ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ಕೊನೆಗೂ 7ನೇ ವೇತನ ಆಯೋಗ ರಚನೆ ವಿಚಾರದಲ್ಲಿ ಕೊನೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಿತಿಗೆ ಅಧ್ಯಕ್ಷರನ್ನು ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಈ ಒಂದು ವಿಚಾರದಲ್ಲಿ ಸಂತೋಷ ಗೊಂಡಿದ್ದು ಹೀಗಾಗಿ ನಾಳೆ ಮುಖ್ಯಮಂತ್ರಿ ಅವರಿಗೆ ರಾಜ್ಯದ ಸರ್ಕಾರಿ ನೌಕರರ ರಾಜ್ಯ ಘಟಕದಿಂದ ಬೆಂಗಳೂರಿನಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ
ಹೀಗಾಗಿ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯ ಘಟಕದಿಂದ 7 ಲಾಡುಗಳನ್ನು ವಿತರಣೆ ಮಾಡಲು ನಿರ್ಧರಿಸಲಾಗಿದ್ದು ಈಗಾಗಲೇ ಈ ಒಂದು 7 ಲಾಡುಗಳ ಬಾಕ್ಸ್ ಗಳು ಸಿದ್ದಗೊಂ ಡಿದ್ದು ನಾಳೆ ಯ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಸಮಸ್ತ ಸರ್ಕಾರಿ ನೌಕರರಿಗೆ ವಿತರಣೆಯನ್ನು ರಾಜ್ಯ ಘಟಕವು ನೀಡಲಿದೆ.
7 ನೇ ವೇತನ ಆಯೋಗದ ಅಧ್ಯಕ್ಷರ ಘೋಷಣೆ ಯ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳಿಗೆ ಅಭಿನಂ ದನಾ ಸಮಾರಂಭದಲ್ಲಿ ಸರ್ಕಾರಿ ನೌಕರ ಸಂಘ ದಿಂದ 7 ಲಾಡುಗಳ ವಿತರಣೆಯನ್ನು ಮಾಡಲಾ ಗುತ್ತಿದ್ದು ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚನೆಯ ಐತಿಹಾಸಿಕ ನಿರ್ಣಯ ಘೋಷಣೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಿಗ್ಗೆ 10 00 ಕ್ಕೆ ಮುಖ್ಯಮಂತ್ರಿಗಳ ಸರ್ಕಾರಿ ಅಧಿಕೃತ ನಿವಾಸ ವಾದ ರೇಸ್ ಕೋರ್ಸ್ ರಸ್ತೆಯಲ್ಲಿ ಈ ಒಂದು ಅಭಿನಂದನಾ ಸಮಾರಂಭವು ನಡೆಯಲಿದ್ದು
ಈ ಅಭಿನಂದನ ಕಾರ್ಯಕ್ರಮದಲ್ಲಿ ಭಾಗವಹಿ ಸುವ ಎಲ್ಲಾ ಸರ್ಕಾರಿ ನೌಕರರಿಗೆ ಸಂಘದಿಂದ ಏಳು ಲಾಡುಗಳಿರುವ ಸಿಹಿ ಬಾಕ್ಸನ್ನು ವಿತರಿಸಲಾ ಗುವುದು ಇಲಾಖೆಯ ಎಲ್ಲಾ ಅಧಿಕಾರಿ- ನೌಕರರ ನ್ನು ಭಾಗವಹಿಸಲು ಆತ್ಮೀಯತೆಯಿಂದ ಆಹ್ವಾ ನಿಸುತ್ತಿದ್ದೇನೆ ಎಂದು ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಸಿ ಎಸ್ ಷಡಕ್ಷರಿ ಅವರು ಸರ್ವ ಸದಸ್ಯರ ಪದಾಧಿಕಾರಿಗಳ ಪರ ವಾಗಿ ಈ ಒಂದು ಮಾಹಿತಿಯನ್ನು ನೀಡಿ ಸ್ವಾಗತ ವನ್ನು ಮಾಡಿದ್ದಾರೆ.
ರಕ್ಷಿತ್ ಜೊತೆ ಗೌತಮ್ ಸುದ್ದಿ ಸಂತೆ ನ್ಯೂಸ್ ಬೆಂಗಳೂರು.