ಬೆಂಗಳೂರು
ರಾಜ್ಯದ ಎಲ್ಲಾ ಶಾಲೆಗಳಲ್ಲಿ 1ರಿಂದ 12ನೇ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಆರಂಭಿಕ ಹಂತದಲ್ಲೇ ಗುರುತಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದೆ
ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ವಿವಿಧ ರೀತಿಯ ಕಲಿಕಾ ನ್ಯೂನತೆಗಳು,ದೈಹಿಕ ಅಥವಾ ಮಾನಸಿಕ ವಿಶೇಷ ಅಗತ್ಯಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಆ ಮಕ್ಕಳಿಗೆ ಸಕಾಲದಲ್ಲಿ ಕಲಿಕಾ ನೆರವು, ಸೂಕ್ತ ಶೈಕ್ಷಣಿಕ ಮಧ್ಯಪ್ರವೇಶ, ವೈದ್ಯಕೀಯ ಸಹಕಾರ ಹಾಗೂ ಸರಕಾರದ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯದಲ್ಲಿ ವಿಶೇಷ ಗಮನ ಹರಿಸಬೇಕಾದ ಮಕ್ಕಳನ್ನು ಗುರುತಿ ಸುತ್ತಿದೆ.
ಕೇಂದ್ರ ಸರಕಾರ ಅಭಿವೃದ್ಧಿ ಪಡಿಸಿರುವ "ಪ್ರಶಸ್ತ್ 2.0' ಮೊಬೈಲ್ ಅಪ್ಲಿಕೇಶನ್ ಮೂಲಕ ಮಕ್ಕಳ ಸಾರ್ವತ್ರಿಕ ಸ್ಕ್ರೀನಿಂಗ್ ನಡೆಯಲಿದೆ. ಸರಕಾರಿ, ಅನುದಾನಿತ, ಸ್ಥಳೀಯ ಸಂಸ್ಥೆ, ಖಾಸಗಿ, ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ ಸೇರಿ ಎಲ್ಲ ಶಾಲೆಗಳು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಎಲ್ಲಾ ಕಾಲೇಜುಗಳು ಮತ್ತು ಮಾನ್ಯತೆ ಪಡೆದ ಶಾಲೆಗಳು ಈ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕೆಂದು ಸೂಚಿಸಲಾಗಿದೆ.
ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರಶಸ್ತ್ 2.0 ಆಯಪ್ ನಲ್ಲಿ ಲಭ್ಯವಿರುವ ಪರಿಶೀಲನಾಪಟ್ಟಿ ಆಧರಿಸಿ ತಮ್ಮ ತರಗತಿಯ ಎಲ್ಲ ವಿದ್ಯಾರ್ಥಿಗಳನ್ನು ಸೂಕ್ತ ಅವಧಿ ಯವರೆಗೆ ಗಮನಿಸಿ ಪ್ರಾಥಮಿಕ ಹಂತದ ಪರಿಶೀಲನೆ ನಡೆಸಬೇಕು. ಈ ಪರಿಶೀಲನೆಯಲ್ಲಿ ಗುರುತಿಸಲ್ಪಟ್ಟ ಮಕ್ಕಳಿಗಾಗಿ ವಿಶೇಷ ಶಿಕ್ಷಕರು ನಿರ್ದಿಷ್ಟ ಸ್ಕ್ರೀನಿಂಗ್ ಹಾಗೂ ವೈದ್ಯಕೀಯ ತಜ್ಞರ ಸಹಕಾರದೊಂದಿಗೆ ನಿಖರ ಮಾಹಿತಿ ಸಂಗ್ರಹಿಸಬೇಕು. ಆ ಬಳಿಕ ಈ ಮಕ್ಕಳಿಗೆ ಪ್ರತ್ಯೇಕ ಶೈಕ್ಷಣಿಕ ಯೋಜನೆ ಹಾಗೂ ಮೌಲ್ಯಮಾಪನ ಶಿಬಿರಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ರಾಜ್ಯದಲ್ಲಿ 1 ಕೋಟಿಗೂ ಅಧಿಕ ವಿದ್ಯಾರ್ಥಿಗಳು 1ರಿಂದ 12ನೇ ತರಗತಿ ವರೆಗೆ ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಆದರೆ ರಾಜ್ಯದಲ್ಲಿ ಒಟ್ಟು ಎಷ್ಟು ವಿಶೇಷ ಅಗತ್ಯವುಳ್ಳ ಅಥವಾ ಮಾನಸಿಕ ಕುಂಠಿತ ವಿದ್ಯಾರ್ಥಿಗಳಿದ್ದಾರೆ ಎಂಬ ನಿಖರ ಸಂಖ್ಯೆ ಸರಕಾರದ ಬಳಿಯಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂತಹ ಮಕ್ಕಳನ್ನು ಗುರುತಿಸಲು ಮತ್ತು ಕರಾರು ವಕ್ಕಾಗಿ ದಾಖಲಿಸಲು ಈ ಅಭಿಯಾನ ನೆರವಾಗಲಿದೆ ಎಂದು ಶಿಕ್ಷಣ ಇಲಾಖೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳ ನಿಖರ ಸಂಖ್ಯೆ ಮತ್ತು ಅವರು ಎದುರಿಸು ತ್ತಿರುವ ಸಮಸ್ಯೆಗಳ ಮಾಹಿತಿ ಲಭ್ಯವಾದರೆ ಆ ಬಳಿಕ ನಮ್ಮ ಕಾರ್ಯಕ್ರಮಗಳನ್ನು ರೂಪಿಸಲು ನೆರವಾ ಗುತ್ತದೆ. ಆ ಮಕ್ಕಳಿಗೆ ನೀಡಬಹುದಾದ ಚಿಕಿತ್ಸೆ, ಶೈಕ್ಷಣಿಕ ನೆರವು ಮುಂತಾದವುಗಳ ಕಾರ್ಯತಂತ್ರ ಗಳನ್ನು ಸಹ ರಚಿಸಲು ಸಾಧ್ಯ ಈ ನಿಟ್ಟಿನಲ್ಲಿ ಅಭಿ ಯಾನವನ್ನು ಸಮರ್ಪಕವಾಗಿ ನಡೆಸುವಂತೆ ಶಿಕ್ಷಕರು, ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಧಿಕಾರಿ ಗಳು ಹೇಳುತ್ತಾರೆ.
ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರುತಿಸಲು ಪ್ರತಿಯೊಬ್ಬ ಶಿಕ್ಷಕರಿಗೂ ದಿಕ್ಷಾ ಪೋರ್ಟಲ್ ಅಥವಾ ಪ್ರಶಸ್ತ್ ಪೋರ್ಟಲ್ ಮೂಲಕ ಜಾಗೃತಿ ಮತ್ತು ತರಬೇತಿ ನೀಡಿದ್ದೇವೆ. ಈ ಅಭಿಯಾನ ಪೂರ್ಣ ಗೊಂಡ ಎಷ್ಟು ಮಕ್ಕಳಿಗೆ ವಿಶೇಷ ನೆರವಿನ ಅಗತ್ಯವಿದೆ ಎಂಬ ನಿಖರ ಮಾಹಿತಿ ಲಭ್ಯವಾಗಲಿದೆ. ಕಾಲಮಿತಿ ಯೊಳಗೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿದ್ದೇವೆ. ಎನ್ನುತ್ತಾರೆ ಸಮಗ್ರ ಶಿಕ್ಷಣ ಕರ್ನಾಟಕ ಇಲಾಖೆ ರಾಜ್ಯ ಯೋಜನಾ ನಿರ್ದೇಶಕಿ ವಿದ್ಯಾಕುಮಾರಿ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....