ಬೆಂಗಳೂರು –
ರಾಜ್ಯದಲ್ಲಿನ ಶಿಕ್ಷಕರ ಸಮಸ್ಯೆ ಸೇರಿದಂತೆ ಹಲವಾರು ವಿಚಾ ರಗಳ ಕುರಿತು ಚರ್ಚೆ ಮಾಡಲು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ನಾಳೆ ಮಹತ್ವದ ಸಭೆ ಕರೆದಿದ್ದಾರೆ.ಹೌದು ನಾಳೆ ಮಧ್ಯಾಹ್ನ 3 ಗಂಟೆಗೆ ವಿಧಾನ ಸೌಧ ದಲ್ಲಿನ ಮೊದಲನೇಯ ಮಹಡಿ ಯಲ್ಲಿ ಈ ಒಂದು ಸಭೆ ನಡೆಯಲಿದೆ.
ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ಈ ಒಂದು ಸಭೆ ನಡೆಯಲಿದ್ದು ಸಭೆಯಲ್ಲಿ ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ಸೇರಿದಂತೆ ವಿಧಾನ ಪರಿಷತ್ ನ ಸರ್ವ ಸದಸ್ಯರು ಪಾಲ್ಗೊಳ್ಳಲಿದ್ದು ಸಭೆಯಲ್ಲಿ ಯಾವ ನಿರ್ಣಯ ತಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕು
ಒಟ್ಟಾರೆ ಈ ಒಂದು ಸಭೆಯಿಂದಾದರೂ ನಾಡಿನ ಶಿಕ್ಷಕರ ಸಾಕಷ್ಟು ಪ್ರಮಾಣದಲ್ಲಿನ ಸಮಸ್ಯೆ ಗಳು ಅದರಲ್ಲೂ ಪ್ರಮುಖವಾಗಿ ವರ್ಗಾವಣೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ನಾಡಿನ ಶಿಕ್ಷಕ ಬಂಧುಗಳಿದ್ದಾರೆ.