This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಪ್ರಾಥಮಿಕ ಶಾಲೆ ಆರಂಭ ಮಾಡಿದರೆ ಕಾನೂನು ಹೋರಾಟ ಸಿಟಿಜನ್ ರೈಟ್ಸ್ ಫೌಂಡೇಷನ್ CM,ಶಿಕ್ಷಣ ಸಚಿವರಿಗೆ ಪತ್ರ ಬರೆದು ಎಚ್ಚರಿಕೆ…..

WhatsApp Group Join Now
Telegram Group Join Now

ಬೆಂಗಳೂರು –

ಇನ್ನೇನು ದಸರಾ ಹಬ್ಬ ಮುಗಿದ ಕೂಡಲೇ ರಾಜ್ಯ ದಲ್ಲಿ ಪ್ರಾಥಮಿಕ ಹಂತದ ಶಾಲೆ ಆರಂಭಕ್ಕೆ ಸರ್ಕಾರ ಶಿಕ್ಷಣ ಸಚಿವರು ಸಿದ್ದತೆ ನಡೆದಿದ್ದಾರೆ.ಇದೆಲ್ಲದರ ನಡುವೆ ಈ ಹಂತದ ಶಾಲೆಗಳನ್ನು ಆರಂಭ ಮಾಡಿ ದರೆ ಕಾನೂನು ಹೋರಾಟ ನಡೆಸಲಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನು ಪತ್ರದ ಮೂಲಕ ನೀಡ ಲಾಗಿದೆ.ಹೌದು ಕೋವಿಡ್ ಸೋಂಕು ಇನ್ನೂ ದೂರ ವಾಗಿಲ್ಲ.ಮಕ್ಕಳಿಗೆ ಲಸಿಕೆ ಬಂದಿಲ್ಲ.ಇಂಥ ಪರಿಸ್ಥಿತಿ ಯಲ್ಲಿ ಒಂದರಿಂದ ಭೌತಿಕ ತರಗತಿ ಆರಂಭಿಸುವು ದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಸಿಟಿಜನ್ ರೈಟ್ಸ್ ಫೌಂಡೇಷನ್ ಪತ್ರ ಬರೆದಿದೆ.

ಹೌದು ಮಕ್ಕಳಿಗೆ ಕೋವಿಡ್ ಲಸಿಕೀಕರಣ ಪೂರ್ಣ ಗೊಳ್ಳುವವರೆಗೂ ಪ್ರಾಥಮಿಕ ಶಾಲೆ (1ರಿಂದ 5 ವರೆಗಿನ ತರಗತಿ) ಆರಂಭಿಸಬಾರದು.ಒಂದು ವೇಳೆ ಸರ್ಕಾರ ತಪ್ಪು ನಡೆ ಅನುಸರಿಸಿದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಫೌಂಡೇ ಷನ್‌ ಅಧ್ಯಕ್ಷ ಕೆ.ಎ. ಪಾಲ್ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ಮೂರನೇ ಅಲೆಯ ಆತಂಕ ಜನರನ್ನು ಕಾಡುತ್ತಿದೆ.ಕೇರಳ,ಮಹಾರಾಷ್ಟ್ರ ಸಹಿತ ಹಲವು ರಾಜ್ಯಗಳಲ್ಲಿ ಸೋಂಕು ನಿಯಂತ್ರಿಸಲು ಸ್ಥಳೀಯ ಸರ್ಕಾರಗಳು ಹರಸಾಹಸ ಪಡುತ್ತಿವೆ.ಈ ಮಧ್ಯೆ, ಶಾಲಾ ಕಾಲೇಜುಗಳನ್ನು ಆರಂಭಿಸುವ ಮೂಲಕ ರಾಜ್ಯ ಸರ್ಕಾರ,ಮಕ್ಕಳ ಬದುಕಿನಲ್ಲಿ ಚೆಲ್ಲಾಟವಾಡು ತ್ತಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ ಎಂದರು

ಇದೀಗ 1ನೇ ತರಗತಿಯಿಂದಲೇ ಶಾಲಾರಂಭಕ್ಕೆ ಎಲ್ಲರ ಒಲವಿದೆ.ದಸರಾ ನಂತರ ಶಾಲೆ ಆರಂಭಿಸ ಲಾಗುವುದೆಂದು ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದಾ ರೆ. ಆದರೆ 10 ವರ್ಷದೊಳಗಿನ ಮಕ್ಕಳ ಹೆತ್ತವರು ಅಭಿಪ್ರಾಯವನ್ನೇ ಕೇಳಿಲ್ಲ ಎಂದೂ ಪತ್ರದಲ್ಲಿದೆ.

ಶಾಲೆಗಳ ಆರಂಭ ಸರಿಯೇ ಎಂಬ ಬಗ್ಗೆ ಮಾಧ್ಯಮ ಗಳು ಪೋಷಕರ ಅಭಿಪ್ರಾಯ ಆಧರಿಸಿ ಸಮೀಕ್ಷೆ ನಡೆಸಿವೆ.ಈ ಸಮೀಕ್ಷೆ ಪ್ರಕಾರ ಶೇ 73ರಷ್ಟು ಮಂದಿ ಶಾಲೆ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪೋಷಕರ ಅಭಿಪ್ರಾಯ ಪಡೆಯದೆ ಪ್ರಾಥಮಿಕ ಶಾಲೆ ಆರಂಭಿಸಲು ಸರ್ಕಾರ ಮುಂದಾಗಿರುವುದು ಆಕ್ಷೇಪಾರ್ಹ ನಿರ್ಧಾರ ಎಂದಿದ್ದಾರೆ ಹೀಗಾಗಿ ಇವೆಲ್ಲ ವುದರ ನಡುವೆ ಹೀಗೆ ಮಾಡಿದರೆ ಖಂಡಿತವಾಗಿ ಕಾನೂನು ಹೋರಾಟ ಮಾಡೊದಾಗಿ ಹೇಳಿದರು


Google News

 

 

WhatsApp Group Join Now
Telegram Group Join Now
Suddi Sante Desk