This is the title of the web page
This is the title of the web page

Live Stream

[ytplayer id=’1198′]

February 2025
T F S S M T W
 12345
6789101112
13141516171819
20212223242526
2728  

| Latest Version 8.0.1 |

State News

OPS ಗಾಗಿ ಆರಂಭಗೊಂಡ ಪತ್ರ ಚಳುವಳಿ – ಪತ್ರ ಬರೆದು ಹಳೆ ಪಿಂಚಣಿಗಾಗಿ ಬೇಡಿಕೆ….

OPS ಗಾಗಿ ಆರಂಭಗೊಂಡ ಪತ್ರ ಚಳುವಳಿ – ಪತ್ರ ಬರೆದು ಹಳೆ ಪಿಂಚಣಿಗಾಗಿ ಬೇಡಿಕೆ….
WhatsApp Group Join Now
Telegram Group Join Now

ಹುಬ್ಬಳ್ಳಿ

ರಾಜ್ಯ ಸರ್ಕಾರವು ಹಳೇ ಪಿಂಚಣಿ ಸೌಲಭ್ಯವನ್ನು ರದ್ದುಗೊಳಿಸಿದ್ದು, ಇದರಿಂದ ಸರ್ಕಾರಿ ನೌಕರರ ನಿವೃತ್ತಿ ಬದುಕು ಕಷ್ಟಕರವಾಗಲಿದೆ. ಕೂಡಲೇ ಹಳೇ ನಿಶ್ಚಿತ ಪಿಂಚಣಿ ಸೌಲಭ್ಯವನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಧಾರವಾಡ ಜಿಲ್ಲಾ ಅನುದಾನಿತ ಶಾಲಾ ಕಾಲೇಜು ನೌಕರರ ಸಂಘದಿಂದ ಪತ್ರ ಚಳವಳಿ ನಡೆಸ ಲಾಯಿತು.ನಗರದ ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಪದವಿಪೂರ್ವ ಕಾಲೇಜಿನಲ್ಲಿ ವಿವಿಧ ಕಾಲೇಜುಗಳ ನೌಕರರು ಮುಖ್ಯಮಂತ್ರಿಗೆ ಪತ್ರ ಬರೆಯುವ ಮೂಲಕ ಹಳೇ ಪಿಂಚಣಿ ಸೌಲಭ್ಯ ಜಾರಿಗೆ ಒತ್ತಾಯಿಸಿದರು.

ಹಳೆಯ ಪಿಂಚಣಿ ಸೌಲಭ್ಯವನ್ನು ಜಾರಿಗೆ ಒತ್ತಾಯಿಸಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ. ಅಧಿಕಾರಕ್ಕೆ ಬಂದರೆ ಈ ಸೌಲಭ್ಯವನ್ನು ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ಸರ್ಕಾರವು ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಎಚ್.ವಿ.ಬೆಳಗಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧಾರವಾಡ ಜಿಲ್ಲಾ ನೌಕರರ ಸಂಘದ ಮುಖಂಡರಾದ ಬಸವರಾಜ ದಳವಾಯಿ, ಅಶೋಕ ಗಡಾದ, ಚೇತನ ಹೊಸಮನಿ, ಕರಿಯಪ್ಪ ಕುರಿ, ಕವಿತಾ ಬೆಲೇರಿ, ನಾಗವೀಣಿ ಹಾದಿಮನಿ, ಸುಮಾ ನಾಯ್ಕರ, ಪಾರ್ವತಿ ಕುಲ್ಲೂಳ್ಳಿ, ಯೋಗಿತಾ ಹೆಗಡೆ, ಪುಸ್ಪಲತಾ ನರೇಂದ್ರ, ಸುಪ್ರೀತಾ ಜಗಾಪುರ, ಯಶೋದಾ ತಾಂಬೆ, ಬಸವರಾಜ ದೇವರಮನಿ ಮುಂತಾದವರು ಪತ್ರ ಚಳವಳಿಯಲ್ಲಿ ಭಾಗವಹಿಸಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk