ಬೀದರ್ –
ಭೀಕರ ರಸ್ತೆ ಅಪಘಾತ ಸ್ನೇಹಿತರಿಬ್ಬರ ಸಾವು ನಿಯಂತ್ರಣ ತಪ್ಪಿದ ಕಾರು ಲಾರಿಗೆ ಡಿಕ್ಕಿ ಹೌದು
ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೀದರ್ ಮೂಲದ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ತೆಲಂಗಾಣದ ಜಹೀರಾಬಾದ್ ಬಳಿ ನಡೆದಿದೆ.
ಮೃತರನ್ನು ಅವಿನಾಶ್ ಗೋಡೆ (27) ಹಾಗೂ ವೀರೇಶ್ (30) ಎಂದು ಗುರುತಿಸಲಾಗಿದೆ.
ಯುವಕರು ಔರಾದ್ ನ ನಾಗಮಾರಪ್ಪಳ್ಳಿ ಗ್ರಾಮದ ವಾಸಿಗಳು ಎಂದು ತಿಳಿದು ಬಂದಿದೆ.
ಈ ಇಬ್ಬರು ಸ್ನೇಹಿತರಾಗಿದ್ದು ಅಪಘಾತದ ತೀವ್ರತೆಯಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದು ಯುವಕರು ಬೀದರ್ನಿಂದ ಹೈದರಾಬಾದ್ ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.ಈ ವೇಳೆ ಏಕಾಏಕಿ ಕಾರು ನಿಯಂತ್ರಣ ತಪ್ಪಿ ಅಪಘಾತ ವಾಗಿದೆ.
ಸುದ್ದಿ ಸಂತೆ ನ್ಯೂಸ್ ಬೀದರ್…..