LIVE TV LocalCrimeNationalInternationalPoliticsEducationTechnologyEntertainmentSportsFeature
State News

ನಾಗರ ಪಂಚಮಿ ಶಾಲಾ-ಕಾಲೇಜುಗಳಿಗೆ ಸರ್ಕಾರಿ ರಜೆ ಇದೆಯೇ.....ಇಲ್ವಾ ಮಾಹಿತಿ ಇಲ್ಲಿದೆ.....ಗೊಂದಲಗಳಿಗೆ ಕಂಪ್ಲೀಟ್ ಮಾಹಿತಿ.....

ಬೆಂಗಳೂರು -

ನಾಡಿನೆಲ್ಲೇಡೆ ಸಧ್ಯ ಶ್ರಾವಣ ಮಾಸ ಆರಂಭವಾಗಿದ್ದು ಹೀಗಿರುವಾಗ ಶ್ರಾವಣ ಮಾಸದ ಅತ್ಯಂತ ಪವಿತ್ರ ಹಾಗೂ ಮಹತ್ವದ ಹಬ್ಬಗಳಲ್ಲಿ ಒಂದಾದ 'ನಾಗ ಪಂಚಮಿ' ಯನ್ನು ಆಗಸ್ಟ್ 17, ಸೋಮವಾರದಂದು ನಾಡಿನೆಲ್ಲೆಡೆ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ಭಕ್ತರು ನಾಗರ ಕಲ್ಲುಗಳಿಗೆ ಹಾಗೂ ಹಾವಿನ ಹುತ್ತಗಳಿಗೆ ಹಾಲಿನ ಅಭಿಷೇಕ ಮಾಡಿ ನಾಗದೋಷ ನಿವಾರಣೆಗಾಗಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸುವುದು ಸಂಪ್ರದಾಯ.

ಈ ನಡುವೆ ಸೋಮವಾರ ಹಬ್ಬದ ಆಚರಣೆ ಇರು ವುದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ 'ಶಾಲೆ-ಕಾಲೇಜುಗಳಿಗೆ ರಜೆ ಇರುತ್ತದೆಯೇ?' ಎಂಬ ಪ್ರಶ್ನೆ ಮತ್ತು ಗೊಂದಲಗಳು ಮೂಡುವುದು ಸಹಜ. ಅದಕ್ಕೆ ಸಂಬಂಧಿಸಿದ ಸ್ಪಷ್ಟ ಮಾಹಿತಿ ಇಲ್ಲಿದೆ.

ಪೂಜಾ ಮುಹೂರ್ತ ಮತ್ತು ತಿಥಿ ಈ ಬಾರಿ ಪಂಚಮಿ ತಿಥಿಯು ಆಗಸ್ಟ್ 16ರ ಸಂಜೆಯಿಂದ ಆರಂಭವಾಗಿ ಆಗಸ್ಟ್ 17ರ ಸಂಜೆಯವರೆಗೆ ಇರಲಿದೆ. ಪಂಚಾಂಗ ಗಳ ಪ್ರಕಾರ, ಆಗಸ್ಟ್ 17ರ ಬೆಳಿಗ್ಗೆ 5:51 ರಿಂದ 8:30 ರವರೆಗಿನ ಸಮಯವನ್ನು ಪೂಜೆ ಸಲ್ಲಿಸಲು ಅತ್ಯಂತ ಶುಭ ಮುಹೂರ್ತವಾಗಿದೆ.

