ಹುಬ್ಬಳ್ಳಿ –
ಧ್ವಜಾರೋಹಣಕ್ಕೆ ಚಕ್ಕರ್ ಪೈಲ್ ಸಹಿ ಮಾಡಿಸಿಕೊಳ್ಳಲು ಹಾಜರ್ – ದೇಶಭಿಮಾನಕ್ಕಿಂದ ಪೈಲ್ ಗಳೇ ಮಹತ್ವವಾದವು ಈ ಅಧಿಕಾರಿಗಳಿಗೆ….. ಪಾಲಿಕೆಯ ಧ್ವಜಾರೋಹಣಕ್ಕೆ ಯಾರು ಯಾರು ಚಕ್ಕರ್ ಹೊಡೆದಿದ್ದಾರೆ ಗೊತ್ತಾ…..
ದೇಶದ ಎಲ್ಲೇಡೆ 76ನೇ ಗಣರಾಜ್ಯೋತ್ಸವ ಸಡಗರ ಸಂಭ್ರಮ ಮನೆ ಮಾಡಿದ್ದು ಇನ್ನೂ ವಾಣಿಜ್ಯ ನಗರಿ ಹುಬ್ಬಳ್ಳಿ ಯಲ್ಲೂ ಕೂಡಾ ಆಚರಣೆ ಕಂಡು ಬರುತ್ತಿದ್ದು ರಾಜ್ಯದ ಎರಡನೇ ದೊಡ್ಡ ಮಹಾನಗರ ಪಾಲಿಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲೂ ಈ ಒಂದು ಗಣರಾಜ್ಯೋತ್ಸವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ನಗರದ ರಾಣಿ ಚೆನ್ನಮ್ಮ ಮೈದಾನದಲ್ಲಿ ಪಾಲಿಕೆಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತ್ತು.ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯವರು ಧ್ವಜಾರೋಹಣವನ್ನು ಮಾಡಿ ದರು.ಇದೇ ವೇಳೆ ಪಾಲಿಕೆಯ ಮುಖ್ಯಲೆಕ್ಕಾಧಿಕಾರಿ ವಿಶ್ವನಾಥ,ವಿಜಯಕುಮಾರ,ಸೇರಿದಂತೆ ಪಾಲಿಕೆಯ ಸದಸ್ಯರು ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿ ದ್ದರು
ಇದು ಒಂದು ವಿಚಾರವಾದರೆ ಇನ್ನೂ ಈ ಒಂದು ಮಹಾನ್ ಕಾರ್ಯಕ್ರಮದಲ್ಲಿ ಪಾಲಿಕೆಯ ಕೆಲ ಅಧಿಕಾರಿಗಳು ಗೈರಾಗಿದ್ದು ಕಂಡು ಬಂದಿತು.ಇದೊಂದು ರಾಷ್ಟ್ರೀಯ ಹಬ್ಬ ಮಹತ್ವದ ಕಾರ್ಯಕ್ರಮ ಅಂತಾ ಗೊತ್ತಿದ್ದರೂ ಕೂಡಾ ಗೈರಾಗಿರುವ ಅಧಿಕಾರಿಗಳು ಅತ್ತ ಆಯುಕ್ತರ ಮನೆಯಲ್ಲಿ ಪೈಲ್ ಗಳನ್ನು ಹಿಡಿದುಕೊಂಡು ಹಾಜರಾಗಿದ್ದು ಕಂಡು ಬಂದಿತು.ಪಾಲಿಕೆಯ ಉತ್ತರ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರಾದ ವಿಠ್ಠಲ ತುಬಾಕೆ ಸೇರಿದಂತೆ ಹಲವರು ಪಾಲಿಕೆಯ ಆಯುಕ್ತರಾಗಿದ್ದ ಡಾ ಈಶ್ವರ ಉಳ್ಳಾಗಡ್ಡಿಯವರು ವರ್ಗಾವಣೆ ವಿಚಾರ ತಿಳಿದು ಸಹಿ ಮಾಡಿಸಿಕೊಳ್ಳಲು ಬಂದಿದ್ದು ಕಂಡು ಬಂದಿತು.
ಆಯುಕ್ತರ ಗೃಹ ಕಚೇರಿಯಲ್ಲಿ ಕೈಯಲ್ಲಿ ಒಂದಿಷ್ಟು ಪೈಲ್ ಗಳನ್ನು ಹಿಡಿದುಕೊಂಡು ಪೈಲ್ ಗಳಿಗೆ ಸಹಿ ಮಾಡಿಸಿಕೊಳ್ಳಲು ಬಂದಿದ್ದು ಕೆಲವರ ಆಕ್ರೋಶಕ್ಕೆ ಕಾರಣವಾಯಿತು.ಧ್ವಜಾರೋಹಣಕ್ಕೆ ಬಾರದವರು ಪೈಲ್ ಗಳನ್ನು ಹಿಡಿದುಕೊಂಡು ಹೇಗೆ ಬಂದಿದ್ದಾರೆ ನೋಡಿ ಎನ್ನುವ ಮಾತುಗಳು ಕೇಳಿ ಬಂದವು.ಯಾರು ಹೇಳುವವರು ಕೇಳುವವರು ಇಲ್ಲದಂತಾಗಿದ್ದು ದೇಶಾಭಿಮಾನಕ್ಕಿಂತ ಪೈಲ್ ಗಳೇ ಅವರಿಗೆ ಮಹತ್ವ ಆದವು ಎಂಬೊದು ಇದರಿಂದ ಕಂಡು ಬಂದಿದ್ದು ಜಿಲ್ಲಾಧಿಕಾರಿಗಳು ಈ ಒಂದು ವಿಚಾರವನ್ನು ಗಂಭೀರ ವಾಗಿ ತಗೆದುಕೊಂಡು ಇಂತಹ ಅಧಿಕಾರಿಗಳ ಮೇಲೆ ಕ್ರಮವನ್ನು ಕೈಗೊಳ್ಳೊವುದು ಅವಶ್ಯಕವಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..