ಧಾರವಾಡ –
ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಳೆ ಬಿಜೆಪಿ ಪಕ್ಷದ ಸಂಕಲ್ಪ ಸಭೆ ನಡೆಯಲಿದ್ದು ನಗರದ ಹೊರವಲಯದ ಸಾಯಿ ಅರಣ್ಯ ಸಭಾಂಗಣದಲ್ಲಿ ಈ ಒಂದು ಯಾತ್ರೆ ನಡೆ ಯಲಿದ್ದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಅರುಣ್ ಸಿಂಗ್ ರಾಜ್ಯ ಪ್ರಧಾನ ಕಾರ್ಯ ದರ್ಶಿ ಮಹೇಶ್ ತೆಂಗಿನಕಾಯಿ ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಪಕ್ಷದ ಹಲವು ನಾಯಕರು ಈ ಒಂದು ಸಭೆಯಲ್ಲಿ ಪಾಲ್ಗೊಳ್ಳಲಿದ್ದು
ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕ ಯುವ ಉತ್ಸಾಹಿ ಅಭಿವೃದ್ದಿ ಹರಿಕಾರ ಅಮೃತ ದೇಸಾಯಿ ಅವರ ನೇತ್ರತ್ವದಲ್ಲಿ ಈ ಒಂದು ಸಭೆ ನಡೆಯಲಿದ್ದು ಪ್ರಮುಖವಾಗಿ ಈ ಒಂದು ಸಭೆಯಲ್ಲಿ ಶಾಸಕರು ಮಾಡಿದ ಕೆಲಸ ಕಾರ್ಯಗಳನ್ನು ಪಕ್ಷದ ಅಭಿವೃದ್ದಿಯನ್ನು ಮತ ದಾರರ ಮುಂದೆ ಅರುಣ್ ಸಿಂಗ್ ಸೇರಿದಂತೆ ಹಲವು ನಾಯಕರು ಮುಂದಡಲಿದ್ದು ಸಭೆಗಾಗಿ ಈಗಾಗಲೇ ಎಲ್ಲಾ ಸಿದ್ದತೆಗಳು ಪೂರ್ಣಗೊಂ ಡಿದ್ದು ಇದಕ್ಕಾಗಿ ಸಾಯಿ ಅರಣ್ಯ ಹೊಟೇಲ್ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದ್ದು
ಕಾರ್ಯಕ್ರಮದ ಹಿನ್ನಲೆಯಲ್ಲಿ ಶಾಸಕ ಅಮೃತ ದೇಸಾಯಿ ಸಿದ್ದತೆಗಳನ್ನು ಪರಿಶೀಲನೆ ಮಾಡಿದರು ಕೆಎಮ್ ಎಫ್ ಅಧ್ಯಕ್ಷ ಶಂಕರ ಮುಗದ, ಸಂಗನ ಗೌಡ ರಾಮನಗೌಡರ,ರುದ್ರಪ್ಪ ಹರಿವಾಳ,ಟಿ ಪಿ ಪಾಟೀಲ,ಸಾಂಬಾಜೀ ಮಾನೆ, ಪ್ರಣೀತ ರಾಮನ ಗೌಡರ,ಸುನೀಲ ಮೊರೆ,ಶ್ರೀನಿವಾಸ ಕೋಟ್ಯಾನ, ಸೇರಿದಂತೆ ಪಕ್ಷದ ಗ್ರಾಮೀಣ ಘಟಕದ ಮುಖಂ ಡರು ನಾಯಕರು ಉಪಸ್ಥಿತರಿದ್ದರು.