ಬಳ್ಳಾರಿ –
ಎಡವಟ್ಟು ಮಾಡಿದ ಮುಖ್ಯಶಿಕ್ಷಕಿ ಅಧಿಕಾರ ವಹಿಸಿಕೊಳ್ಳುವಾಗ ಕಚೇರಿ ಯಲ್ಲಿ ಮಾಡಿದ ಚಿತ್ರಣ ಇದೀಗ ದೊಡ್ಡ ಪ್ರಮಾಣದ ಅನುಮಾನ ಕ್ಕೆ ಕಾರಣವಾಗಿದೆ.ಹೌದು ಬಳ್ಳಾರಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಈ ಒಂದು ಘಟನೆ ಇದೀಗ ಸಾಕಷ್ಟು ಚರ್ಚೆಯಾಗ್ತಿದೆ.
ಶಿಕ್ಷಕಿಯಾಗಿದ್ದ ಜಯಾ( ಜಾಯ್ )ಅವರನ್ನು ಪ್ರಭಾರಿ ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಳ್ಳಲು ಶಿಕ್ಷಣ ಇಲಾಖೆ ಆದೇಶ ನೀಡಿದೆ. ಆದರೆ ಅಧಿಕಾರ ಸ್ವೀಕರಿಸುವ ವೇಳೆ ಚರ್ಚ್ ಪಾಸ್ಟರ್ ಕರೆಸಿದ್ದ ಶಿಕ್ಷಕಿ ಜಾಯ್ ಫಾದರ್ ಅವರಿಂದ ಧರ್ಮ ಭೋಧನೆ ಮಾಡಿಸಿದ್ದಾರೆ.
ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಗುರುಗಳ ಚೇರ್ ನಲ್ಲಿ ಕುಳಿತ ಪಾಸ್ಟರ್ ಕುಮಾರ್ ಅವರು ಪುಸ್ತಕವೊಂದನ್ನು ಹಿಡಿದುಕೊಂಡು ಸ್ಥಳದಲ್ಲಿದ್ದವರಿಗೆ ಧರ್ಮದ ಪಾಠವನ್ನು ಮಾಡಿ ದ್ದಾರೆಂದು ಹೇಳಲಾಗುತ್ತಿದೆ.ಈ ಕುರಿತು ಪ್ರಭಾರಿ ಮುಖ್ಯ ಶಿಕ್ಷಕಿ ಜಾಯ್ ವಿರುದ್ದ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಿ.ಸಿ. ಮತ್ತು ಡಿಡಿಪಿಐಗೆ ದೂರು ನೀಡಲಾಗಿದೆ.
ಸರ್ಕಾರಿ ಶಾಲೆಯಲ್ಲಿ ಪಾಸ್ಟರ್ ಬೋಧನೆ ಮಾಡಿದಕ್ಕೆ ಕ್ರಮ ಕೈಗೊಳ್ಳುವಂತೆ ಕೆಲ ಶಿಕ್ಷಕರು ಹಾಗೂ ಅನಾಮಧೇಯ ಹೆಸರಿನಲ್ಲಿ ದೂರು ಸಲ್ಲಿಸಿದ್ದಾರೆ.ಸಧ್ಯಕ್ಕೆ ಈ ಒಂದು ವಿಚಾರ ಕುರಿತು ದೂರು ದಾಖಲಾಗಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು.
ಸುದ್ದಿ ಸಂತೆ ನ್ಯೂಸ್…..