LIVE TV LocalCrimeNationalInternationalPoliticsEducationTechnologyEntertainmentSportsFeature
State News

ಬೆಕ್ಕಿಗೆ ಚಲ್ಲಾಟ ಇಲಿಗೆ ಪ್ರಾಣ ಸಂಕಟ - ಶಿಕ್ಷಕರ ಪರದಾಟ ಕೇಳೊರಿಲ್ಲ ಹೇಳೊರಿಲ್ಲ ಮೌನವಾಗಿದ್ದಾರೆ ಸಂಘಟನೆಯ ನಾಯಕರು.....

ಬೆಂಗಳೂರು -

ಯಾವುದೇ ಒಂದು ಸಮಸ್ಯೆ ಸಂಕಷ್ಟ ಬಂದರೆ ಅವುಗಳ ಪರವಾಗಿ ಅವರ ಪರವಾಗಿ ಸಂಭಂಧಿಸಿ ದವರು ಧ್ವನಿ ಎತ್ತಬೇಕು ಸ್ಪಂದಿಸಬೇಕು.ಅದಕ್ಕೆ ನಾಯಕರು ಸಂಘಟನೆ ಎನ್ನುತ್ತಾರೆ ಅದಕ್ಕಾಗಿ ಒಂದು ಸಂಘಟನೆ ಇರುತ್ತದೆ ಜೊತೆಗೆ ನಾಯಕರು ಇರುತ್ತಾರೆ.ಆದರೆ ಶಿಕ್ಷಕರ ವಿಚಾರದಲ್ಲಿ ಈ ಮಾತು ಯಾಕೋ ಸುಳ್ಳಾಗುತ್ತಿದೆ. ರಾಜ್ಯದ ಪ್ರತಿಯೊಬ್ಬ ಶಿಕ್ಷಕರು ತಮ್ಮದೆಯಾದ ಸಂಘಟನೆಗಾಗಿ ಪ್ರತಿ ವರುಷ ತಪ್ಪದೇ ತಮ್ಮ ವೇತನದಲ್ಲಿ ವಾರ್ಷಿಕ ಸದಸ್ಯತ್ವ ಹಣವನ್ನು ಕೊಡುತ್ತಾರೆ. ಯಾವುದೇ ಸಮಸ್ಯೆ ಸಂಕಷ್ಟ ತೊಂದರೆ ಬಂದಾಗ ಆ ಕುರಿತಂತೆ ಧ್ವನಿ ಎತ್ತಿ ಸ್ಪಂದಿಸಲಿ ಎಂಬ ಕಾರಣಕ್ಕಾಗಿ ರಾಜ್ಯ ಮಟ್ಟದಲ್ಲಿ ಸಂಘಟನೆ ರಚನೆ ಮಾಡಿಕೊಂಡು ಅಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿಯ ಸರ್ವ ಸದಸ್ಯರನ್ನು ಆಯ್ಕೆ ಮಾಡಿರುತ್ತಾರೆ ಆದರೆ ನಾಡಿನ ಶಿಕ್ಷಕರ ವಿಚಾರದಲ್ಲಿ ಈ ಒಂದು ಮಾತು ನೂರಕ್ಕೆ ನೂರರಷ್ಟು ಅಕ್ಷರಶಃ ಸುಳ್ಳಾಗಿದೆ. ಹೌದು ಈ ಒಂದು ಮಾತಿಗೆ ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಕಂಡು ಬರುತ್ತಿರುವ ಒಂದಲ್ಲ ಒಂದು ಬೆಳವಣಿಗಳೇ ಸಾಕ್ಷಿಯಾಗಿವೆ. 

ಘಟನೆ - 1

ರಾಜ್ಯದಲ್ಲಿ ಕರೋನಾ ಪ್ರಮಾಣ ಕಡಿಮೆಯಾದ ಹಿನ್ನಲೆಯಲ್ಲಿ ರಾಜ್ಯದ 11 ಜಿಲ್ಲೆಗಳನ್ನು ಹೊರತು ಪಡಿಸಿ ಇನ್ನೂಳಿದ 19 ಜಿಲ್ಲೆಗಳಲ್ಲಿ ಶಾಲೆಗಳ ಆರಂಭ ವಿಚಾರದಲ್ಲಿ ಬಸ್ ಸೌಲಭ್ಯವಿರದಿದ್ದರೂ ಕೂಡಾ ಶಾಲೆಗಳಿಗೆ ಶಿಕ್ಷಕರಿಗೆ ವಿನಾಯಿತಿ ನೀಡುವ ವಿಚಾರದಲ್ಲಿ ಶಿಕ್ಷಕರ ನೋವಿಗೆ ಮನವಿಗೆ ಸ್ಪಂದಿಸದಿರೊದು

