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಚುನಾವಣೆ,ಬಿಸಿಲು ಹಾಗೂ ಪರೀಕ್ಷಾ ವಿಳಂಬ ಶಾಲಾರಂಭದ ಅವಧಿ ವಿಸ್ತರಣೆಗೆ ಕಾರಣವಾಗ್ತಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...