ಧಾರವಾಡ –
ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-23 ರ ನಾಮಪತ್ರ ಸಲ್ಲಿಕೆ ಆರಂಭ ಗೊಂಡಿದ್ದು ಮೊದಲ ದಿನ ಧಾರವಾಡ ಜಿಲ್ಲೆಯಲ್ಲಿ ಒಟ್ಟು 7 ನಾಮಪತ್ರಗಳು ಸಲ್ಲಿಕೆಯಾಗಿವೆ. ಧಾರವಾಡ ಜಿಲ್ಲೆಯ ವಿವಿಧ ವಿಧಾನಸಭಾ ಮತಕ್ಷೇತ್ರದಲ್ಲಿ ನಾಮತ್ರ ಸಲ್ಲಿಕೆಯ ಮೊದಲ ದಿನ ಒಟ್ಟು 7 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಕರ್ನಾಟಕ ವಿಧಾಸಭೆಗೆ ಸಾರ್ವತ್ರಿಕ ಚುನಾವಣೆ ಗಳು ಘೋಷಣೆಯಾಗಿದ್ದು ನಾಮಪತ್ರ ಸಲ್ಲಕೆಯ ಮೊದಲ ದಿನವಾದ ಇಂದು ಕುಂದಗೋಳ 1, ಧಾರವಾಡ 3, ಹುಬ್ಬಳ್ಳಿ ಧಾರವಾಡ ಪೂರ್ವ 1 ಮತ್ತು ಹುಬ್ಬಳ್ಳಿ ಧಾರವಾಡ ಪಶ್ಚಿಮ ಮತಕ್ಷೇತ್ರಕ್ಕೆ 2 ಸೇರಿ ಒಟ್ಟು 7 ನಾಮಪತ್ರಗಳು ಸಲ್ಲಿಕ ಆಗಿವೆ
ಕುಂದಗೋಳ- 70 ವಿಧಾನಸಾಭಾ ಮತಕ್ಷೇತ್ರಕ್ಕೆ ಶಿವಾನಂದ ಹಣಮಂತಪ್ಪ ಮುತ್ತಣ್ಣವರ (ಭಾ.ಜ.ಪಾ)ಹುಬ್ಬಳ್ಳಿ ಧಾರವಾಡ ಪೂರ್ವ-72 ವಿಧಾನಸಭಾ ಮತಕ್ಷೇತ್ರಕ್ಕೆ ವೀರಭದ್ರಪ್ಪ ಹಾಲಹರವಿ(ಜನತಾದಳ (ಜ್ಯಾತ್ಯಾತೀತ) ಹುಬ್ಬಳ್ಳಿ ಧಾರವಾಡ ಪಶ್ಚಿಮ-74 ವಿಧಾನಸಭಾ ಮತ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ರೊಟ್ಟಗವಾಡ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ) ಅವರು ಎರಡು ನಾಮತ್ರಗಳನ್ನು ಮತ್ತು ಧಾರವಾಡ-71 ವಿಧಾನಸಭಾ ಮತಕ್ಷೇತ್ರಕ್ಕೆ ಅಮೃತ ಅಯ್ಯಪ್ಪ ದೇಸಾಯಿ( ಭಾ.ಜ.ಪಾ)ಮಧುಲತಾ ಗೌಡರ (ಪಕ್ಷೇತರ), ಸಿದ್ದಲಿಂಗೇಶ್ವರ ಬಾಗೂರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ) ಅವರು ನಾಮಪತ್ರ ಸಲ್ಲಿಸಿದ್ದಾರೆ
ಸುದ್ದಿ ಸಂತೆ ನ್ಯೂಸ್ ಧಾರವಾಡ…..