ಬೆಂಗಳೂರು –
ಆತ್ಮೀಯ ವೃತ್ತಿನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ/ಕಿಯರೇ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳೇ ಸರ್ಕಾರ ಈಗಾಗಲೇ 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದು ಇನ್ನೇನು ಸ್ವಲ್ಪ ದಿನದಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಆದ್ದರಿಂದ ವೃತ್ತಿನಿರತ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಾದ ನಾವುಗಳು PST ಹುದ್ದೆಯಲ್ಲಿ ಶಾಶ್ವತವಾಗಿ ಉಳಿಯುವ ಸಾಧ್ಯತೆ ಹೆಚ್ಚಾಗುತ್ತಿದೆ, 6-8 ಕ್ಕೆ ವಿಲೀನ ಗೊಂಡು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗುವ ಕನಸು ಮರೀಚಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಆದ್ದರಿಂದ ರಾಜ್ಯಮಟ್ಟ ದಿಂದ ತಾಲೂಕು ಮಟ್ಟದ ವರೆಗಿನ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರೇ ಕಾರ್ಯದರ್ಶಿಗಳೇ ಮತ್ತು ಪದಾಧಿಕಾರಿಗಳೇ ಮತ್ತು ವೃತ್ತಿನಿರತ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕ/ಕಿಯರೇ ನಾವೆಲ್ಲರೂ ಈಗಲೇ ಎಚ್ಚೆತ್ತು ನೇಮಕಾತಿ ಅಧಿಸೂಚನೆ ಯನ್ನು ಹೊರಡಿಸುವ ಮುನ್ನವೇ ಜರೂರಾಗಿ ವೃತ್ತಿನಿರತ ಪದವೀಧರ ಶಿಕ್ಷಕರಿಗೆ 6-8ಕ್ಕೆ ವಿಲೀನಗೊಳಿಸುವ ಪ್ರಕ್ರಿಯೆ ಯನ್ನು ಪ್ರಾರಂಭಿಸಬೇಕಾಗಿದೆ ಈ ಅವಕಾಶವನ್ನು ಕಳೆದು ಕೊಂಡರೆ ಮುಂದೆ ಶಾಶ್ವತವಾಗಿ ನಾವು PST ಆಗಿಯೆ ಉಳಿಯುವ ಸಾಧ್ಯತೆ ಇದೆ.ಆದ್ದರಿಂದ ಕೇವಲ ಮನವಿ ಗಳನ್ನು ಕೊಟ್ಟು ಕೂಡುವ ಬದಲಾಗಿ ತಾಲ್ಲೂಕು ಮಟ್ಟ ದಿಂದ ರಾಜ್ಯಮಟ್ಟದವರೆಗೆ ಉಗ್ರ ರೀತಿಯ ಹೋರಾಟ ವನ್ನು ಕೈಗೊಂಡು ವಿಲೀನ ಪ್ರಕ್ರಿಯೆಯ ಆದೇಶವನ್ನು ಮಾಡಿಸುವ ಕಡೆಗೆ ಗಮನ ಹರಿಸಲೇಬೇಕಾಗಿದೆ ಏಳಿ ಎದ್ದೇಳಿ ನಮ್ಮ ಉಳಿವಿಗಾಗಿ ಹೊರಡುವ ಸಮಯ ಬಂದಿದೆ ಜಾಗೃತರಾಗಿ ಇಂತಿ….ನ್ಯಾಯ ಬಯಸುವ ಶಿಕ್ಷಕ ಬಂಧುಗಳು……