This is the title of the web page
This is the title of the web page

Live Stream

[ytplayer id=’1198′]

October 2024
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

State Newsಬೆಳಗಾವಿ

ಅವರೊಳ್ಳಿಯ ಗ್ರಾಮದಲ್ಲಿ ವಿಶೇಷವಾಗಿ ಕಂಡು ಬಂದ ಕರುನಾಡ ದೀಪೋತ್ಸವ – ಗ್ರಾಮದಲ್ಲಿ ಹಿರಿಯರು ಹಾಕಿಕೊಟ್ಟ 30 ವರ್ಷಗಳ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೊರಟಿದ್ದಾರೆ ಭುವನೇಶ್ವರಿ ಕನ್ನಡ ಬಳಗದವರು ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು ದೀಪೋತ್ಸವ ಕಾರ್ಯಕ್ರಮ

ಅವರೊಳ್ಳಿಯ ಗ್ರಾಮದಲ್ಲಿ ವಿಶೇಷವಾಗಿ ಕಂಡು ಬಂದ ಕರುನಾಡ ದೀಪೋತ್ಸವ – ಗ್ರಾಮದಲ್ಲಿ ಹಿರಿಯರು ಹಾಕಿಕೊಟ್ಟ 30 ವರ್ಷಗಳ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೊರಟಿದ್ದಾರೆ ಭುವನೇಶ್ವರಿ ಕನ್ನಡ ಬಳಗದವರು ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು ದೀಪೋತ್ಸವ ಕಾರ್ಯಕ್ರಮ
WhatsApp Group Join Now
Telegram Group Join Now

ಅವರೊಳ್ಳಿ

ಕಾಲ ಸಮಾಜ ಸಂಪ್ರದಾಯ ಬದಲಾದಂತೆ ಎಲ್ಲವೂ ಬದಲಾಗುತ್ತವೆ ಜನರು ಕೂಡಾ ಬದಲಾಗುತ್ತಾರೆ ಎಂಬ ಮಾತಿದೆ ಆದರೆ ಈ ಒಂದು ಮಾತಿಗೆ ಅವರೊಳ್ಳಿ ಗ್ರಾಮ ಅಪವಾದ ವಾಗಿದ್ದು ಹಿರಿಯರು ಹಾಕಿಕೊಟ್ಟ ಸಂಪ್ರದಾಯ ವನ್ನು ಗ್ರಾಮದಲ್ಲಿ ಈಗಲೂ ಕೂಡಾ ಯುವಕರು ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ.ಹೌದು ಇದಕ್ಕೆ ತಾಜಾ ಉದಾಹರಣೆ ಖಾನಾಪೂರ ತಾಲ್ಲೂಕಿನ ಅವರೊಳ್ಳಿ ಗ್ರಾಮ,ಕಳೆದ 33 ವರ್ಷಗಳಿಂದ ಗ್ರಾಮದಲ್ಲಿ ಹಿರಿಯರು ಕರುನಾಡ ದೀಪೋತ್ಸವ ಕಾರ್ಯಕ್ರಮವನ್ನು ಹುಟ್ಟು ಹಾಕಿದ್ದರು.

ಈಗಲೂ ಕೂಡಾ ಪ್ರತಿ ವರ್ಷ ಈ ಒಂದು ಕಾರ್ಯ ಕ್ರಮವನ್ನು ಗ್ರಾಮಸ್ಥರು ಮಾಡಿಕೊಂಡು ಬರುತ್ತಿದ್ದು ಸಧ್ಯ ಈ ಒಂದು ನಾಡಹಬ್ಬದಂತೆ ಇರುವ ಕಾರ್ಯಕ್ರಮವನ್ನು ಭುವನೇಶ್ವರಿ ಕನ್ನಡ ಬಳಗದವರು ಮಾಡಿಕೊಂಡು ಬರುತ್ತಿದ್ದಾರೆ. ಹೌದು ಹೆಮ್ಮೆಯ ಭುವನೇಶ್ವರಿ ಕನ್ನಡ ಬಳಗದ ಕರುನಾಡ ದೀಪೋತ್ಸವವನ್ನು ಈ ವರ್ಷವೂ ಸಹ ಬಳಗದ ಯುವಕರು ತುಂಬಾ ಯಶಸ್ವಿಯಾಗಿ ಮಾಡಿದರು.

