ನವಲಗುಂದ –
ರೈತರಿಂದಲೇ ಚಕ್ಕಡಿ ದಾರಿ ನವೀಕರಣಕ್ಕೆ ಗುದ್ದಲಿ ಪೂಜೆ ಮಾಡಿಸಿದ ಶಾಸಕ ಎನ್ ಹೆಚ್ ಕೋನರಡ್ಡಿ ಕ್ಷೇತ್ರದಲ್ಲಿ ಮುಂದುವರೆದ ಅಭಿವೃದ್ದಿ ಕಾಮಗಾರಿ ಗಳು.ಹೌದು ಧಾರವಾಡ ಜಿಲ್ಲೆಯ ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕಾಮಗಾರಿಗ ಳಿಗೆ ಭೂಮಿ ಪೂಜಾ ಕಾರ್ಯಕ್ರಮಗಳು ಮುಂದುವರೆದಿವೆ.
ಹೌದು ಕ್ಷೇತ್ರದಲ್ಲಿದ್ದುಕೊಂಡು ಬೇರೆ ಬೇರೆ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಎನ್ ಹೆಚ್ ಕೋನರಡ್ಡಿಯವರು ಚಾಲನೆ ನೀಡುತ್ತಿದ್ದು ಮತ್ತೊಂದೆಡೆ ಭೂಮಿ ಪೂಜಾ ಕಾರ್ಯಕ್ರಮಗ ಳನ್ನು ಮಾಡುತ್ತಿದ್ದಾರೆ.ಇನ್ನೂ ಕ್ಷೇತ್ರದಲ್ಲಿ ನವಲ ಗುಂದ ವಿಧಾನಸಭಾ ಮತಕ್ಷೇತ್ರದ ನವಲಗುಂದ ತಾಲೂಕಿನ ಗೊಬ್ಬರಗುಂಪಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.
ಗ್ರಾಮದಲ್ಲಿ ಒಂದಿಷ್ಟು ಸುತ್ತಾಡಿದ ಶಾಸಕರು ಜನರೊಂದಿಗೆ ಮಾತನಾಡುತ್ತಾ ಒಂದು ರೌಂಡ್ ಹಾಕಿದರು ನಂತರ ಸಮಸ್ಯೆಗಳನ್ನು ಆಲಿಸಿದರು ಇದೇ ವೇಳೆ ಗ್ರಾಮದಲ್ಲಿನ ಗೊಬ್ಬರಗುಂಪಿ ನರಗುಂದ ಚಕ್ಕಡಿ ದಾರಿಯ ನವೀಕರಣಕ್ಕಾಗಿ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಇದು ರೈತರಿಗಾಗಿ ಕಾರ್ಯಕ್ರಮವಾಗಿದ್ದು ಹೀಗಾಗಿ ಶಾಸಕರು ರೈತರಿಂದಲೇ ಈ ಒಂದು ರಸ್ತೆಗೆ ಭೂಮಿ ಪೂಜೆಯನ್ನು ಮಾಡಿಸಿದರು. ಈ ಸಂದರ್ಭದಲ್ಲಿ ಗ್ರಾಮದ ರೈತರು ಹಿರಿಯರು, ಯುವಕ ಅಭಿಮಾನಿಗಳು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ನವಲಗುಂದ…..