ಬೆಂಗಳೂರು –
7ನೇ ವೇತನ ಆಯೋಗ ರಚನೆ ಮಾಡಿದ ಬೆನ್ನಲ್ಲೇ ದಿನಕ್ಕೊಂದು ಹೊಸ ಹೊಸ ಬೆಳವಣಿಗಳು ಹೊಸ ಹೊಸ ಚಟುವಟಿಕೆಗಳು ನಡೆಯುತ್ತಿದ್ದು ಇತ್ತ ರಾಜ್ಯ ಸರ್ಕಾರ ಕೂಡಾ ಈಗಾಗಲೇ ಸಮಿತಿ ರಚನೆ ಮಾಡಿ ಆದೇಶ ಮಾಡಿ ಅದಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳ ಕುರಿತಂತೆ ಸಿಬ್ಬಂದಿ ಗಳನ್ನು ಕೂಡಾ ನೇಮಕ ಮಾಡಿ ಈ ಕುರಿತಂತೆ ಯೂ ಕೂಡಾ ಆದೇಶವನ್ನು ಮಾಡಿದ ಬೆನ್ನಲ್ಲೇ
ಈಗ ಕಚೇರಿಯನ್ನು ನೀಡಿ ಆದೇಶವನ್ನು ಹೊರಡಿಸಿದ್ದು ಇದೇಲ್ಲದರ ನಡುವೆ 7ನೇ ವೇತನ ಆಯೋಗದ ಅಧ್ಯಕ್ಷ ಡಾ ಸುಧಾಕರ್ ರಾವ್ ಅವರು ಮಹತ್ವದ ಸಭೆಯನ್ನು ಕರೆದಿದ್ದಾರೆ. ಹೌದು ಇಷ್ಟೇಲ್ಲ ಬೆಳವಣಿಗೆ ನಡೆದ ಮೇಲೆ ಮುಂದಿನ ಕಾರ್ಯ ಚಟುವಟಿಕೆಗಳ ಕುರಿತಂತೆ ಚರ್ಚೆಯನ್ನು ಮಾಡಲು ಅಧ್ಯಕ್ಷರು ನಾಳೆ ಅಂದರೆ ಸೋಮವಾರ ಬೆಳಿಗ್ಗೆ ಮಹತ್ವದ ಸಭೆಯನ್ನು ಆಹ್ವಾನ ಮಾಡಿದ್ದಾರೆ
ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ನಡೆಯ ಲಿರುವ ಮಹತ್ವದ ಸಭೆಯಲ್ಲಿ 7ನೇ ವೇತನ ಆಯೋಗದ ಸಮಿತಿಯ ಕಾರ್ಯ ಚಟುವಟಿಕೆ ಗಳ ಕುರಿತಂತೆ ಹಾಗೇ ಮುಂದಿನ ಪ್ಲಾನ್ ಗಳ ಕುರಿತಂತೆ ಮಹತ್ವದ ಚರ್ಚೆ ಮಾತುಕತೆಯೂ ನಡೆಯಲಿದ್ದು ಪ್ರಮುಖವಾಗಿ ಕಚೇರಿ ಆರಂಭ ಕುರಿತಂತೆ ಮತ್ತ ಸಧ್ಯ 44 ಸಿಬ್ಬಂದಿಗಳನ್ನು ಸಮಿತಿಗೆ ನೀಡಿದ್ದು ಇದರ ನೇಮಕಾತಿಯನ್ನು ಕೂಡಾ ರಾಜ್ಯ ಸರ್ಕಾರ ಸ್ವತಂತ್ರವಾಗಿ ನೀಡಿದ್ದು ಯಾರು ಯಾರನ್ನು ನೇಮಕಾತಿ ಮಾಡಿಕೊಳ್ಳ ಬೇಕು ರೂಪರೇಷೆಗಳ ಕುರಿತಂತೆ ಅಧ್ಯಕ್ಷರು ಸಭೆಯಲ್ಲಿ ಚರ್ಚೆಯನ್ನು ಮಾಡಲಿದ್ದಾರೆ.
ಅಧ್ಯಕ್ಷರೊಂದಿಗೆ ಈ ಒಂದು ಸಭೆಯಲ್ಲಿ ಸಮಿತಿಯ ಮೂವರು ಸದಸ್ಯರು ರಾಜ್ಯ ಸರ್ಕಾರದ ಕೆಲ ಅಧಿಕಾರಿಗಳು ಕೂಡಾ ಪಾಲ್ಗೊಂಡು ಸಮಿತಿಯ ಸಭೆಗೆ ಸಾಥ್ ನೀಡಿ ರಾಜ್ಯ ಸರ್ಕಾರದಿಂದ ಇನ್ನೂ ಅವಶ್ಯಕವಾಗಿ ಬೇಕಾದ ವ್ಯವಸ್ಥೆಯನ್ನು ಸೌಲಭ್ಯಗಳನ್ನು ಪಟ್ಟಿ ಮಾಡಲಿದ್ದು ಸಹಕಾರ ನೀಡಲಿದ್ದಾರೆ.
ಸುದ್ದಿ ಸಂತೆ ನ್ಯೂಸ್…..