ಧಾರವಾಡ –
ಶಿಥಿಲಗೊಂಡಿರುವ ಧಾರವಾಡದ ಕಮಲಾಪೂರ ದಲ್ಲಿನ ಸರ್ಕಾರಿ ಶಾಲೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಈಗ ಹೊಸ ರೂಪ ನೀಡಲು ಮುಂದಾಗಿದ್ದು ಕಟ್ಟಡ ಪುನರ್ ನಿರ್ಮಾಣ ಕಾರ್ಯ ಕ್ಕೆ 1 ಕೋಟಿ 31 ಲಕ್ಷಗಳ ವೆಚ್ಚದಲ್ಲಿ ನೂತನ 8 ಕೊಠಡಿಗಳ ಕಟ್ಟಡ ಪುನರ್ ನಿರ್ಮಾಣ ಯೋಜನೆ ಸಿದ್ದ ಮಾಡಿದ್ದಾರೆ.
ಹೌದು ಧಾರವಾಡ ಕಮಲಾಪುರದ ಸುಮಾರು 65 ವರ್ಷ ಹಳೆಯದಾದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ನಂಬರ್ 4 ಶಿಥಿಲ ಗೊಂಡಿರುವ ಕಟ್ಟಡವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು ಕೋರಿಕೆಯ ಮೇರೆಗೆ ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ ಜೋಷಿ ರವರ ಕೋಲ್ ಇಂಡಿಯಾ ಲಿಮಿಟೆಡ್ ನ ಸಿ.ಎಸ್.ಆರ್ ಅನುದಾನದಲ್ಲಿ ಅಂದಾಜು 1 ಕೋಟಿ 31 ಲಕ್ಷಗಳ ವೆಚ್ಚದಲ್ಲಿ ನೂತನ 8 ಕೊಠಡಿಗಳ ಕಟ್ಟಡ ಪುನರ್ ನಿರ್ಮಾಣದ ಕಾಮಗಾರಿಯ ಸ್ಥಳ ಪರಿಶೀಲನೆ ಯನ್ನು ಮಾಡಲಾಯಿತು
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು ಮಾಡಿದರು. ಹಾಗೂ ಈಗಿರುವ ಶಾಲೆಯನ್ನು ಸ್ಥಳಾಂತರಿಸುವ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಶಾಖೆಯ ಶಿಕ್ಷಣಾಧಿಕಾರಿ ಗಳಾದ ಗಿರೀಶ ಪದಕಿ,ಪಾಲಿಕೆಯ ಸದಸ್ಯರಾದ ರಾಜಶೇಖರ ಕಮತಿ,ರಾಜು ತಳಗೇರಿ,ಬಸವಣ್ಣೆಪ್ಪ ಅಣ್ಣಿಗೇರಿ ರವರು, ಬಸು ಬಾಳಗಿ, ಮುರಗೇಶ ಹೊನ್ನಕೇರಿ ರವರು, ಈರಯ್ಯ ರಾಚಯ್ಯನವರ ಗಿರಿಯಪ್ಪ ಸಪ್ಪುರಿ,ಭೀಮಪ್ಪ ಇಸರಣ್ಣವರ,ವಿಠ್ಠಲ ಗೋಡ್ಸೆ, ಪಕ್ಕೀರಪ್ಪಾ ಪರಮನ್ನವರ,ಯಲ್ಲಪ್ಪ ಬಾಳಗಿ, ಶಿವಪುತ್ರಪ್ಪ ಕೋಟಿ, ಶ್ರೀಮತಿ ನಾಗರತ್ನ ಬಾವಿ, ಮಲ್ಲೇಶ ಶಿಂಧೆ , ನಿಂಗಪ್ಪ ಸಪೂರಿ ರಮೇಶ ತಳಗೇರಿ ರವರು, ಹಾಗೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್…..