ಧಾರವಾಡ –
ಬೈಕ್ ನಿಂದ ಇಳಿಯುವಾಗ ಕಾಲು ಬಡಿದಿದನ್ನು ಪ್ರಶ್ನೆ ಮಾಡಿದ ವ್ಯಕ್ತಿಯ ಹತ್ಯೆ ನಡೆದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ನಲ್ಲಿ ನಡೆದಿದೆ.ಸಂಗನಗೌಡ ಮುದಿಗೌಡ್ರ(50) ಹತ್ಯೆಯಾದ ವ್ಯಕ್ತಿಯಾಗಿದ್ದಾನೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಬೈಕ್ ನಿಂದ ಇಳಿಯುವಾಗ ಕಾಲು ಬಡಿದಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಸಂಗನಗೌಡ ಥಳಿಸಿ ಹತ್ಯೆ ಮಾಡಲಾಗಿದೆ.
ಅದೇ ಗ್ರಾಮದ ಈರಪ್ಪ ಕಿತ್ತಲಿ, ಪಕ್ಕಿರಪ್ಪ ಕಿತ್ತಲಿ, ಬಸವರಾಜ ಕಿತ್ತಲಿ,ಮಂಜುನಾಥ್ ಕಿತ್ತಲಿ, ನಾಗರಾಜ ಕಿತ್ತಲಿ, ಬಸವರಾಜ ಕುರುಗೋವಿನ ಕೊಪ್ಪ ಹಲ್ಲೆ ಮಾಡಿ ಹತ್ಯೆ ಮಾಡಿದ ಆರೋಪಿಗ ಳಾಗಿದ್ದು ಈ ಒಂದು ಕುರಿತು ಈಗಾಗಲೇ ಪ್ರಕರಣ ಕೂಡಾ ದಾಖಲಾಗಿದೆ.
ಸ್ಥಳಕ್ಕೆ ನವಲಗುಂದ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದು ಇನ್ನೂ ಈ ಒಂದು ವಿಚಾರ ಕುರಿತು ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಕೂಡಾ ಪರಿಶೀಲನೆ ಮಾಡಿ ಸೂಕ್ತವಾದ ಕ್ರಮವನ್ನು ಕೈಗೊಂಡು ಆರೋಪಿಗಳ ಬಂಧನ ಮಾಡಿ ಶಿಕ್ಷೆ ನೀಡುವಂತೆ ಪೊಲೀಸರರಿಗೆ ಸೂಚನೆ ನೀಡಿದ್ದು ಹತ್ಯೆ ಮಾಡಿದವರಿಗೆ ಶ್ರೀರಕ್ಷೆ ಆಗುತ್ತಾ ಶಿಕ್ಷೆ ಆಗುತ್ತಾ ಎಂಬುದನ್ನು ಕಾದು ನೋಡಬೇಕು ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಇನ್ನೂ ಕೂಡಾ ಅಲ್ಲಲ್ಲಿ ರಾಜಿ ಸಂಧಾನ ನಡೆಸಲಾಗುತ್ತಿದೆ.
ಸುದ್ದಿ ಸಂತೆ ನ್ಯೂಸ್…..