LIVE TV LocalCrimeNationalInternationalPoliticsEducationTechnologyEntertainmentSportsFeature
State News

ಲಾಕ್ ಡೌನ್ ವಿಸ್ತರಣೆಯಾಯಿತು ಬಸ್ ಬಂದ್ ಆದವು, ಮುಂದೇನು ಶಿಕ್ಷಣ ಸಚಿವರೇ.....ಶಿಕ್ಷಕರ ಪ್ರಶ್ನೆ

ಬೆಂಗಳೂರು -

ಪಾಸಿಟಿವಿಟಿ ರೇಟ್ ಕಡಿಮೆ ಇಲ್ಲದ ಕಾರಣಕ್ಕಾಗಿ ರಾಜ್ಯದಲ್ಲಿ ಜೂನ್ 14 ರಿಂದ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ.ಜೂನ್ 21 ರವರೆಗೆ ರಾಜ್ಯದ ಹನ್ನೊಂದು ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ,ಹಾಸನ,ಮೈಸೂರು,ಚಿಕ್ಕಮಂಗಳೂರು,ಮಂಡ್ಯ,ಬೆಳಗಾವಿ,ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ,ಕೊಡಗು ಹೀಗೆ ದಾವಣಗೇರಿ ಹೀಗೆ ಪಾಸಿಟಿ ವಿಟಿ ರೇಟ್ ಕಡಿಮೆಯಾಗದ ಹಿನ್ನಲೆಯಲ್ಲಿ ಈ ಜಿಲ್ಲೆ ಗಳಲ್ಲಿ ಲಾಕ್ ಡೌನ್ ನ್ನು ಮುಖ್ಯಮಂತ್ರಿ ವಿಸ್ತರಣೆ ಮಾಡಿದ್ದಾರೆ.ಮುಖ್ಮಮಂತ್ರಿಯವರ ವಿಚಾರ ಸ್ವಾಗತ ಆದರೆ ಜೂನ್ 14 ರಿಂದ ಶಾಲೆಗಳಿಗೆ ಹಾಜರಾಗಲು ಶಿಕ್ಷಣ ಇಲಾಖೆ ಶಿಕ್ಷಕರಿಗೆ ಬುಲಾವ್ ನೀಡಿದೆ.

ಶೈಕ್ಷಣಿ ಕ ವರ್ಷ ಆರಂಭ ಕುರಿತಂತೆ ಶಿಕ್ಷಕರಿಗೆ ಹಾಜರಾಗಲು ಆದೇಶವನ್ನು ಇಲಾಖೆ ನೀಡಿದೆ ಒಂದು ಕಡೆ ಲಾಕ್ ಡೌನ್ ವಿಸ್ತರಣೆ,ಮತ್ತೊಂದು ಕಡೆ ಬಸ್ ಗಳ ಸಂಚಾರ ಇರೊದಿಲ್ಲ,ಇನ್ನೂ ಕೆಲವೊಂದಿಷ್ಟು ಶಿಕ್ಷಕರಿಗೆ ವ್ಯಾಕ್ಸಿನ್ ಮಾಡಿಲ್ಲ, ಶಾಲೆಗಳಿಗೆ ಸ್ಯಾನಿಟೇಶನ್ ಮಾಡಿಸಿಲ್ಲ ಕರೋನಾ ನಿಯಂತ್ರಣ ಕುರಿತಂತೆ ಯಾವುದೇ ರೀತಿಯಾದ ಮುನ್ನಚ್ಚರಿಕೆಯ ಕ್ರಮಗಳನ್ನು ತಗೆದುಕೊಂಡಿಲ್ಲ, ಇವೆಲ್ಲದರ ನಡುವೆ ಗ್ರಾಮೀಣ ಪ್ರದೇಶದಗಳಲ್ಲಿ ಇನ್ನೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಕರೋನಾ ಹೆಚ್ಚಾಗಿದೆ ಹೀಗಾಗಿ ಇಂಥಹ ಪರಸ್ಥಿತಿಯ ನಡುವೆ ಶಿಕ್ಷಕರಿಗೆ ಕಡ್ಡಾಯವಾಗಿ ಹಾಜರಾಗಲು ಸಾಧ್ಯವಾ ಗುತ್ತದೆನಾ ಹೇಳಿ ಶಿಕ್ಷಣ ಸಚಿವರೇ ನಿವೇ ವಿಚಾರ ಮಾಡಿ ನೋಡಿ

ಇಂಥಹ ಅಸಾಧ್ಯವಾದ ಪರಸ್ಥಿತಿಯಲ್ಲಿ ಹೇಗೆ ಶಿಕ್ಷಕರು ಅದರಲ್ಲೂ ಮಹಿಳಾ ಶಿಕ್ಷಕರು ಶಾಲೆಗಳಿಗೆ ಹೊಗಬೇಕು.ಒಂದನೇಯ ಅಲೆಗಿಂತ ಎರಡನೇಯ ಅಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರು ಸಾವಿಗೀ ಡಾಗಿದ್ದು ಇನ್ನೂ ಕೂಡಾ ಕಂಡು ಬರುತ್ತಿದ್ದು ಶಿಕ್ಷಕರು ಇದರಿಂದ ಭಯಗೊಂಡಿದ್ದಾರೆ.

ಹೀಗಿರುವಾಗ ತರಾತುರಿಯಲ್ಲಿ ಜೂನ್ 14 ಕ್ಕೆ ಶಿಕ್ಷಕರಿಗೆ  ಹಾಜರಾಗಲು ಆದೇಶದ ಬದಲಿಗೆ ಮನೆಯಲ್ಲಿಯೇ ಕೆಲಸ ಮಾಡಲು ಆದೇಶವನ್ನು ಮಾಡುವಂತೆ ನಾಡಿನ ಶಿಕ್ಷಕರು ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಹಲವರು ಶಿಕ್ಷಣ ಸಚಿವರಿಗೆ ಒತ್ತಾಯವನ್ನು ಮಾಡಿದ್ದಾರೆ

ಆದರೂ ಕೂಡಾ ಈವರೆಗೆ ಮಾತ್ರ ಯಾವುದೇ ಸ್ಪಷ್ಟವಾದ ನಿರ್ಧಾರ ಹೊರಬೀಳುತ್ತಿಲ್ಲ ಹೀಗಾಗಿ ಹತ್ತು ಹಲವಾರು ಸಮಸ್ಯೆ ಸಂಕಷ್ಟಗಳ ನಡುವೆ ಶಾಲೆಗಳಿಗೆ ಹೇಗೆ ಹೋಗೊದು ಎಂಬ ದೊಡ್ಡ ಚಿಂತೆಯಲ್ಲಿ ನಾಡಿನ ಶಿಕ್ಷಕರಿದ್ದಾರೆ.ಆದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಮ್ಮ ಶಿಕ್ಷಣ ಸಚಿವರು ಮೌನವಾಗಿದ್ದಾರೆ. 

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...