ಹುಬ್ಬಳ್ಳಿ –
CM ಕಾರ್ಯಕ್ರಮಕ್ಕೆ ಪೂರ್ವಭಾವಿ ಸಭೆ ಮಾಡಿದ ಶಾಸಕ NH ಕೋನರೆಡ್ಡಿ – ಅಧಿಕಾರಿ ಗಳೊಂದಿಗೆ ಕಾರ್ಯಕ್ರಮದ ಪೂರ್ವ ಸಿದ್ದತೆಗ ಳನ್ನು ಚರ್ಚೆ ಮಾಡಿದ ಶಾಸಕರು ಹೌದು
ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಧಾರವಾಡ ಜಿಲ್ಲೆಗೆ ಆಗಮಿಸುತ್ತಿದ್ದಾರೆ.ಜಿಲ್ಲೆಯ ಹಲವೆಡೆ ವಿವಿಧ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳಲಿದ್ದು ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿನ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಇನ್ನೂ ಈ ಒಂದು ಹಿನ್ನಲೆಯಲ್ಲಿ ಶಾಸಕ ಎನ್ ಹೆಚ್ ಕೋನರೆಡ್ಡಿಯವರು ಅಧಿಕಾರಿಗಳೊಂದಿಗೆ ಪೂರ್ವ ಸಿದ್ದತಾ ಸಭೆಯನ್ನು ಮಾಡಿದರು.ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಹುಬ್ಬಳ್ಳಿಯ ಕಚೇರಿಯಲ್ಲಿ ಪೂರ್ವ ಸಿದ್ದತಾ ಸಭೆಯನ್ನು ಮಾಡಿ ಮುಖ್ಯಮಂತ್ರಿ ಕಾರ್ಯಕ್ರಮಗಳ ಕುರಿ ತಂತೆ ಸಿದ್ದತೆಯನ್ನು ಪರಿಶೀಲನೆಯನ್ನು ಮಾಡಿದರು
ಕಾರ್ಯಕ್ರಮಗಳ ರೂಪರೇಷೆ ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಶಾಸಕರು ಅಧಿಕಾರಿಗಳೊಂದಿಗೆ ಚರ್ಚೆಯನ್ನು ಮಾಡಿದರು ಶಾಸಕರೊಂದಿಗೆ ಈ ಸಂದರ್ಭದಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಶಿಲ್ದಾರ ಪ್ರಕಾಶ ನಾಶಿ, ನವಲ ಗುಂದ ತಹಶಿಲ್ದಾರ,ಸುಧೀರ ಸಾವುಕಾರ, ಅಣ್ಣಿ ಗೇರಿ ತಹಶಿಲ್ದಾರ,ಶಿವಾನಂದ ಹೆಬ್ಬಳ್ಳಿ, ಹುಬ್ಬಳ್ಳಿ
ಇ.ಒ.ಡಾ. ಆರ್.ವಾಯ್.ಹೊಸಮನಿ, ನವಲ ಗುಂದ ಹಾಗೂ ಅಣ್ಣಿಗೇರಿ ಇ.ಒ.ಶ್ರೀಮತಿ ಭಾಗ್ಯಶ್ರಿ ಜಾಗಿರದಾರ,ಸದಾನಂದ ಅಮರಾಪುರ ಸೇರಿ ದಂತೆ ಇನ್ನೂ ಅನೇಕ ಅಧಿಕಾರಿಗಳು ಉಪಸ್ಥಿತರಿ ದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..