This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ರಾಜು ನಾಯಕವಾಡಿ ಎಚ್ಚರಿಕೆಗೆ ಮಣಿದ ಮಹಾನಗರ ಪಾಲಿಕೆ ಅಧಿಕಾರಿಗಳು – ಸಾರ್ವಜನಿಕರ ಸಮಸ್ಯೆಗೆ ಧ್ವನಿಯಾದ ರಾಜು ನಾಯಕವಾಡಿ ಗಡುವಿಗೆ ಮಣಿದ ಅಧಿಕಾರಿಗಳಿಂದ ರಸ್ತೆ ದುರಸ್ತಿ ಕಾರ್ಯ ಆರಂಭ…..

ರಾಜು ನಾಯಕವಾಡಿ ಎಚ್ಚರಿಕೆಗೆ ಮಣಿದ ಮಹಾನಗರ ಪಾಲಿಕೆ ಅಧಿಕಾರಿಗಳು – ಸಾರ್ವಜನಿಕರ ಸಮಸ್ಯೆಗೆ ಧ್ವನಿಯಾದ ರಾಜು ನಾಯಕವಾಡಿ ಗಡುವಿಗೆ ಮಣಿದ ಅಧಿಕಾರಿಗಳಿಂದ ರಸ್ತೆ ದುರಸ್ತಿ ಕಾರ್ಯ ಆರಂಭ…..
WhatsApp Group Join Now
Telegram Group Join Now

ಹುಬ್ಬಳ್ಳಿ –

ರಾಜು ನಾಯಕವಾಡಿ ಎಚ್ಚರಿಕೆಗೆ ಮಣಿದ ಮಹಾನಗರ ಪಾಲಿಕೆ ಅಧಿಕಾರಿಗಳು ಹೌದು

,ಸ್ಮಾರ್ಟ್ ಸಿಟಿ ಹಣೆಪಟ್ಟಿ ಹೊತ್ತಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಾಮಗಾರಿ ನಡೆಯುತ್ತಿದೆ. ಆದರೆ ಅವುಗಳು ಯಾವುವು ಗುಣಮಟ್ಟದಲ್ಲಿ ಇಲ್ಲ ಎಂಬ ಆರೋಪಗಳಿವೆ.ಈ ನಡುವೆ ಹುಬ್ಬಳ್ಳಿಯ ಹದಗೆಟ್ಟ ರಸ್ತೆಗಳಿಂದ ಜನರು ರೋಸಿ ಹೋಗಿ ದ್ದಾರೆ. ಇದೀಗ ಮಳೆಗಾಲ ಬೇರೆ ಜನರ ಸಮಸ್ಯೆ ಹೇಳತ್ತಿರದಾಗಿದೆ. ಇಲ್ಲಿನ ವಾರ್ಡ್ ನಂಬರ್ 51 ರಲ್ಲಿನ ಜೇನ್ಸ್ ಸ್ಕೂಲ್ ಹತ್ತಿರದ ಆರ್.ಎನ್.ಶೆಟ್ಟಿ ರಸ್ತೆ ಸಂಪೂರ್ಣ ಹದಗೆಟ್ಟಿದೆ‌.

ಪರಿಣಾಮ ವಾಹನ ಸಂಚಾರರು ನರಕಯಾತನೆ ಅನುಭವಿಸುತ್ತಾ ಓಡಾಟ ನಡೆಸಬೇಕಿತ್ತು. ಇಷ್ಟಾ  ದರೂ ಇಲ್ಲಿನ ಪಾಲಿಕೆ ಸದಸ್ಯರಾಗಲಿ, ಶಾಸಕ ರಾಗಲಿ, ಸಂಸದರಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸಲಿಲ್ಲ. ಈ ಬಗ್ಗೆ ಮಾಧ್ಯಮಗಳ ಮೂಲಕ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಶೀಘ್ರ ರಸ್ತೆ ಕಾಮಗಾರಿ ಆರಂಭಿಸಬೇಕೆಂದು ಮೂರು ದಿನಗಳ ಗಡವು ನೀಡಿದ್ದರು

ಇಲ್ಲವಾದಲ್ಲಿ ಸ್ವಂತ ಹಣದಿಂದ ರಸ್ತೆ ಮಾಡ ಬೇಕಾತ್ತದೆ. ಮುಂದಿನ ದಿನಗಳಲ್ಲಿ ಪಾಲಿಕೆ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿತ್ತು. ಇದೀಗ ಪಾಲಿಕೆ ಆಯುಕ್ತರು ಸ್ಪಂದಿಸಿದ್ದು, ಇಂದಿನಿಂದ ರಸ್ತೆ ಕಾಮಗಾರಿ ಆರಂಭಿಸಿದ್ದಾರೆ.

ಮಾತಿಗೆ ಸ್ಪಂದಿಸಿ, ಜನರ ಕಷ್ಟ ಪರಿಹರಿಸಲು ಮುಂದಾದ ಪಾಲಿಕೆ ಆಯುಕ್ತರಿಗೆ ವಾರ್ಡ್ ಜನರ ಪರವಾಗಿ ಅಭಿನಂದನೆ ಸಲ್ಲಿಸು ತ್ತೇನೆ. ಇನ್ನೂ ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ 82 ವಾರ್ಡ’ಗಳಲ್ಲಿ ಇಂತಹ ಸಮಸ್ಯೆ ಹೆಚ್ಚಿದ್ದು, ಈಗಲಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು. ಈ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸಬೇಕೆಂದು ಆಗ್ರಹಿಸಿದ್ದಾರೆ‌

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ


Google News

 

 

WhatsApp Group Join Now
Telegram Group Join Now
Suddi Sante Desk