ಕರ್ನಾಟಕದಲ್ಲಿ ಶಾಲೆಗಳಿಗೆ ರಜೆ ಇದೆಯೇ?
ಕರ್ನಾಟಕ ಸರ್ಕಾರದ ಅಧಿಕೃತ ಸಾರ್ವಜನಿಕ ರಜೆಗಳ ಪಟ್ಟಿಯಲ್ಲಿ ನಾಗಪಂಚಮಿಗೆ ಸಾರ್ವತ್ರಿಕ ರಜೆ ಘೋಷಿಸಲಾಗಿಲ್ಲ. ಹೀಗಾಗಿ, ರಾಜ್ಯದಾದ್ಯಂತ ಸರ್ಕಾರಿ ಹಾಗೂ ಖಾಸಗಿ ಶಾಲೆ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದಾಗ್ಯೂ, ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಅಥವಾ ಸ್ಥಳೀಯ ಆಡಳಿತ ಮಂಡಳಿಗಳು ತಮ್ಮ ಹಂತದಲ್ಲಿ ಐಚ್ಛಿಕ ರಜೆ ನೀಡುವ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ರಾಜ್ಯಾದ್ಯಂತ ಯಾವುದೇ ಅಧಿಕೃತ ರಜೆ ಇರುವುದಿಲ್ಲ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ನೌಕರ ರೋಹನ್ ನಾಪತ್ತೆ - ಹದಿನೈದು ದಿನ ಕಳೆದರು ಸಿಗದ ಸುಳಿವು.....ಜನಸೇವಕನ ಚಕ್ಕಡಿ ರಸ್ತೆಗೆ ಡಾಂಬರೀಕರಣದ ಭರವಸೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ - ಜನಸೇವಕನ ಕನಸಿನ ಚಕ್ಕಡಿ ರಸ್ತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು.....ನಾಗರ ಪಂಚಮಿ ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಯಲ್ಲಿ ರಜೆ ಘೋಷಣೆ - ಸರ್ಕಾರಿ ರಜೆ ಘೋಷಣೆ ಮಾಡಿದ DC.....ನಾಗರ ಪಂಚಮಿ ಶಾಲಾ-ಕಾಲೇಜುಗಳಿಗೆ ಸರ್ಕಾರಿ ರಜೆ ಇದೆಯೇ.....ಇಲ್ವಾ ಮಾಹಿತಿ ಇಲ್ಲಿದೆ.....ಗೊಂದಲಗಳಿಗೆ ಕಂಪ್ಲೀಟ್ ಮಾಹಿತಿ.....ಮಂಜುನಾಥ ಮಕ್ಕಳಗೇರಿ ಗೆಳೆಯರ ಬಳಗದಿಂದ ಪ್ರಪ್ರಥಮ ಬಾರಿಗೆ ವಿಶೇಷ ಸ್ಪರ್ಧೆ - ಮುಳಮುತ್ತಲ ಗ್ರಾಮದಲ್ಲಿ ನಡೆಯಿತು ಸ್ಪರ್ಧೆ..... HK ಪಾಟೀಲ್ ಹುಟ್ಟು ಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ಕ್ಷೇತ್ರದ ಜನತೆಯ ಪರವಾಗಿ ಶುಭ ಹಾರೈಸಿದ ಜನಸೇವಕ.....ಅರುಣಕುಮಾರ್ ಮಜ್ಜಗಿ ಉಪಸ್ಥಿತಿ.....ರಾಜ್ಯದಲ್ಲಿ ಮತ್ತೊಂದು ಬಹುಕೋಟಿ ಹಗರಣ ಬೆಳಕಿಗೆ - ಬೆಳಕಿಗೆ ಬಂತು ಬಹುಕೋಟಿ ಹಗರಣ ದಾಖಲಾಯಿತು ದೂರು ತನಿಖೆಗೆ ಸೂಚನೆ..... ರೈತರ ಹೆಸರಿನಲ್ಲಿ ನಡೆಯಿತು ಹಗರಣ.....ಶಿಕ್ಷಕರ ನೇಮಕಾತಿ ವಯೋಮಿತಿ ಸಡಿಲಿಕೆಗೆ ಆಗ್ರಹ - ನೇಮಕಾತಿ ಅಧಿಸೂಚನೆಯ ಬೆನ್ನಲ್ಲೇ ಕೇಳಿಬಂತು ಹೊಸದೊಂದು ಬೇಡಿಕೆ.....ಗೃಹ ಸಚಿವರೇ ತಮ್ಮ ಮಕ್ಕಳನ್ನೂ RSS ಶಾಖೆಗೆ ಕಳುಹಿಸಿ ಶಾಸಕ ಮಹೇಶ್ ಟೆಂಗಿನಕಾಯಿ ಆಮಂತ್ರಣ.....ನಿಮ್ಮ ಮಕ್ಕಳಿಂದ ಸಂಘದ ಚಟುವಟಿಕೆಗಳ ಬಗ್ಗೆ ಅರಿಯಲು ಪ್ರಯತ್ನಿಸಿ ಗೃಹ ಸಚಿವರಿಗೆ ಕುಟುಕಿದ MLA ಟೆಂಗಿನಕಾಯಿ.....ಹೈಟೆಕ್‌ ಸರಕಾರಿ ಶಾಲೆ - ಶತಮಾನದ ಸರ್ಕಾರಿ ಶಾಲೆಗೆ ಆಧುನಿಕತೆಯ ಸ್ಪರ್ಶ.....