LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸಾರ್ವತ್ರಿಕ ರಜೆ ನೀಡಲು ಮನವಿ - ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಮನವಿ ಸಲ್ಲಿಕೆ.....

ಉಡುಪಿ -

ಕರಾವಳಿಯ ಕ್ರೈಸ್ತರು ಸೆ.8ರಂದು ಆಚರಿಸುವ ಮೇರಿ ಮಾತೆಯ ಜನ್ಮದಿನವಾದ ಮೊಂತಿ ಫೆಸ್ಟ್​ (ತೆನೆ ಹಬ್ಬ)ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಲೆ ಗಳಿಗೆ ಸಾರ್ವತ್ರಿಕ ರಜೆ ಘೋಷಸುವಂತೆ ಕಥೊಲಿಕ್​ ಸಭಾ ಮಂಗಳೂರು ಮತ್ತು ಉಡುಪಿ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದೆ.ವಿಧಾನ ಪರಿಷತ್​ ಸದಸ್ಯ ಐವನ್​ ಡಿಸೋಜ ನೇತೃತ್ವದ ನಿಯೋಗವು ಆರೋಗ್ಯ ಸಚಿವ, ಮಂಗಳೂರು ಜಿಲ್ಲಾ ಉಸ್ತುವಾರಿ ಯು.ಟಿ. ಖಾದರ್​ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್​ ಅವರನ್ನು ಭೇಟಿ ಯಾಗಿ ಮನವಿ ಸಲ್ಲಿಸಿತು.

ಕರಾವಳಿಯೂ ಸೇರಿದಂತೆ ರಾಜ್ಯದೆಲ್ಲಡೆ ಕ್ರೈಸ್ತರು ಪ್ರತಿವರ್ಷ ಸೆ.8ರಂದು ನೂರಾರು ವರ್ಷದಿಂದ ಕುಟುಂಬ ಹಬ್ಬದ ವಿಶೇಷ ದಿನವನ್ನಾಗಿ ಆಚರಿಸುತ್ತ ಬಂದಿದ್ದಾರೆ. ಈ ದಿನವು ದೇವಮಾತೆ ಕನ್ಯಾಮರಿಯ ಮ್ಮಳ ಜನ್ಮದಿನವಾಗಿದೆ ಇದೇ ದಿನದಂದು ತೆನೆ ಹಬ್ಬ ಆಚರಿಸುತ್ತೇವೆ.

ರೈತರು ಬೆಳೆದ ಹೊಸ ಫಸಲನ್ನು ದೇವರಿಗೆ ಅರ್ಪಿಸಿ, ದೇವಾಲಯಗಳಲ್ಲಿ ಪೂಜಾವಿಧಿ ನೆರವೇರಿಸಿ ಕುಟುಂಬದವರೊಂದಿಗೆ ಭೋಜನ ಮಾಡಿ ಸಂಭ್ರಮಿಸಲಾಗುತ್ತದೆ. ಹೀಗಾಗಿ ವಿಶೇಷ ದಿನದ ನಿಮಿತ್ತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜಾ ನೀಡುವಂತೆ ಮನವಿ ಸಲ್ಲಿಸಿದರು