ಹಿರಿಯರು ಹಾಕಿಕೊಟ್ಟ ಕನ್ನಡದ ಹೆಸರಿನ ದೀಪೋತ್ಸವ ಸಂಪ್ರದಾಯವನ್ನು ನಮ್ಮ ಸಮ ಕಾಲೀನಕರೆಲ್ಲ ಮುಂದುವರೆಸಿಕೊಂಡು ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ.ಚಾಚು ತಪ್ಪದೇ ಒಗ್ಗಟ್ಟಾಗಿ ಪಾಲಿಸಿಕೊಂಡು ಬಂದು ಪ್ರತಿ ವರ್ಷ ಯಶಸ್ವಿಗೊಳಿಸ್ತಾ ಇರೋದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂಬ ಮಾತುಗಳು ಗ್ರಾಮದ ಪಡಸಾಲೆಯಲ್ಲಿ ಹಿರಿಯರಿಂದ ಕೇಳಿ ಬರುತ್ತಿದ್ದು ಹೆಮ್ಮೆಯ ವಿಚಾರವಾಗಿದೆ.

 

 

ಇನ್ನೂ ಕಳೆದ 30 ವರ್ಷಗಳಿಂದ ಗ್ರಾಮದಲ್ಲಿ ಪ್ರತಿ ಕಾರ್ತಿಕ ಅಮವಾಸ್ಯೆಗೆ ಗ್ರಾಮದಲ್ಲಿ ರಾಜ್ಯೋತ್ಸವ ನಿಮಿತ್ಯವಾಗಿ ಈ ಒಂದು ಕಾರ್ಯಕ್ರಮವನ್ನು ಮಾಡಿಕೊಂಡು ಬರಲಾಗುತ್ತಿದ್ದು 101 ದೀಪಗ ಳನ್ನು ಕರುನಾಡ ಧ್ವಜದಲ್ಲಿ ಕರ್ನಾಟಕ ಕವಿಗಳ ಭಾವಚಿತ್ರವನ್ನು ಸುಂದರವಾಗಿ ಬಿಡಿಸಿ  ತಗೆದು ದೀಪೋತ್ಸವವನ್ನು ಮಾಡಲಾಗುತ್ತಿದೆ.ಪ್ರತಿ ವರ್ಷವೂ ಈ ಒಂದು ಕಾರ್ಯಕ್ರಮವೂ ಗ್ರಾಮ ದಲ್ಲಿ ತುಂಬಾ ವಿಶೇಷವಾಗಿ ಕಂಡು ಬರುತ್ತಿದ್ದು ಹೆಮ್ಮೆಯ ವಿಚಾರವಾಗಿದೆ.

ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ದೇಮಪ್ಪ ತೋಪಖಾನೆ,ಸುರೇಶ ಚೌಗಲಾ,ಸಾಗರ ನಾಗನ್ನ ವರ,ಶಂಕರ ನಾಗನ್ನವರ,ರಾಜಕುಮಾರ ತೋಪ ಖಾನೆ,ವಿರೇಶ ಕಮ್ಮಾರ,ಹೋಬಳೇಶ ನಾಗನ್ನ ವರ,ಮಂಜುನಾಥ ಪಾಟೀಲ,ಕಲ್ಲಪ್ಪ ಯಳವಿ, ಮಲ್ಲಿಕಾರ್ಜುನ ಸಿದ್ದನವರ,ಸೇರಿದಂತೆ ಹಲವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಸುದ್ದಿ ಸಂತೆ ನ್ಯೂಸ್…..

 


Google News

 

 

WhatsApp Group Join Now
Telegram Group Join Now
Suddi Sante Desk