ಘಟನೆ -2

ರಾಜ್ಯದಲ್ಲಿ ಈಗಾಗಲೇ ಸಾಲು ಸಾಲಾಗಿ ಕೋವಿಡ್ ಗೆ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ಮೃತರಾಗಿದ್ದಾರೆ ಹೀಗಿರುವಾಗ ಮೈಸೂರಿನಲ್ಲಿ ದಕ್ಷಿಣ ವಲಯ ಶಿಕ್ಷಣಾಧಿಕಾರಿ ಮತ್ತೆ ಕೋವಿಡ್ ಗೆ ಶಿಕ್ಷಕರಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದಾರೆ ಈ ಒಂದು ವಿಚಾರದಲ್ಲೂ ಸಂಘಟನೆ ಮೌನವಾಗಿರೊದು

ಘಟನೆ -3

ರಾಜ್ಯದಲ್ಲಿ ಎರಡನೇಯ ಅಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಗೆ ಶಿಕ್ಷಕರು ಮೃತರಾಗಿದ್ದಾರೆ ಹೀಗಿರುವಾಗ ಶಿಕ್ಷಕರಿಗೆ ಈವರೆಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆಯನ್ನು ಕೊಡಿಸದಿರೊದು ಮನವಿ ಪತ್ರ ಕೊಟ್ಟು ಸುಮ್ಮನಾಗಿದ್ದಾರೆ ಹೊರತಾಗಿ ಏನಾದರೂ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಆಗದಿರೊದು ದುರಂತವಾಗಿದೆ

ಘಟನೆ -4

ಕಳೆದ ವರುಷವೂ ಕೂಡಾ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೋವಿಡ್ ಗೆ ರಾಜ್ಯದಲ್ಲಿ ಮೃತರಾಗಿದ್ದಾರೆ. ಎಷ್ಟು ಜನ ಮೃತರಾಗಿದ್ದಾರೆ ಅವರ ಕುಟುಂಬಕ್ಕೆ ಈವರೆಗೆ ಸರ್ಕಾರದಿಂದ ಸೂಕ್ತವಾದ ಪರಿಹಾರ ದೊರಕಿಸಿಕೊಡದಿರೊದು 

ಘಟನೆ -5

ಶಿಕ್ಷಕರು ತಾವು ಆಯಿತು ತಮ್ಮ ಕೆಲಸ ಆಯಿತು ಎಂದುಕೊಂಡು ಕೆಲಸ ಮಾಡುವವರು ಸಮಸ್ಯೆ ತೊಂದರೆ ಬಂದಾಗ ಅವರ ಧ್ವನಿಗೆ ಸ್ಪಂದಿಸಬೇಕು ಆದರೆ ಅದು ಯಾವುದು ಆಗುತ್ತಿಲ್ಲ ಕೇವಲ ಕಾಗದ ದಲ್ಲಿ ಇವರ ಕೂಗೂ ಅಬ್ಬರ ಕಂಡು ಬರುತ್ತಿದೆ ಇದನ್ನು ನೋಂದ ಶಿಕ್ಷಕರೇ ಹೇಳಿದ್ದಾರೆ ಇದಕ್ಕೆ ವೈಫಲ್ಯವು ಕೂಡಾ ಒಂದಾಗಿದೆ

ಘಟನೆ - 6

ಇನ್ನೂ ಚುನಾವಣೆಯಲ್ಲಿದ್ದ ಅಬ್ಬರ ಆರ್ಭಟ ಶಿಕ್ಷಕರ ಸಮಸ್ಯೆ ವಿರುದ್ದ ಯಾಕೇ ಕಂಡು ಬರೊದಿಲ್ಲ ಯಾಕೇ ಕೇಳಿ ಬರೊದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದು ಪದೇ ಪದೇ ಈ ಒಂದು ಮಾತು ನಿಜವಾಗುತ್ತಿದ್ದು ಇದರಿಂದ ನಾಡಿನ ಶಿಕ್ಷಕರು ಸಿಡಿದೆದ್ದಿದ್ದಾರೆ. 

ಇನ್ನೂ ಸಾಕಷ್ಟು ಉದಾಹರಣೆ ಗಳಿದ್ದು ಇನ್ನಾದರೂ ಸಂಘಟನೆಯ ನಾಯಕರು ಇದೇಲ್ಲವನ್ನು ಅರಿತುಕೊಂಡು ಸೇವೆಯೆ ನಮ್ಮ ಗುರಿ ಸೇವೆಯೇ ನಮ್ಮ ಉದ್ದೇಶ ಎಂದುಕೊಂಡು ಶಿಕ್ಷಕರ ಧ್ವನಿಯಾಗಿರುವವ ನಾಯಕರು ಕೆಲಸ ಮಾಡಬೇಕು ಇಲ್ಲವಾದರೆ ಶಿಕ್ಷಕರು ಸಿಡಿದೆಳುತ್ತಾರೆ . 

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...