ನಿಯೋಗದಲ್ಲಿ ಕಥೊಲಿಕ್​ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷ ಸಂತೋಷ್​ ಡಿಸೋಜ, ಉಪಾಧ್ಯಕ್ಷ ಸ್ಟೀವನ್​ ರೊಡ್ರಿಗಸ್​, ರಾಜಕೀಯ ಸಂಚಾಲಕ ಸ್ಟ್ಯಾನಿ ಲೋಬೊ, ಉಡುಪಿ ಅಧ್ಯಕ್ಷ ಮೆಲ್ವಿನ್​ ಆರಾನ್ಹಾ ಶಿರ್ವ, ಕಾರ್ಯದರ್ಶಿ ಜೂಲಿಯೆಟ್​ ಡಿಸೋಜ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಉಡುಪಿ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲೆಯಲ್ಲಿ ಹೊಸ ಪ್ರಯೋಗ ದೊಂದಿಗೆ ಬೋಧನೆ - ಸರ್ಕಾರಿ ಶಾಲಾ ಶಿಕ್ಷಕರ ಹೊಸ ಬೋಧನಾ ಕಾರ್ಯಕ್ಕೆ ಮೆಚ್ಚುಗೆ..‌.......ಸಾರ್ವತ್ರಿಕ ರಜೆ ನೀಡಲು ಮನವಿ - ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಮನವಿ ಸಲ್ಲಿಕೆ.....ಆತ್ಮಹತ್ಯೆ ಗೆ ಮಾಡಿಕೊಳ್ಳಲು ಕಾಲುವೆಗೆ ಹಾರಿದ BEO ಕಚೇರಿ ಆಧೀಕ್ಷಕ - ಪತ್ರ ಬರೆದಿಟ್ಟು ಆತ್ಮಹತ್ಯೆ ಗೆ ಯತ್ನ.....ಮಂಜುನಾಥ ನಿಗಾಗಿ ಪೊಲೀಸರ ಹುಡುಕಾಟ.....ಈದ್ ಮಿಲಾದ್ ಆಗಸ್ಟ್.26ರಂದು ರಾಜ್ಯಾಧ್ಯಂತ 'ಸಾರ್ವತ್ರಿಕ ರಜೆ' ಘೋಷಣೆ.....ನಿರಂತರ ಹಾಜರಾತಿ ನಿಲ್ಲಿಸಿ ಹಳೆಯ ಹಾಜರಾತಿ ಮುಂದುವರೆಸಿ ಪವಾಡೆಪ್ಪ ಆಗ್ರಹ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ದ್ವನಿ ಎತ್ತಿದ ರಾಜ್ಯಾಧ್ಯಕ್ಷ ಪವಾಡೆಪ್ಪ.....ಜ್ವರ ಅಂತಾ ಬಿಡಲಿಲ್ಲ ಸಂಡೆ ಅಂತಾ ಮನೆ ಹಿಡಿಲಿಲ್ಲಾ ಫುಲ್ ಡೂಟಿ ಮಾಡಿದ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ ಅನಾರೋಗ್ಯದ ನಡುವೆ ಕರ್ತವ್ಯ ಮಾಡಿ ಮಾದರಿಯಾದ ಪಾಲಿಕೆಯ ಆಯುಕ್ತರು.....500 ವರ್ಷಗಳ ಇತಿಹಾಸದ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ ಮಾಡಿದ ಸುರೇಶ ಗೋಕಾಕ್ ಟೀಮ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಅರ್ಥಪೂರ್ಣ ಕಾರ್ಯಕ್ರಮ..... ಸುರೇಶ ಗೋಕಾಕ್ ಗೆ ಸಾಥ್ ನೀಡಿದ ನೂರಾರು ಯುವಕರು......ಶಾಂತಿನಿಕೇತನ ಕಾಲೋನಿಯ 362 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಿದ ಶಾಸಕ ಪ್ರಸಾದ್ ಅಬ್ಬಯ್ಯ ನೂರಾರು ವರ್ಷಗಳಿಂದ ಸ್ವಂತ ಮನೆಗಾಗಿ ಕಾಯುತ್ತಿದ್ದ ಕುಟುಂಬಗಳಿಗೆ ಆಸರೆಯಾದ ಶಾಸಕ ಪ್ರಸಾದ್ ಅಬ್ಬಯ್ಯ.....ಸಂಜಯ ಮಿಶ್ರಾ ಅವರ ತಾಯಿ ರಾಜಕುಮಾರಿ ಗಣೇಶ ಮಿಶ್ರಾ ನಿಧನ ಸಂಜಯ ಮಿಶ್ರಾ ಕುಟುಂಬಕ್ಕೆ ತುಂಬಲಾರದ ನಷ್ಟ – ಕಂಬನಿ ಮಿಡಿದ ಆಪ್ತರು ಹಾಗೂ ಸಂಸ್ಥೆಯ ಸಿಬ್ಬಂದಿಗಳು.....ಶಿಕ್ಷಕರ ನೇಮಕಾತಿ ಪರೀಕ್ಷೆ ಮೊದಲ ಬಾರಿಗೆ ಹೊಸ ಪ್ರಯೋಗ - ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಹೊಸ ಹೆಜ್ಜೆ.....