ಧಾರವಾಡ –
ಧಾರವಾಡದಲ್ಲಿ ಅರ್ಥಪೂರ್ಣವಾಗಿ ಇಂದಿರಾ ಗಾಂಧಿಯವರ ಜನ್ಮ ದಿನ ಆಚರಣೆ – ರಾಬರ್ಟ್ ದದ್ದಪೂರಿ ನೇತ್ರತ್ವದಲ್ಲಿ ಮಹಿಳೆಯರಿಗೆ ಸೀರೆ ನೀಡಿ ಗೌರವ ಬಸವರಾಜ ಗುರಿಕಾರ ಸೇರಿದಂತೆ ಹಲವರು ಉಪಸ್ಥಿತಿ ಹೌದು
ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯ ವರ ಜನ್ಮ ದಿನಾಚರಣೆಯನ್ನು ಧಾರವಾಡದಲ್ಲೂ ವಿಶೇಷವಾಗಿ ಆಚರಣೆ ಮಾಡಲಾಯಿತು.ಹೌದು ನಗರದ ನೌಕರರ ಭವನದಲ್ಲಿ ದಿವಂಗತ ಪ್ರಧಾನಿ ಭಾರತರತ್ನ ಶ್ರೀಮತಿ ಇಂದಿರಾಗಾಂಧಿಯವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.ಬಡ ಹೆಣ್ಣು ಮಕ್ಕಳಿಗೆ ಸೀರೆ ಹಾಗೂ ಸಿಹಿಯನ್ನು ವಿತರಿಸುವ ಮೂಲಕ ಆಚರಿಸಲಾಯಿತು.
ಕೆಪಿಸಿಸಿ ಸದಸ್ಯರಾದ ರಾಬರ್ಟ್ ದದ್ದಾಪುರಿ ನೇತ್ರತ್ವದಲ್ಲಿ ಈ ಒಂದು ಕಾರ್ಯಕ್ರಮವೂ ನಡೆಯಿತು.ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಶಿಕ್ಷಕರ ಘಟಕದ ಅಧ್ಯಕ್ಷರಾದ ಬಸವರಾಜ್ ಗುರಿಕಾರ್ ಆಗಮಿಸಿದ್ದರು.ಆನಂದ್ ಜಾದವ್ ಶ್ರೀಮತಿ ಪ್ರಭಾವತಿ ಒಡ್ಡಿನ್ ಜೇಮ್ಸ್ ಯಾಮಾ ಶ್ರೀಮತಿ ಗೀತಾ ತಾವುಸಿ ಪ್ರಕಾಶ್ ದೊಡ್ಡವಾಡ ಗಿರಿಯಣ್ಣವರ್ ಬಿಎಚ್ ಪೂಜಾರ್ ಮುಂತಾದ ವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..