LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಮಾನ್ಯ ಷಡಕ್ಷಾರಿ, ಶಂಭುಲಿಂಗನಗೌಡ ಅವರಿಗೆ ಶಿಕ್ಷಕರ ಸಂದೇಶ....

ಬೆಂಗಳೂರು -

ಮಾನ್ಯ ಷಡಕ್ಷರಿಯವರು,ರಾಜ್ಯಾಧ್ಯಕ್ಷರು ಕ. ರಾ. ಸ. ನೌ. ಸಂಘ, ಬೆಂಗಳೂರು ಮಾನ್ಯ ಶಂಭುಲಿಂಗನಗೌಡರು ಅಧ್ಯಕ್ಷರು, ಕ. ರಾ. ಪ್ರಾ. ಶಾ. ಶಿ. ಸಂಘ ಬೆಂಗಳೂರು.

ವಿಷಯ :- ದಿನಾಂಕ 08/11/21 ರಂದು ಶಿಕ್ಷಕರ ಸಮಸ್ಸೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ನಡೆಯಲಿರುವ ಸಭೆಯಲ್ಲಿ "ಶಿಕ್ಷಕರ ವರ್ಗಾವಣೆಗೆ" ಸಂಬಂಧಿಸಿದಂತೆ ಈ ಕೆಳಗಿನ ಸಮಸ್ಸೆಯನ್ನು ಪ್ರಸ್ತಾಪಿಸಿ ಸರ್ಕಾರದಿಂದ ಪರಿಹಾರ ದೊರಕಿಸಿಕೊಡಲು ಕೋರಿ.

ಮಾನ್ಯರೆ, 2020 ರ ಸೆಪ್ಟೆಂಬರ್ ತಿಂಗಳಲ್ಲಿ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಿ, ಕೋರಿಕೆ ಹಾಗೂ ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಕೋರಿದಾಗ ನಾವು (ಇಬ್ಬರು ಶಿಕ್ಷಕರು ) ವರ್ಗಾವಣೆ ನಿಯಮಗಳ ಅನುಸಾರ "2020 ರ ಸೆಪ್ಟೆಂಬರ್ ನಲ್ಲಿ ಪರಸ್ಪರ - ವರ್ಗಾವಣೆಗೆ " ಅರ್ಜಿ ಸಲ್ಲಿಸಿದ್ದೇವೆ.ಅರ್ಜಿ ಸ್ವೀಕರಿಸಿ,ಅಪ್ರೋವ್ ಮಾಡಿ 2021 ರಲ್ಲಿವರ್ಗಾವಣೆ ಕೌಂಸೆಲ್ಲಿಂಗ್ ನಡೆಯಬೇಕಾದ ಈ ಸಂದರ್ಭದಲ್ಲಿ (ಸೆಪ್ಟೆಂಬರ್ 2021 ರಂದು,12 ತಿಂಗಳ ನಂತರ ) ಪರಸ್ಪರ ವರ್ಗಾವಣೆ ನಿಯಮಾನುಸಾರ ಆ ವೃಂದದಲ್ಲಿ 7 ಪೂರ್ಣ ಗೊಂಡ ಸೇವೆಯನ್ನು ಇಬ್ಬರೂ ಪೂರೈಸಿದ್ದರೂ ಹಾಗೂ ಸೇವಾವಧಿಯಲ್ಲಿ ಈ ಹಿಂದೆ ಒಂದು ಬಾರಿಯೂ ಪರಸ್ಪರ ವರ್ಗಾವಣೆ ಪಡೆದಿಲ್ಲದಿದ್ದರೂ ಮತ್ತು ವಿಷಯ ಹಾಗೂ ವೃಂದ ಹೊಂದಾಣಿಕೆ ಇದ್ದಾಗಿಯೂ ನಮ್ಮಲ್ಲಿ ಒಬ್ಬರು ಈಗ ಕಾರ್ಯ ನಿರ್ವಹಿಸುತ್ತಿರುವ ಶಾಲೆಯಲ್ಲಿ 3 ಪೂರ್ಣ ಗೊಂಡ ವರ್ಷಗಳ ಸೇವೆ ಸಲ್ಲಿಸಿಲ್ಲ ಎಂಬ ಈ ಬಾರಿಯ ವರ್ಗಾವಣೆ ನಿಯಮಾವಳಿಯಲ್ಲಿ ಇಲ್ಲದ ಕಾರಣ ನೀಡಿ ನಮ್ಮ ಸಾಗರ ಮತ್ತು ಶಿಕಾರಿಪುರ ತಾಲ್ಲೂಕಿನಲ್ಲಿ "ಪರಸ್ಪರ ವರ್ಗಾವಣೆ" ಅರ್ಜಿಯನ್ನು ತಿರಸ್ಕರಿಸಿರುವರು ಹಾಗೂ 2021 ರ ಸೆಪ್ಟೆಂಬರ್ ನಲ್ಲಿ ಕೋರಿಕೆ ವರ್ಗಾವಣೆ ಗೆ ಅರ್ಜಿ ಸಲ್ಲಿಸುವಂತೆ ತಿಳಿಸಿರುತ್ತಾರೆ

ಆದ್ದರಿಂದ ನಮಗೆ ಅನ್ಯಾಯವಾಗಿದ್ದು, ಮೇಲಿನ ವರ್ಗಾವಣೆ ನಿಯಮಾವಳಿಯಲ್ಲಿಲ್ಲದ ನಿಯಮದ ನೆಪಹೇಳಿ ತಿರಸ್ಕರಿಸಿರುವ ನಮ್ಮ ಪರಸ್ಪರ ವರ್ಗಾವಣೆ ಅರ್ಜಿಯನ್ನು ದಯವಿಟ್ಟು ಈ ಬಾರಿಯ ವರ್ಗಾವಣೆ ಕೌನ್ಸ್ ಲಿಂಗ್ ನಲ್ಲಿ ಪರಿಗಣಿಸಿ ನಮಗೂ ಹಾಗೂ ರಾಜ್ಯದ ಸಾವಿರಾರು ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಈ ಮೂಲಕ ರಾಜ್ಯದ ಶಿಕ್ಷಕರ ಪರವಾಗಿ ಅತ್ಯಂತ ಕಳಕಳಿಯ ವಿನಂತಿ

ತಮ್ಮ ಸಹಾಯ /ನೆರವಿನ ನಿರೀಕ್ಷೆಯಲ್ಲಿ ಶಿಕ್ಷಕರು

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...